ಆ್ಯಪ್ನಗರ

ಯಾವ ಕಾರಣಕ್ಕೂ ಮೋಡ ಬಿತ್ತನೆ ಮುಂದುವರಿಸಬಾರದು: ಈಶ್ವರಪ್ಪ ಆಗ್ರಹ

ಮೋಡ ಬಿತ್ತನೆ ಯೋಜನೆಗೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಯಾವ ಕಾರಣಕ್ಕೂ ಮೋಡ ಬಿತ್ತನೆ ಮುಂದುವರಿಸಬಾರದು ಎಂದು ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರಂದಿಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Vijaya Karnataka Web 7 Nov 2019, 1:55 pm
ಬೆಂಗಳೂರು: ಈ ವರ್ಷ ಎರಡೆರಡು ಬಾರಿ ಜಲಪ್ರಳಯವಾಗಿದ್ದರೂ ರಾಜ್ಯ ಸರ್ಕಾರ ಮತ್ತೆ ಮೋಡ ಬಿತ್ತನೆ ಯೋಜನೆಗೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಈ ಯೋಜನೆ ಬಿಜೆಪಿ ನಾಯಕರಾದ ಸಚಿವ ಕೆಎಸ್‌ ಈಶ್ವರಪ್ಪ ವಿರೋಧದ ನಡುವೆಯೂ ಮೋಡ ಬಿತ್ತನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರು ಯಾವ ಕಾರಣಕ್ಕೂ ಮೋಡ ಬಿತ್ತನೆ ಮುಂದುವರಿಸಬಾರದು ಎಂದು ಹೇಳಿದ್ದಾರೆ.
Vijaya Karnataka Web KS eshwarappa
ಕೆ.ಎಸ್‌. ಈಶ್ವರಪ್ಪ


ಮೋಡ ಬಿತ್ತನೆಯಲ್ಲಿ ಡಿಸಿಎಂ ಪುತ್ರನೂ ಪಾಲುದಾರ! 'ಕೃತಕ ಮಳೆಯಲ್ಲಿ' ಹಗರಣದ ವಾಸನೆ

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರಂದಿಗೆ ಮಾತನಾಡಿ ಹಲವಾರು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು. ರಾಜ್ಯದಲ್ಲಿ ಜಲಪ್ರಳಯವೇ ಆಗುತ್ತಿದೆ. ಮೋಡ ಭಿತ್ತನೆ ಬೇಡ ಅನ್ನೋದು ನನ್ನ ನಿರ್ಧಾರ. ಹೋದ ಬಾರಿ ಸರ್ಕಾರ 2 ವರ್ಷದ ಟೆಂಡರ್ ಕರೆದಿತ್ತು. ಇದರ ಬಗ್ಗೆ ವಿಚಾರಿಸಲಾಗುತ್ತದೆ. ಸಧ್ಯಕ್ಕೆ ಯಾವುದೇ ಕಾರಣಕ್ಕೂ ಮೋಡ ಭಿತ್ತನೆ ಮುಂದುವರೆಸಬಾರದು. ಯಾರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬುದು ನಮಗೆ ಸಂಬಂಧ ಇಲ್ಲದ ವಿಷಯ. ರಾಜ್ಯದ ಹಣ ಸರಿಯಾಗಿ ಬಳಕೆ ಆಗಬೇಕು. ಒಂದೇ ಬಾರಿಗೆ ಎರಡು ವರ್ಷ ಮೋಡ ಬಿತ್ತನೆಗೆ ಯಾಕೆ ಗುತ್ತಿಗೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಅದರಲ್ಲಿ ಏನೇನು ಒಂಪಂದಗಳಾಗಿವೆ ಎಂದು ವಿಚಾರಿಸುತ್ತೇನೆ ಎಂದು ಹೇಳಿದರು.

ಮುಂದಿನ ವರ್ಷದ 'ಮೋಡ ಬಿತ್ತನೆ' ಗುತ್ತಿಗೆ ಬಾಕಿ ಉಳಿಸಿಕೊಂಡಿರುವುದೇಕೆ?

ಘನ ತ್ಯಾಜ್ಯ ನಿರ್ವಹಣೆಗೆ ಆದ್ಯತೆ:
528 ಗ್ರಾಮ ಪಂಚಾಯಿತಿ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಆಧ್ಯತೆ ಕೊಡಲು ನಿರ್ಧಾರಿಸಲಾಗಿದೆ. ಬ್ಯಾಟರಿ‌ ಸಿಸ್ಟಮ್ ಇಲ್ಲದೇ ಸೌರ ಶಕ್ತಿಯನ್ನು ಉತ್ಪಾದಿಸಿ ಹೇಗೆ ಪೂರೈಸಬಹುದು ಎಂಬುದರತ್ತ ಗಮನಹರಿಸಲಾಗುತ್ತಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ