ಆ್ಯಪ್ನಗರ

ಕುಕ್ಕೆ ದೇಗುಲಕ್ಕೆ ಚಿನ್ನದ ರಥ: ಪರಿಷ್ಕೃತ ಅಂದಾಜಿಗೆ ಅಸ್ತು

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನಿರ್ಮಾಣ ಮಾಡುವ ಒಟ್ಟು 80 ಕೋಟಿ ರೂ ಮೊತ್ತದ ಪರಿಷ್ಕೃತ ಅಂದಾಜಿಗೆ ಸಿಎಂ ಎಚ್‌ಡಿ...

Vijaya Karnataka 10 May 2019, 5:00 am
ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನಿರ್ಮಾಣ ಮಾಡುವ ಒಟ್ಟು 80 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜಿಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
Vijaya Karnataka Web kukke subramanyya gold chariot
ಕುಕ್ಕೆ ದೇಗುಲಕ್ಕೆ ಚಿನ್ನದ ರಥ: ಪರಿಷ್ಕೃತ ಅಂದಾಜಿಗೆ ಅಸ್ತು


2005ರಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿತ್ತು. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದ ಈ ಯೋಜನೆ ಬಗ್ಗೆ ಶ್ರೀಕ್ಷೇತ್ರದ ಪ್ರಮುಖರು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸದ್ಯದ ಚಿನ್ನದ ದರ ಹಾಗೂ ರಥ ನಿರ್ಮಾಣ ವೆಚ್ಚ ಸೇರಿ ಪರಿಷ್ಕೃತ ಅಂದಾಜು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಮುಂದಿಡಲು ಸಿಎಂ ಸೂಚಿಸಿದ್ದರು. ಅಂತೆಯೇ, ಒಟ್ಟು 80 ಕೋಟಿ ರೂ. ಪ್ರಸ್ತಾವನೆಗೆ ಗುರುವಾರ ಸಂಪುಟ ಸಭೆ ಅನುಮೋದನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ