ಆರೆಸ್ಸೆಸ್, ನಾಗಪುರ ಅಜೆಂಡಾವನ್ನು ಇವರ ಮನೆಯಲ್ಲಿ ಇಟ್ಟುಕೊಳ್ಳಲಿ; ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ
ಬಿಜೆಪಿಯವರ ಆರೆಸ್ಸೆಸ್, ನಾಗಪುರ ಅಜೆಂಡಾ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಕಿಡಿಕಾರಿದ ಡಿಕೆಶಿ, ಯಾಕೆ ವಾಜಪೇಯಿ ಅವರು ಈಗಿನ ಶಿಕ್ಷಣ ನೀತಿ ವಿರೋಧಿಸಲಿಲ್ಲ. ಇಷ್ಟು ದಿನ ಎಲ್ಲರೂ ಈಗ ಇರುವ ಪದ್ಧತಿಯಲ್ಲಿ ಓದಿರೋದು. ಇವರು ಏನೇ ಜಾರಿಗೆ ತಂದರೂ, ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ರದ್ದು ಮಾಡುತ್ತೇವೆ ಎಂದು ಖಡಕ್ ಆಗಿ ಹೇಳಿದರು.
Vijaya Karnataka Web 24 Sep 2021, 2:48 pm
ಬೆಂಗಳೂರು: ಆರೆಸ್ಸೆಸ್, ನಾಗಪುರ ಅಜೆಂಡಾ ಇವರ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಬಿಜೆಪಿ, ಸಂಘ ಪರಿವಾರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಸಚಿವರೇ ಇದನ್ನು ಜಾರಿಗೆ ತರೋದು ಕಷ್ಟ ಅಂತ ಹೇಳಿದ್ದಾರೆ. ಇವರ ಆರೆಸ್ಸೆಸ್, ನಾಗಪುರ ಅಜೆಂಡಾ ಇವರ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಕಿಡಿಕಾರಿದರು. ಯಾಕೆ ವಾಜಪೇಯಿ ಅವರು ಈಗಿನ ಶಿಕ್ಷಣ ನೀತಿ ವಿರೋಧಿಸಲಿಲ್ಲ. ಇಷ್ಟು ದಿನ ಎಲ್ಲರೂ ಈಗ ಇರುವ ಪದ್ಧತಿಯಲ್ಲಿ ಓದಿರೋದು. ಇವರು ಏನೇ ಜಾರಿಗೆ ತಂದರೂ, ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ರದ್ದು ಮಾಡುತ್ತೇವೆ ಎಂದು ಖಡಕ್ ಆಗಿ ಡಿಕೆ ಶಿವ ಕುಮಾರ್ ಹೇಳಿದರು.
ಇನ್ನು ಈಗ ಇರುವ 10+2 ಶಿಕ್ಷಣ ಪದ್ಧತಿ ಸರಿ ಇದೆ. ಎನ್ ಇ ಪಿ ವಿರುದ್ಧ ನಾವು ಸಂಪೂರ್ಣ ಪ್ರತಿಭಟನೆ ಮಾಡ್ತೀವಿ. ಸದನದಲ್ಲಿ ನಾವು ಚರ್ಚೆ ಮಾಡ್ತೀವಿ ಅಂದ್ರೂ ನೀವು ಅವಕಾಶ ಕೊಡಲಿಲ್ಲ.ಇವರು ಒಬ್ಬ ಡೋಂಗಿ ಸಚಿವರು ಎಂದು ಬಿಜೆಪಿ ಸರ್ಕಾರದ ಸಚಿವರ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಇವರು ಎನ್ ಇ ಪಿ ಜಾರಿಯ ಮೂಲಕ ಹೈಕಮಾಂಡ್ ಮೆಚ್ಚಿಸಲು ಹೊರಟಿದ್ದಾರೆ. ಕರ್ನಾಟಕಕ್ಕೂ ಮೊದಲು ಎನ್ ಇ ಪಿ ಶಿಕ್ಷಣ ಪದ್ಧತಿಯನ್ನು ಉತ್ತರ ಪ್ರದೇಶ , ಗುಜರಾತಲ್ಲಿ ಜಾರಿಗೆ ತರಲಿ ಎಂದರು.
ಇನ್ನು ಕಾಂಗ್ರೆಸ್ನವರದ್ದು ಇಟಲಿ, ಮೆಕಾಲೆ ಶಿಕ್ಷಣ ಪದ್ದತಿ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಹಾಗಿದ್ದರೆ ಇಟಲಿ ಶಿಕ್ಷಣ ಪದ್ಧತಿಯನ್ನು ಯಾಕೆ ಒಪ್ಪಿಕೊಂಡ್ರು.? ವಾಜಪೇಯಿ ಈ ದೇಶದ ಪ್ರಧಾನಿಯಾಗಿದ್ರು ಯಾಕೆ ಧ್ವನಿ ಎತ್ತಲಿಲ್ಲ? ಅವರೇ ಪ್ರಧಾನಿಯಾಗಿದ್ದಾಗ ವಿರೋಧಿಸಬಹುದಿತ್ತು. ಇದೇ ಶಿಕ್ಷಣ ಪದ್ಧತಿಯಲ್ಲಿ ಕಲಿತಿರುವ ಈಗಿನ ವೈದ್ಯರು, ಪ್ರೊಫೆಸರ್ಗಳು ದೇಶದಲ್ಲೇ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ನೂತನ ಶಿಕ್ಷಣ ನೀತಿ ಕುರಿತು ಪ್ರಸ್ತಾಪ ಆದ ವೇಳೆ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ಎನ್ಇಪಿ ಅಂದರೆ ನಾಗ್ಪುರ ಎಜ್ಯುಕೇಶನ್ ಪಾಲಿಸಿ ಎಂದು ವ್ಯಂಗ್ಯವಾಡಿದರು. ಈ ವೇಳೆ ಈಗಿನ ಶಿಕ್ಷಣ ಪದ್ಧತಿಯನ್ನು ಇಟಲಿ ಶಿಕ್ಷಣ ಪದ್ಧತಿ ಎಂದು ಬಿಜೆಪಿಗರು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಸಚಿವರೇ ಇದನ್ನು ಜಾರಿಗೆ ತರೋದು ಕಷ್ಟ ಅಂತ ಹೇಳಿದ್ದಾರೆ. ಇವರ ಆರೆಸ್ಸೆಸ್, ನಾಗಪುರ ಅಜೆಂಡಾ ಇವರ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಕಿಡಿಕಾರಿದರು. ಯಾಕೆ ವಾಜಪೇಯಿ ಅವರು ಈಗಿನ ಶಿಕ್ಷಣ ನೀತಿ ವಿರೋಧಿಸಲಿಲ್ಲ. ಇಷ್ಟು ದಿನ ಎಲ್ಲರೂ ಈಗ ಇರುವ ಪದ್ಧತಿಯಲ್ಲಿ ಓದಿರೋದು. ಇವರು ಏನೇ ಜಾರಿಗೆ ತಂದರೂ, ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ರದ್ದು ಮಾಡುತ್ತೇವೆ ಎಂದು ಖಡಕ್ ಆಗಿ ಡಿಕೆ ಶಿವ ಕುಮಾರ್ ಹೇಳಿದರು.
ಇನ್ನು ಈಗ ಇರುವ 10+2 ಶಿಕ್ಷಣ ಪದ್ಧತಿ ಸರಿ ಇದೆ. ಎನ್ ಇ ಪಿ ವಿರುದ್ಧ ನಾವು ಸಂಪೂರ್ಣ ಪ್ರತಿಭಟನೆ ಮಾಡ್ತೀವಿ. ಸದನದಲ್ಲಿ ನಾವು ಚರ್ಚೆ ಮಾಡ್ತೀವಿ ಅಂದ್ರೂ ನೀವು ಅವಕಾಶ ಕೊಡಲಿಲ್ಲ.ಇವರು ಒಬ್ಬ ಡೋಂಗಿ ಸಚಿವರು ಎಂದು ಬಿಜೆಪಿ ಸರ್ಕಾರದ ಸಚಿವರ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಇವರು ಎನ್ ಇ ಪಿ ಜಾರಿಯ ಮೂಲಕ ಹೈಕಮಾಂಡ್ ಮೆಚ್ಚಿಸಲು ಹೊರಟಿದ್ದಾರೆ. ಕರ್ನಾಟಕಕ್ಕೂ ಮೊದಲು ಎನ್ ಇ ಪಿ ಶಿಕ್ಷಣ ಪದ್ಧತಿಯನ್ನು ಉತ್ತರ ಪ್ರದೇಶ , ಗುಜರಾತಲ್ಲಿ ಜಾರಿಗೆ ತರಲಿ ಎಂದರು.
ಇನ್ನು ಕಾಂಗ್ರೆಸ್ನವರದ್ದು ಇಟಲಿ, ಮೆಕಾಲೆ ಶಿಕ್ಷಣ ಪದ್ದತಿ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಹಾಗಿದ್ದರೆ ಇಟಲಿ ಶಿಕ್ಷಣ ಪದ್ಧತಿಯನ್ನು ಯಾಕೆ ಒಪ್ಪಿಕೊಂಡ್ರು.? ವಾಜಪೇಯಿ ಈ ದೇಶದ ಪ್ರಧಾನಿಯಾಗಿದ್ರು ಯಾಕೆ ಧ್ವನಿ ಎತ್ತಲಿಲ್ಲ? ಅವರೇ ಪ್ರಧಾನಿಯಾಗಿದ್ದಾಗ ವಿರೋಧಿಸಬಹುದಿತ್ತು. ಇದೇ ಶಿಕ್ಷಣ ಪದ್ಧತಿಯಲ್ಲಿ ಕಲಿತಿರುವ ಈಗಿನ ವೈದ್ಯರು, ಪ್ರೊಫೆಸರ್ಗಳು ದೇಶದಲ್ಲೇ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ನೂತನ ಶಿಕ್ಷಣ ನೀತಿ ಕುರಿತು ಪ್ರಸ್ತಾಪ ಆದ ವೇಳೆ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ಎನ್ಇಪಿ ಅಂದರೆ ನಾಗ್ಪುರ ಎಜ್ಯುಕೇಶನ್ ಪಾಲಿಸಿ ಎಂದು ವ್ಯಂಗ್ಯವಾಡಿದರು. ಈ ವೇಳೆ ಈಗಿನ ಶಿಕ್ಷಣ ಪದ್ಧತಿಯನ್ನು ಇಟಲಿ ಶಿಕ್ಷಣ ಪದ್ಧತಿ ಎಂದು ಬಿಜೆಪಿಗರು ವ್ಯಂಗ್ಯವಾಡಿದರು.