ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಚಿವ ಸಂಪುಟ 7 ತಿಂಗಳ ಬಳಿಕ ವಿಸ್ತರಣೆಯಾದರೂ ಜಿಲ್ಲೆ ಹಾಗೂ ಜಾತಿಗಳ ಪ್ರಾತಿನಿಧ್ಯದಲ್ಲಿ ಸಮತೋಲನ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಮ್ಮಿಶ್ರ ಸರಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ನ ಯಾವುದೇ ಶಾಸಕರಿಲ್ಲ. ಈ ಎರಡೂ ಜಿಲ್ಲೆಗಳು ಸೇರಿದಂತೆ 11 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯವೇ ಇಲ್ಲ. ವಿಜಯಪುರ, ಬೀದರ್, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳು ಅತ್ಯಧಿಕ ತಲಾ ಮೂರು ಸ್ಥಾನಗಳನ್ನು ಪಡೆದಿದ್ದರೆ, ಬಳ್ಳಾರಿ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ತಲಾ ಎರಡೆರಡು ಸ್ಥಾನ ಪಡೆದಿವೆ. ಉಳಿದಂತೆ ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯವಿಲ್ಲ. ಉಳಿದ ಜಿಲ್ಲೆಗಳಿಗೆ ತಲಾ ಒಂದೊಂದು ಸ್ಥಾನ ದೊರೆತಿದೆ. ಕಾಂಗ್ರೆಸ್ ಪಕ್ಷ ಹೆಚ್ಚಿಗೆ ಸ್ಥಾನಗಳನ್ನು ಎಲ್ಲಿ ಗೆದ್ದಿದೆಯೋ ಅಂಥ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅದೇ ಮಾನದಂಡವನ್ನು ಜೆಡಿಎಸ್ ಕೂಡ ಅನುಸರಿಸಿದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಚುನಾವಣಾ ಫಲಿತಾಂಶದಲ್ಲಿ ಭಾರೀ ಹೊಡೆತಬಿದ್ದಿದ್ದು ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದ್ದರೂ ಪಕ್ಷ ಕೈಚೆಲ್ಲಿದಂತೆ ಕಾಣುತ್ತಿದೆ. ಈ ಜಿಲ್ಲೆಗಳಲ್ಲಿ ಪಕ್ಷದ ಶಾಸಕರಿದ್ದರೂ ಅವಕಾಶ ನಿರಾಕರಿಸಲಾಗಿದೆ.
ಇನ್ನು ಸಚಿವ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅತ್ಯಧಿಕ ಸಂಖ್ಯೆಯ 8 ಮಂದಿ ಒಕ್ಕಲಿಗ ಸಮುದಾಯದ ಸಚಿವರಿದ್ದರೆ ನಂತರದು ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯವರದು. ಈ ಎರಡೂ ಸಮುದಾಯಗಳಿಗೆ ತಲಾ ಐದು ಸ್ಥಾನಗಳು ಲಭ್ಯವಾಗಿದ್ದರೆ ಕುರುಬ ಸಮದಾಯದಿಂದ ನಾಲ್ವರು, ಮುಸ್ಲಿಂ ಕೋಟಾದಲ್ಲಿ ಮೂವರು ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಶಿಷ್ಟ ಪಂಗಡದ ಇಬ್ಬರು ಸಂಪುಟದಲ್ಲಿದ್ದಾರೆ. ಉಳಿದಂತೆ ರೆಡ್ಡಿ ಒಕ್ಕಲಿಗ, ಕ್ರಿಶ್ಚಿಯನ್, ಬ್ರಾಹ್ಮಣ, ಉಪ್ಪಾರ, ಈಡಿಗ ಸಮುದಾಯವನ್ನು ತಲಾ ಒಬ್ಬೊಬ್ಬರು ಪ್ರತಿನಿಧಿಸುತ್ತಿದ್ದಾರೆ. ಶನಿವಾರ ಸಂಪುಟ ವಿಸ್ತರಣೆ-ಪುನಾರಚನೆ ಬಳಿಕವೂ ಜೆಡಿಎಸ್ ಕೋಟಾದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಬಹುತೇಕ ಎರಡರಲ್ಲಿ ಒಂದು ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ಪರಿಶಿಷ್ಟ ಜಾತಿಗೆ ಸಿಗುವ ಸಾಧ್ಯತೆಗಳಿವೆ. ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿಗೆ ಏನಾದರೂ ಅದೃಷ್ಟ ಒಲಿದರೆ ಆಗ ಜೆಡಿಎಸ್ ಕೋಟಾದಲ್ಲಿ ಲಿಂಗಾಯತರಿಗೆ ಮತ್ತೊಂದು ಸ್ಥಾನ ಲಭ್ಯವಾಗಲಿದೆ.
ರಾಜ್ಯದ ಎರಡು ಪ್ರಬಲ ಸಮುದಾಯದ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಯಾವುದೇ ಸಚಿವ ಸಂಪುಟದಲ್ಲಿ ಬಹುತೇಕ ಹೆಚ್ಚು ಕಡಿಮೆ ಸಮಾನ ಪ್ರಾತಿನಿಧ್ಯ ದೊರೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಕಡಿಮೆ ಪ್ರಾತಿನಿಧ್ಯ ಕೊಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ಶನಿವಾರ ನೀಡಿರುವ ಹೇಳಿಕೆಯೇ ಇದಕ್ಕೆ ಪುಷ್ಟಿ ನೀಡುತ್ತದೆ. ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸದೇ ಇದ್ದರೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗಗಳ ಕೋಟಾದಲ್ಲಿ ಕುರುಬರು ಸಿಂಹಪಾಲು ಪಡೆದಿದ್ದರೆ ಇತರೆ ವರ್ಗಗಳಿಗೆ ಅವಕಾಶ ದೊರೆತಿಲ್ಲ. ಇದು ಸಂಪುಟದಲ್ಲಿರುವ ಜಾತಿ ಅಸಮತೋಲನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿವೆ.
ಜಿಲ್ಲಾವಾರು ಪ್ರಾತಿನಿಧ್ಯ
ಬೆಳಗಾವಿ- ಸತೀಶ್ ಜಾರಕಿಹೊಳಿ (1)
ಬಾಗಲಕೋಟೆ- ಆರ್.ಬಿ.ತಿಮ್ಮಾಪುರ (1)
ವಿಜಯಪುರ- ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಎಂ.ಸಿ.ಮನಗೂಳಿ (3)
ಕಲಬುರಗಿ- ಪ್ರಿಯಾಂಕ ಖರ್ಗೆ (1)
ಯಾದಗಿರಿ- ಇಲ್ಲ (0)
ಬೀದರ್- ಬಂಡೆಪ್ಪ ಕಾಶಂಪುರ, ರಾಜಶೇಖರ ಪಾಟೀಲ್, ರಹೀಂಖಾನ್ (3)
ರಾಯಚೂರು- ವೆಂಕಟರಾವ್ ನಾಡಗೌಡ (1)
ಕೊಪ್ಪಳ - ಇಲ್ಲ (0)
ಗದಗ- ಇಲ್ಲ (0)
ಧಾರವಾಡ- ಸಿ.ಎಸ್.ಶಿವಳ್ಳಿ (1)
ಉತ್ತರ ಕನ್ನಡ- ಆರ್.ವಿ.ದೇಶಪಾಂಡೆ (1)
ಹಾವೇರಿ - ಇಲ್ಲ (0)
ಬಳ್ಳಾರಿ- ಇ.ತುಕರಾಂ, ಪಿ.ಟಿ.ಪರಮೇಶ್ವರ್ ನಾಯಕ್ (2)
ಉಡುಪಿ- ಇಲ್ಲ (0)
ಕೊಡಗು- ಇಲ್ಲ (0)
ಚಿತ್ರದುರ್ಗ - ಇಲ್ಲ (0)
ದಾವಣಗೆರೆ- ಇಲ್ಲ (0)
ಶಿವಮೊಗ್ಗ -ಇಲ್ಲ (0)
ಚಿಕ್ಕಮಗಳೂರು - ಇಲ್ಲ (0)
ತುಮಕೂರು- ಡಾ.ಜಿ.ಪರಮೇಶ್ವರ, ವೆಂಕಟರಮಣಪ್ಪ, ಗುಬ್ಬಿ ಶ್ರೀನಿವಾಸ್ (3)
ಚಿಕ್ಕಬಳ್ಳಾಪುರ- ಜಿ.ಎಚ್.ಶಿವಶಂಕರ ರೆಡ್ಡಿ (1)
ಕೋಲಾರ- ಇಲ್ಲ (0)
ಬೆಂಗಳೂರು- ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹಮದ್ ಖಾನ್ (3)
ಬೆಂಗಳೂರು ಗ್ರಾಮಾಂತರ- ಎಂ.ಟಿ.ಬಿ.ನಾಗರಾಜ್ (1)
ರಾಮನಗರ- ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ (2)
ದಕ್ಷಿಣ ಕನ್ನಡ- ಯು.ಟಿ.ಖಾದರ್ (1)
ಮೈಸೂರು- ಜಿ.ಟಿ.ದೇವೇಗೌಡ,ಸಾ.ರಾ.ಮಹೇಶ್ (2)
ಚಾಮರಾಜನಗರ- ಪುಟ್ಟರಂಗಶೆಟ್ಟಿ (1)
ಹಾಸನ- ಎಚ್.ಡಿ.ರೇವಣ್ಣ (1)
ಮಂಡ್ಯ- ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು (2)
ಇನ್ನು ಸಚಿವ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅತ್ಯಧಿಕ ಸಂಖ್ಯೆಯ 8 ಮಂದಿ ಒಕ್ಕಲಿಗ ಸಮುದಾಯದ ಸಚಿವರಿದ್ದರೆ ನಂತರದು ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯವರದು. ಈ ಎರಡೂ ಸಮುದಾಯಗಳಿಗೆ ತಲಾ ಐದು ಸ್ಥಾನಗಳು ಲಭ್ಯವಾಗಿದ್ದರೆ ಕುರುಬ ಸಮದಾಯದಿಂದ ನಾಲ್ವರು, ಮುಸ್ಲಿಂ ಕೋಟಾದಲ್ಲಿ ಮೂವರು ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಶಿಷ್ಟ ಪಂಗಡದ ಇಬ್ಬರು ಸಂಪುಟದಲ್ಲಿದ್ದಾರೆ. ಉಳಿದಂತೆ ರೆಡ್ಡಿ ಒಕ್ಕಲಿಗ, ಕ್ರಿಶ್ಚಿಯನ್, ಬ್ರಾಹ್ಮಣ, ಉಪ್ಪಾರ, ಈಡಿಗ ಸಮುದಾಯವನ್ನು ತಲಾ ಒಬ್ಬೊಬ್ಬರು ಪ್ರತಿನಿಧಿಸುತ್ತಿದ್ದಾರೆ. ಶನಿವಾರ ಸಂಪುಟ ವಿಸ್ತರಣೆ-ಪುನಾರಚನೆ ಬಳಿಕವೂ ಜೆಡಿಎಸ್ ಕೋಟಾದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಬಹುತೇಕ ಎರಡರಲ್ಲಿ ಒಂದು ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ಪರಿಶಿಷ್ಟ ಜಾತಿಗೆ ಸಿಗುವ ಸಾಧ್ಯತೆಗಳಿವೆ. ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿಗೆ ಏನಾದರೂ ಅದೃಷ್ಟ ಒಲಿದರೆ ಆಗ ಜೆಡಿಎಸ್ ಕೋಟಾದಲ್ಲಿ ಲಿಂಗಾಯತರಿಗೆ ಮತ್ತೊಂದು ಸ್ಥಾನ ಲಭ್ಯವಾಗಲಿದೆ.
ರಾಜ್ಯದ ಎರಡು ಪ್ರಬಲ ಸಮುದಾಯದ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಯಾವುದೇ ಸಚಿವ ಸಂಪುಟದಲ್ಲಿ ಬಹುತೇಕ ಹೆಚ್ಚು ಕಡಿಮೆ ಸಮಾನ ಪ್ರಾತಿನಿಧ್ಯ ದೊರೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಕಡಿಮೆ ಪ್ರಾತಿನಿಧ್ಯ ಕೊಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ಶನಿವಾರ ನೀಡಿರುವ ಹೇಳಿಕೆಯೇ ಇದಕ್ಕೆ ಪುಷ್ಟಿ ನೀಡುತ್ತದೆ. ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸದೇ ಇದ್ದರೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗಗಳ ಕೋಟಾದಲ್ಲಿ ಕುರುಬರು ಸಿಂಹಪಾಲು ಪಡೆದಿದ್ದರೆ ಇತರೆ ವರ್ಗಗಳಿಗೆ ಅವಕಾಶ ದೊರೆತಿಲ್ಲ. ಇದು ಸಂಪುಟದಲ್ಲಿರುವ ಜಾತಿ ಅಸಮತೋಲನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿವೆ.
ಜಿಲ್ಲಾವಾರು ಪ್ರಾತಿನಿಧ್ಯ
ಬೆಳಗಾವಿ- ಸತೀಶ್ ಜಾರಕಿಹೊಳಿ (1)
ಬಾಗಲಕೋಟೆ- ಆರ್.ಬಿ.ತಿಮ್ಮಾಪುರ (1)
ವಿಜಯಪುರ- ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಎಂ.ಸಿ.ಮನಗೂಳಿ (3)
ಕಲಬುರಗಿ- ಪ್ರಿಯಾಂಕ ಖರ್ಗೆ (1)
ಯಾದಗಿರಿ- ಇಲ್ಲ (0)
ಬೀದರ್- ಬಂಡೆಪ್ಪ ಕಾಶಂಪುರ, ರಾಜಶೇಖರ ಪಾಟೀಲ್, ರಹೀಂಖಾನ್ (3)
ರಾಯಚೂರು- ವೆಂಕಟರಾವ್ ನಾಡಗೌಡ (1)
ಕೊಪ್ಪಳ - ಇಲ್ಲ (0)
ಗದಗ- ಇಲ್ಲ (0)
ಧಾರವಾಡ- ಸಿ.ಎಸ್.ಶಿವಳ್ಳಿ (1)
ಉತ್ತರ ಕನ್ನಡ- ಆರ್.ವಿ.ದೇಶಪಾಂಡೆ (1)
ಹಾವೇರಿ - ಇಲ್ಲ (0)
ಬಳ್ಳಾರಿ- ಇ.ತುಕರಾಂ, ಪಿ.ಟಿ.ಪರಮೇಶ್ವರ್ ನಾಯಕ್ (2)
ಉಡುಪಿ- ಇಲ್ಲ (0)
ಕೊಡಗು- ಇಲ್ಲ (0)
ಚಿತ್ರದುರ್ಗ - ಇಲ್ಲ (0)
ದಾವಣಗೆರೆ- ಇಲ್ಲ (0)
ಶಿವಮೊಗ್ಗ -ಇಲ್ಲ (0)
ಚಿಕ್ಕಮಗಳೂರು - ಇಲ್ಲ (0)
ತುಮಕೂರು- ಡಾ.ಜಿ.ಪರಮೇಶ್ವರ, ವೆಂಕಟರಮಣಪ್ಪ, ಗುಬ್ಬಿ ಶ್ರೀನಿವಾಸ್ (3)
ಚಿಕ್ಕಬಳ್ಳಾಪುರ- ಜಿ.ಎಚ್.ಶಿವಶಂಕರ ರೆಡ್ಡಿ (1)
ಕೋಲಾರ- ಇಲ್ಲ (0)
ಬೆಂಗಳೂರು- ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹಮದ್ ಖಾನ್ (3)
ಬೆಂಗಳೂರು ಗ್ರಾಮಾಂತರ- ಎಂ.ಟಿ.ಬಿ.ನಾಗರಾಜ್ (1)
ರಾಮನಗರ- ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ (2)
ದಕ್ಷಿಣ ಕನ್ನಡ- ಯು.ಟಿ.ಖಾದರ್ (1)
ಮೈಸೂರು- ಜಿ.ಟಿ.ದೇವೇಗೌಡ,ಸಾ.ರಾ.ಮಹೇಶ್ (2)
ಚಾಮರಾಜನಗರ- ಪುಟ್ಟರಂಗಶೆಟ್ಟಿ (1)
ಹಾಸನ- ಎಚ್.ಡಿ.ರೇವಣ್ಣ (1)
ಮಂಡ್ಯ- ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು (2)