ಬೆಂಗಳೂರು : ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಬೇಕು ಎಂದು ರಾಜ್ಯ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಈ ಸಂಬಂಧ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಲೋಕಸಭೆ ಚುನಾವಣೆ ಸೋಲಿನ ಅವಲೋಕನವನ್ನೂ ಮಾಡಲಾಯಿತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪಕ್ಷದ ಹಿತ ಕಾಯಲು ರಾಹುಲ್ ಶ್ರಮ ಹಾಕಿದ್ದಾರೆ. ಪಕ್ಷ ಗೆಲ್ಲದೇ ಹೋದರೂ ಮೋದಿ ಸರಕಾರದ ವೈಫಲ್ಯದ ವಿರುದ್ಧ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಮುಂದೆಯೂ ಅವರ ನಾಯಕತ್ವದ ಅವಶ್ಯಕತೆಯಿದೆಯೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪ್ರಮುಖರು ರಾಹುಲ್ ಗುಣಗಾನ ಮಾಡಿದರು.
ಸುರೇಶ್ಗೆ ಅಭಿನಂದನೆ
ಕಾಂಗ್ರೆಸ್ನಿಂದ ಈ ಬಾರಿ ಆಯ್ಕೆಯಾಗಿರುವ ಏಕೈಕ ಸಂಸದ ಡಿ.ಕೆ.ಸುರೇಶ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
ಹೇಳಿಕೆ ನೀಡಬೇಡಿ
ಏನೇ ಅಸಮಾಧಾನವಿದ್ದರೂ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು ಎಂದು ಶಾಸಕರಿಗೆ ಸಿಎಲ್ಪಿ ಸಭೆಯಲ್ಲಿ ತಾಕೀತು ಮಾಡಲಾಗಿದೆ. ತಮ್ಮನ್ನು ಯಾವಾಗಲೂ ಬಂದು ಭೇಟಿ ಮಾಡಿ ಅಹವಾಲು ತೋಡಿಕೊಳ್ಳಬಹುದು. ಅದನ್ನು ಪರಿಹರಿಸಿ ಕೊಡಲಾಗುವುದು ಎಂದು ಸಿದ್ದರಾಮಯ್ಯ ಅಭಯ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಯಾಗಬೇಕೆಂಬ ಒತ್ತಾಯಕ್ಕೂ ಅವರು ಸಮ್ಮತಿಸಿದ್ದಾರೆ. ತೀವ್ರ ಅತೃಪ್ತಿ ಹೊಂದಿದವರನ್ನು ಗುರುವಾರ ಪುನಃ ಕರೆದು ಮಾತನಾಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಸಚಿವರಾದ ಸತೀಶ್ ಜಾರಕಿಹೊಳಿ, ರಾಜಶೇಖರ ಪಾಟೀಲ್, ಶಾಸಕರಾದ ರಾಮಲಿಂಗಾರೆಡ್ಡಿ, ಎನ್.ಎ.ಹ್ಯಾರೀಸ್, ಬೈರತಿ ಬಸವರಾಜು ಅನುಮತಿ ಪಡೆದು ಗೈರು ಹಾಜರಾಗಿದ್ದರೆಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸರಕಾರ ಕಲ್ಲು ಬಂಡೆಯಂತಿದ್ದು ಉಳಿಯುತ್ತದೆ, ಬಿಜೆಪಿಯವರು ಸರಕಾರ ಅಸ್ಥಿರಗೊಳಿಸಲು ವರ್ಷದಿಂದ ಪ್ರಯತ್ನಿಸಿ ಮೂರ್ಖರಾಗಿದ್ದಾರೆ, ಮುಂದೆಯೂ ಆಗಲಿದ್ದಾರೆ. ಸಂಪುಟ ವಿಸ್ತರಣೆ-ಪುನಾರಚನೆ ಬಗ್ಗೆ ಚರ್ಚೆಯೇ ಆಗಿಲ್ಲ. ರಾಹುಲ್ ನಾಯಕತ್ವಕ್ಕೆ ಸಿಎಲ್ಪಿ ಬೆಂಬಲ ವ್ಯಕ್ತಪಡಿಸಿದೆ.
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ಈ ಸಂಬಂಧ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಲೋಕಸಭೆ ಚುನಾವಣೆ ಸೋಲಿನ ಅವಲೋಕನವನ್ನೂ ಮಾಡಲಾಯಿತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪಕ್ಷದ ಹಿತ ಕಾಯಲು ರಾಹುಲ್ ಶ್ರಮ ಹಾಕಿದ್ದಾರೆ. ಪಕ್ಷ ಗೆಲ್ಲದೇ ಹೋದರೂ ಮೋದಿ ಸರಕಾರದ ವೈಫಲ್ಯದ ವಿರುದ್ಧ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಮುಂದೆಯೂ ಅವರ ನಾಯಕತ್ವದ ಅವಶ್ಯಕತೆಯಿದೆಯೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪ್ರಮುಖರು ರಾಹುಲ್ ಗುಣಗಾನ ಮಾಡಿದರು.
ಸುರೇಶ್ಗೆ ಅಭಿನಂದನೆ
ಕಾಂಗ್ರೆಸ್ನಿಂದ ಈ ಬಾರಿ ಆಯ್ಕೆಯಾಗಿರುವ ಏಕೈಕ ಸಂಸದ ಡಿ.ಕೆ.ಸುರೇಶ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
ಹೇಳಿಕೆ ನೀಡಬೇಡಿ
ಏನೇ ಅಸಮಾಧಾನವಿದ್ದರೂ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು ಎಂದು ಶಾಸಕರಿಗೆ ಸಿಎಲ್ಪಿ ಸಭೆಯಲ್ಲಿ ತಾಕೀತು ಮಾಡಲಾಗಿದೆ. ತಮ್ಮನ್ನು ಯಾವಾಗಲೂ ಬಂದು ಭೇಟಿ ಮಾಡಿ ಅಹವಾಲು ತೋಡಿಕೊಳ್ಳಬಹುದು. ಅದನ್ನು ಪರಿಹರಿಸಿ ಕೊಡಲಾಗುವುದು ಎಂದು ಸಿದ್ದರಾಮಯ್ಯ ಅಭಯ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಯಾಗಬೇಕೆಂಬ ಒತ್ತಾಯಕ್ಕೂ ಅವರು ಸಮ್ಮತಿಸಿದ್ದಾರೆ. ತೀವ್ರ ಅತೃಪ್ತಿ ಹೊಂದಿದವರನ್ನು ಗುರುವಾರ ಪುನಃ ಕರೆದು ಮಾತನಾಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಸಚಿವರಾದ ಸತೀಶ್ ಜಾರಕಿಹೊಳಿ, ರಾಜಶೇಖರ ಪಾಟೀಲ್, ಶಾಸಕರಾದ ರಾಮಲಿಂಗಾರೆಡ್ಡಿ, ಎನ್.ಎ.ಹ್ಯಾರೀಸ್, ಬೈರತಿ ಬಸವರಾಜು ಅನುಮತಿ ಪಡೆದು ಗೈರು ಹಾಜರಾಗಿದ್ದರೆಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸರಕಾರ ಕಲ್ಲು ಬಂಡೆಯಂತಿದ್ದು ಉಳಿಯುತ್ತದೆ, ಬಿಜೆಪಿಯವರು ಸರಕಾರ ಅಸ್ಥಿರಗೊಳಿಸಲು ವರ್ಷದಿಂದ ಪ್ರಯತ್ನಿಸಿ ಮೂರ್ಖರಾಗಿದ್ದಾರೆ, ಮುಂದೆಯೂ ಆಗಲಿದ್ದಾರೆ. ಸಂಪುಟ ವಿಸ್ತರಣೆ-ಪುನಾರಚನೆ ಬಗ್ಗೆ ಚರ್ಚೆಯೇ ಆಗಿಲ್ಲ. ರಾಹುಲ್ ನಾಯಕತ್ವಕ್ಕೆ ಸಿಎಲ್ಪಿ ಬೆಂಬಲ ವ್ಯಕ್ತಪಡಿಸಿದೆ.
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ