ಆ್ಯಪ್ನಗರ

ಕೊರೊನಾ ಲಾಕ್‌ಡೌನ್: ಕೆಎಸ್‌ಆರ್‌ಟಿಸಿಗೆ ಆಗಿರುವ ನಷ್ಟದ ಪ್ರಮಾಣವೆಷ್ಟು?

ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆ.ಎಸ್‌.ಆರ್‌.ಟಿ ಸಿ ನಷ್ಟದಲ್ಲಿದೆ. ನಾಲ್ಕು ಸಾರಿಗೆ ವಿಭಾಗದಲ್ಲೂ ಭಾರೀ ಪ್ರಮಾಣದ ನಷ್ಟ ಸಂಭವಿಸಿದ್ದು ನೌಕರರ ವೇತನ ಪಾವತಿಗೂ ತೊಂದರೆ ಉಂಟಾಗಿದೆ. ಈ ಕುರಿತಾದ ವಿವರ ಇಲ್ಲಿದೆ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 30 Apr 2020, 12:14 pm
ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಪರಿಣಾಮ ಕೆಎಸ್‌ಆರ್‌ಟಿಸಿಗೆ 412 ಕೋಟಿ ನಷ್ಟ ಸಂಭವಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಈಶಾನ್ಯ, ವಾಯುವ್ಯ ಸಾರಿಗೆ ಹಾಗೂ ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ಒಟ್ಟು ಅಂದಾಜು 1000 ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ.
Vijaya Karnataka Web ksrtc bus


ಎರಡು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಎಸ್‌ಆರ್‌ಟಿಸಿ 8,500 ಬಸ್‌ಗಳ ಸಂಚಾರದಿಂದ ಪ್ರತಿನಿತ್ಯ 9 ಕೋಟಿ ಆದಾಯ ಸಂಗ್ರವಾಗುತ್ತಿತ್ತು. ಅದರಂತೆ ವಾಯುವ್ಯ ಸಾರಿಗೆ ವಿಭಾಗದಲ್ಲಿ 230 ಕೋಟಿ ನಷ್ಟ ಸಂಭವಿಸಿದೆ. ಈ ವಿಭಾಗದಲ್ಲಿ 4676 ಬಸ್‌ಗಳು ಸಂಚಾರವಿದ್ದು ಪ್ರತಿನಿತ್ಯ 6 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು.

ಸಾರಿಗೆ ಅಭಿವೃದ್ದಿಗೆ ಇಸ್ರೋ ತಂತ್ರಜ್ಞಾನದ ನೆರವು ! ಕೆ. ಶಿವನ್ ಜೊತೆಗೆ ಸವದಿ ಮಾತುಕತೆ

ಈಶಾನ್ಯ ವಿಭಾಗದಲ್ಲಿ ಲಾಕ್‌ಡೌನ್ ಅವಧಿಯಲ್ಲಿ 240 ಕೋಟಿ ನಷ್ಟ ಸಂಭವಿಸಿದೆ. ಈ ವಿಭಾಗದಲ್ಲಿ 4252 ಬಸ್‌ಗಳ ಸಂಚಾರವಿದ್ದು, ಪ್ರತಿನಿತ್ಯ 5.75 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಇನ್ನು ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತದಿಂದಲೂ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಪ್ರತಿನಿತ್ಯ ಬಿಎಂಟಿಸಿಗೆ 3.5 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಲಾಕ್‌ಡೌನ್ ಅವಧಿಯಿಂದ 173. 34 ಕೋಟಿ ಅಂದಾಜು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದೆ ಇದ್ದರೆ ಲಾಕ್‌ಡೌನ್ ಅವಧಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಪರಿಣಾಮ ಸಾರ್ವಜನಿಕ ಸಾರಿಗೆ ಸಂಪರ್ಕ ಆರಂಭಗೊಳ್ಳುದು ಕಷ್ಟಸಾಧ್ಯ. ಇಷ್ಟೊಂದು ಪ್ರಮಾಣದ ನಷ್ಟವನ್ನು ಸರಿದೂಗಿಸಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ನಾಲ್ಕು ವಿಭಾಗಗಳಲ್ಲಿ 1.27 ಲಕ್ಷ ನೌಕರರಿದ್ದು ಆದಾಯ ಸಂಕಷ್ಟ ನೌಕರರ ವೇತನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಡವರ ನೆರವಿಗೆ ಭಾರತಕ್ಕೆ 65 ಸಾವಿರ ಕೋಟಿ ಅಗತ್ಯವಿದೆ: ಆರ್‌ಬಿಐ ಮಾಜಿ ಗವರ್ನರ್

ನೌಕರರ ವೇತನಕ್ಕೆ ಸರ್ಕಾರದಿಂದ 163 ಕೋಟಿ ಬಿಡುಗಡೆ

ಲಾಕ್‌ಡೌನ್‌ನಿಂದಾಗಿ ನಷ್ಟದಲ್ಲಿ ಕೆಎಸ್‌ಆರ್‌ಸಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ವೇತನ ಪಾವತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 163 ಕೋಟಿ ಬಿಡುಗಡೆಗೊಳಿಸಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಮಾತನಾಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ "ಲಾಕ್‌ಡೌನ್‌ ಕಾರಣದಿಂದಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ವೇತನ ಪಾವತಿ ಮಾಡುವುದು ನಮ್ಮ ಮುಂದಿರುವ ಸವಾಲು. ನೌಕರರ ವೇತನಕ್ಕಾಗಿ ಮಾಸಿಕ 325 ಕೋಟಿಯ ಅಗತ್ಯವಿದೆ. ಏನೇ ಸಮಸ್ಯೆ ಇದ್ದರೂ ನೌಕರರಿಗೆ ವೇತನ ಪಾವತಿ ಮಾಡುವುದು ನಮ್ಮ ಆದ್ಯತೆ ಆಗಿದೆ. ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ನಡೆಸಲಾಗಿದ್ದು, ಈಗಾಗಲೇ ಸರ್ಕಾರ 163 ಕೋಟಿ ಬಿಡುಗಡೆ ಮಾಡಿದೆ" ಎಂದು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ