ಆ್ಯಪ್ನಗರ

ರಾಜಕೀಯವಾಗಿ ಅವರ ಪಕ್ಷದವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ? ED ಚಾರ್ಜ್‌ಶೀಟ್‌ಗೆ ಡಿಕೆ ಶಿವಕುಮಾರ್‌ ಕಿಡಿಕಿಡಿ

ಡಿಕೆ ಶಿವಕುಮಾರ್‌ ವಿರುದ್ಧ ದಿಲ್ಲಿಯ ಇಡಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಮತ್ತೆ ಸಂಕಷ್ಟ ತಲೆದೋರಿದೆ. ದಿಲ್ಲಿಯಲ್ಲಿ ಡಿಕೆ ಶಿವಕುಮಾರ್ ಅವರ ಒಡೆತನಕ್ಕೆ ಸೇರಿದ ಪ್ಲಾಟ್‌ನಲ್ಲಿ 8.5 ಕೋಟಿ ರೂ. ಬೇನಾಮಿ ಹಣ ಪತ್ತೆಯಾದ ಬಗ್ಗೆ 2019ರಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ರಾಜಕೀಯವಾಗಿ ಅವರ ಪಕ್ಷದವರನ್ನೇ ಬಿಟ್ಟಿಲ್ಲ. ನಮ್ಮನ್ನು ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.

Reported byಇರ್ಷಾದ್ ಉಪ್ಪಿನಂಗಡಿ | Edited byಅವಿನಾಶ ವಗರನಾಳ | Vijaya Karnataka Web 26 May 2022, 3:47 pm

ಹೈಲೈಟ್ಸ್‌:


  • 'ರಾಜಕೀಯವಾಗಿ ಅವರ ಪಕ್ಷದವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?'
  • 2019ರ ಪ್ರಕರಣದಲ್ಲಿ ಇಡಿ ಚಾರ್ಜ್‌ಶೀಟ್‌ಗೆ ಡಿಕೆ ಶಿವಕುಮಾರ್‌ ಕಿಡಿಕಿಡಿ
  • ʼನ್ಯಾಯ, ನೀತಿ, ಸತ್ಯ, ಧರ್ಮ, ಕಾನೂನು ಎಲ್ಲದರಲ್ಲೂ ನಂಬಿಕೆ ಇದೆʼ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web DK Shivakumar
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕುರಿತಾಗಿ ಗುರುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರ ಪಾರ್ಟಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡುತ್ತಾರಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಡಿ ಜಾರ್ಜ್ ಶೀಟ್‌ ಫೈಲ್ ಮಾಡಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ಅದರ ಪ್ರತಿ ನಮಗೆ ಸಿಕ್ಕಿಲ್ಲ. ಸಾಮಾನ್ಯವಾಗಿ ಬಂಧನ ಆದ ಅರವತ್ತು ದಿನಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುವ ಪದ್ದತಿ ಇತ್ತು. ಬಹಳ ಹಿಂದೆಯೇ ಮಾಡಬೇಕಿತ್ತು. ಆದರೆ ಇವಾಗ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ಹೊಸತಾಗಿ ಏನೂ ಸೃಷ್ಟಿ ಮಾಡಲು ಆಗಲ್ಲ ಎಂದರು.
ಆದರೆ, ಆದಾಯ ತೆರಿಗೆ ಇಲಾಖೆಯವರು ಬೇಕಾದಷ್ಟು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ನ್ಯಾಯ, ನೀತಿ, ಸತ್ಯ, ಧರ್ಮ ಹಾಗೂ ಕಾನೂನು ಎಲ್ಲದರಲ್ಲೂ ನಂಬಿಕೆ ಇದೆ. ನಾನೇನು ತಪ್ಪು ಮಾಡಿಲ್ಲ ಎಂದು ನನಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಗೊತ್ತಿದೆ. ಇದು ರಾಜಕೀಯ ಉದ್ದೇಶ ಎಂದು ಆರಂಭದಲ್ಲೇ ಹೇಳಿದ್ದೇನೆ. ಅಹ್ಮದ್ ಪಟೇಲ್‌ ಚುನಾವಣೆಯ ವಿಚಾರವಾಗಿ ನನ್ನ ಮನೆಗೆ ದಾಳಿ ನಡೆಸಿದ್ದರು. ನನ್ನ ಸ್ನೇಹಿತರ ಮನೆಯಲ್ಲಿ ವ್ಯಾಪಾಯ ವಹಿವಾಟಿಗೆ ಇಟ್ಟಿದ್ದ ದುಡ್ಡನ್ನು ನನ್ನ ದುಡ್ಡು ಎಂದು ಬರೆದರು ಎಂದು ಆರೋಪ ಮಾಡಿದರು.

ತಾಂಬೂಲ ಪ್ರಶ್ನೆ ವಿಚಾರ: ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು ಎಂದ ಡಿಕೆ ಶಿವಕುಮಾರ್‌
ಇಡಿ ದಾಳಿಯ ಬಳಿಕ ನನ್ನ ಬಂಧನ ಆಗಿ, ಚಾರ್ಜ್ ಶೀಟ್ ಸಲ್ಲಿಕೆಗೂ ಮೊದಲು ಬೇಲ್ ಸಿಕ್ಕಿತ್ತು. ಬೇಲ್ ಕ್ಯಾನ್ಸಲ್ ಮಾಡಲು ಹೊರಟಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಆಗಲ್ಲ ಎಂದು ಹೇಳಿತ್ತು. ಇವಾಗ ಮತ್ತೆ ಮತ್ತೆ ನೋಟಿಸ್‌ ಕೊಡುತ್ತಾರೆ. ಅದು ಕಾನೂನು. ನಾವು ಎದುರಿಸಬೇಕು. ನಾವು ಕಾನೂನು ಪಾಲನೆ ಮಾಡುವವರು. ಆದರೆ, ಕೆಲವರು ಕಾನೂನು ಮಿಸ್ ಯೂಸ್ ಮಾಡಬಹುದು. ರಾಜಕೀಯವಾಗಿ ಅವರ ಪಾರ್ಟಿಯನ್ನೇ ಬಿಡಲ್ಲ ನಮ್ಮ ಪಾರ್ಟಿಯವರನ್ನು ಬಿಡುತ್ತಾರಾ? ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್‌ ವಿರುದ್ಧ ಬಂಡಾಯ ಮೊಳಗಿಸಿದ ಸೋದರಿ ಪತಿ
ಅವರು ರಾಜಕೀಯವಾಗಿ ಇರುವ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಅವರೇ ಎಲ್ಲ ಕೋರ್ಟ್‌, ನ್ಯಾಯಾಲಯದ, ತನಿಖಾ ಆಧಿಕಾರಿಗಳು. ಮಾಡಿಕೊಳ್ಳಲಿ, ಅವರಿಗೆ ಒಳ್ಳೆಯದಾಗಲಿ ಯಶಸ್ವಿಯಾಗಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾರಿಂದ ಅವರಿಗೆ ರಾಜಕೀಯವಾಗಿ ತೊಂದರೆ ಇದೆ. ಅವರನ್ನು ನಿರ್ಮೂಲನೆ ಮಾಡಬೇಕು ಎಂಬುವುದು ಅವರ ನಿಲುವು. ಒಂದಾ ಅವರ ಜೊತೆ ಹೋಗಬೇಕು, ಅಥವಾ ಶರಣಾಗಬೇಕು. ಇಲ್ಲದಿದ್ದರೆ ಮುಗಿಸುತ್ತಾರೆ. ಅವರಿಗೆ ಆಲ್‌ ದಿ ಬೆಸ್ಟ್‌ ಎಂದರು.

ED Raids Anil Parab: ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮೇಲೆ ಇ.ಡಿ ದಾಳಿ
ಯಾವ ಪ್ರಕರಣದಲ್ಲಿ ಚಾರ್ಜ್‌ಶೀಟ್‌?ಹಣದ ಅಕ್ರಮ ವಹಿವಾಟು ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ 2019ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದಿಲ್ಲಿಯ ಇಡಿ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದಿಲ್ಲಿಯಲ್ಲಿ ಡಿಕೆ ಶಿವಕುಮಾರ್ ಅವರ ಒಡೆತನಕ್ಕೆ ಸೇರಿದ ಪ್ಲಾಟ್ ನಲ್ಲಿ 8.5 ಕೋಟಿ ರೂ. ಬೇನಾಮಿ ಹಣ ಪತ್ತೆಯಾದ ಬಗ್ಗೆ ಐಟಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಇಡಿ ಅಧಿಕಾರಿಗಳು ಪಿಎಂಎಲ್‌ಎ ಕಾಯ್ದೆ ಅಡಿ 2018 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಅದೇ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ