Krs Dam Creates New Record For Filled Out For 100 Consecutive Days
ಹೊಸ ದಾಖಲೆ ನಿರ್ಮಿಸಿದ ಕನ್ನಂಬಾಡಿ ಕಟ್ಟೆ: ಶತದಿನಗಳ ಕಾಲ ತುಂಬಿ ಹರಿದ ಕೆಆರ್ಎಸ್
ಮೈಸೂರು: ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಪ್ರತಿಷ್ಠಿತ ಕೃಷ್ಣರಾಜಸಾಗರ ಜಲಾಶಯ ಇದೀಗ ಹೊಸದೊಂದು ದಾಖಲೆ ನಿರ್ಮಿಸಿದೆ. ನಿರಂತರ ನೂರು ದಿನಗಳ ಕಾಲ ತನ್ನ ಒಡಲಲ್ಲಿ ಗರಿಷ್ಠಮಟ್ಟದ (124.80 ಅಡಿ) ನೀರು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಶತಮಾನದ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಸತತ 100 ದಿನಗಳ ಕಾಲ ನೀರಿನ ಸಂಗ್ರಹದ ಪ್ರಮಾಣವನ್ನು ದಾಖಲೆಯ ಮಟ್ಟದಲ್ಲಿ ಕಾಯ್ದುಕೊಂಡಿದೆ. 1933ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಉಸ್ತುವಾರಿಯಲ್ಲಿ ಬಹುಜನರ ಪರಿಶ್ರಮದಿಂದ ಈ ಅಣೆಕಟ್ಟು ನಿರ್ಮಾಣಗೊಂಡಿತ್ತು. ಕಳೆದ 86 ವರ್ಷದಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಣೆಕಟ್ಟು ತನ್ನ ನೀರಿನ ಮಟ್ಟದಲ್ಲಿ ಸತತ 100 ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡು ದಾಖಲೆ ಬರೆದಿದೆ. ಅಂದರೆ ಅಣೆಕಟ್ಟಿನ ಗರಿಷ್ಠ ಮಟ್ಟ ಬರೋಬ್ಬರಿ 124.80 ಅಡಿ ನೀರನ್ನು ತನ್ನೊಡಲಲ್ಲಿಟ್ಟುಕೊಂಡು ಆಗಸ್ಟ್ 15ರಿಂದ ಇಂದಿನವರೆಗೂ ಕಾಯ್ದುಕೊಂಡಿದೆ. ಇದು ಸಂತಸದ ವಿಷಯವೇ ಸರಿ. ಸದಾ ಗಿಜಿಗುಡುವ ಈ ಪ್ರವಾಸಿ ತಾಣವನ್ನು ಕಣ್ತುಂಬಿಕೊಳ್ಳಲು ಈ ಬಾರಿ ಜನರು ಹಲವು ರಾಜ್ಯಗಳಿಂದಲೂ ಆಗಮಿಸಿ ಸಂತಸಪಡುತ್ತಿದ್ದಾರೆ.
Vijaya Karnataka Web29 Nov 2019, 1:29 pm
ಮೈಸೂರು: ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಪ್ರತಿಷ್ಠಿತ ಕೃಷ್ಣರಾಜಸಾಗರ ಜಲಾಶಯ ಇದೀಗ ಹೊಸದೊಂದು ದಾಖಲೆ ನಿರ್ಮಿಸಿದೆ. ನಿರಂತರ ನೂರು ದಿನಗಳ ಕಾಲ ತನ್ನ ಒಡಲಲ್ಲಿ ಗರಿಷ್ಠಮಟ್ಟದ (124.80 ಅಡಿ) ನೀರು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಶತಮಾನದ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಸತತ 100 ದಿನಗಳ ಕಾಲ ನೀರಿನ ಸಂಗ್ರಹದ ಪ್ರಮಾಣವನ್ನು ದಾಖಲೆಯ ಮಟ್ಟದಲ್ಲಿ ಕಾಯ್ದುಕೊಂಡಿದೆ. 1933ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಉಸ್ತುವಾರಿಯಲ್ಲಿ ಬಹುಜನರ ಪರಿಶ್ರಮದಿಂದ ಈ ಅಣೆಕಟ್ಟು ನಿರ್ಮಾಣಗೊಂಡಿತ್ತು. ಕಳೆದ 86 ವರ್ಷದಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಣೆಕಟ್ಟು ತನ್ನ ನೀರಿನ ಮಟ್ಟದಲ್ಲಿ ಸತತ 100 ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡು ದಾಖಲೆ ಬರೆದಿದೆ. ಅಂದರೆ ಅಣೆಕಟ್ಟಿನ ಗರಿಷ್ಠ ಮಟ್ಟ ಬರೋಬ್ಬರಿ 124.80 ಅಡಿ ನೀರನ್ನು ತನ್ನೊಡಲಲ್ಲಿಟ್ಟುಕೊಂಡು ಆಗಸ್ಟ್ 15ರಿಂದ ಇಂದಿನವರೆಗೂ ಕಾಯ್ದುಕೊಂಡಿದೆ. ಇದು ಸಂತಸದ ವಿಷಯವೇ ಸರಿ. ಸದಾ ಗಿಜಿಗುಡುವ ಈ ಪ್ರವಾಸಿ ತಾಣವನ್ನು ಕಣ್ತುಂಬಿಕೊಳ್ಳಲು ಈ ಬಾರಿ ಜನರು ಹಲವು ರಾಜ್ಯಗಳಿಂದಲೂ ಆಗಮಿಸಿ ಸಂತಸಪಡುತ್ತಿದ್ದಾರೆ.
ಎಲ್ಲೆಂದರೆ ಅಲ್ಲಿ ಚಾಚಿಕೊಂಡಿರುವ ಅಣೆಕಟ್ಟೆ ನೀರು
ಕಳೆದ 86 ವರ್ಷದಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಣೆಕಟ್ಟು ತನ್ನ ನೀರಿನ ಮಟ್ಟದಲ್ಲಿ ಸತತ 100 ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡಿದೆ. ಅಣೆಕಟ್ಟೆಯ ನೀರು ಅತಿ ಹೆಚ್ಚು ಪ್ರದೇಶದಲ್ಲಿ ಚಾಚಿಕೊಂಡಿದೆ.
ಪೂರ್ಣ ಭರ್ತಿಯಾದ ಕೆಆರ್ಎಸ್
ಗರಿಷ್ಠ ಮಟ್ಟದವರೆಗೂ ಭರ್ತಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆ!
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.