ಆ್ಯಪ್ನಗರ

ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜಾವಾಬ್ದಾರಿಯಲ್ಲಿ ನಿಷ್ಕ್ರಿಯ, ಇಬ್ಬರು ಕೆಪಿಸಿಸಿ ರಾಜ್ಯ ಸಂಯೋಜಕರ ಅಮಾನತು

ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜಾವಾಬ್ದಾರಿಯನ್ನು ನಿಭಾಯಿಸಲು ನಿಷ್ಕ್ರಿಯವಾದ ಕಾರಣಕ್ಕಾಗಿ ಇಬ್ಬರು ಕೆಪಿಸಿಸಿ ರಾಜ್ಯ ಸಂಯೋಜಕರನ್ನು ಅಮಾನತುಗೊಳಿಸಲಾಗಿದೆ. ಸಂಯೋಜನರಾದ ಭೂಷನ್ ನಾಗ್ ಹಾಗೂ ನಂದನ್‌ ಕಶ್ಯಪ್‌ ಅಮಾನತುಗೊಂಡವರು.

Vijaya Karnataka Web 16 Feb 2020, 10:04 am
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಇಬ್ಬರು ರಾಜ್ಯ ಸಂಯೋಜಕರನ್ನು ಅಮಾನತುಗೊಳಿಸಿ ಕೆಪಿಸಿಸಿ ಆಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.
Vijaya Karnataka Web kpcc relieved two social media coordinates
ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜಾವಾಬ್ದಾರಿಯಲ್ಲಿ ನಿಷ್ಕ್ರಿಯ, ಇಬ್ಬರು ಕೆಪಿಸಿಸಿ ರಾಜ್ಯ ಸಂಯೋಜಕರ ಅಮಾನತು


ಸಂಯೋಜಕರಾಗಿ ನೇಮಕಗೊಂಡಿದ್ದ ಭೂಷನ್ ನಾಗ್ ಹಾಗೂ ಕಶ್ಯಪ್ ನಂದನ್‌ ಎಂಬಿಬ್ಬರನ್ನು ಜಾವಾಬ್ದಾರಿಯಿಂದ ಬಿಡುಗಡೆಗೊಳಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆದೇಶಿಸಿದೆ.

ಬೀದರ್‌ ದೇಶದ್ರೋಹ ಪ್ರಕರಣ, ಪೊಲೀಸ್‌ ಇಲಾಖೆ ದುರ್ಬಳಕೆ ವಿರುದ್ಧ ಗುಡುಗಿದ ಕಾಂಗ್ರೆಸ್

ರಾಜ್ಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜಾವಾಬ್ದಾರಿಯನ್ನು ಇವರಿಗೆ ನೀಡಲಾಗಿತ್ತು. ಆದರೆ ಪಕ್ಷ ನೀಡಿದ್ದ ಜಾವಾಬ್ದಾರಿಯಲ್ಲಿ ನಿಭಾಯಿಸದ ಕಾರಣಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಆಯ್ಕೆ ಕಗ್ಗಂಟು: ಡಿಕೆಶಿಯಿಂದ ಟೆಂಪಲ್ ರನ್, ಎಂಬಿಪಿಯಿಂದ ಮಾರ್ಮಿಕ ಟ್ವೀಟ್!

2019 ನವೆಂಬರ್ ತಿಂಗಳಲ್ಲೇ ಜಾಬಾಬ್ದಾರಿಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥರಾದ ರೋಹನ್‌ ಗುಪ್ತಾ ಅವರಿಗೂ ಆದೇಶದ ಪ್ರತಿಯನ್ನು ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ