ಆ್ಯಪ್ನಗರ

ದಿವ್ಯಾಂಗ ಅಭಿಮಾನಿ ಮದುವೆಗೆ ಹಾಜರಾದ ಎಚ್‌ಡಿಕೆ

ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಮದ್ವೆ ಆಗೋಕೆ 2 ವರ್ಷ ಕಾದಿದ್ದ ದಿವ್ಯಾಂಗ ಅಭಿಮಾನಿ

ವಿಕ ಸುದ್ದಿಲೋಕ 30 May 2017, 6:04 pm
ಬಾಗಲಕೋಟೆ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಗಮಿಸಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಎರಡು ವರ್ಷಗಳಿಂದ ಹಠ ಹಿಡಿದ್ದ ಅಭಿಮಾನಿ, ಕೊನೆಗೂ ಎಚ್‌ಡಿಕೆ ಉಪಸ್ಥಿತಿಯಲ್ಲಿಯೇ ಹಸೆಮಣೆ ಏರಿದ್ದಾನೆ.
Vijaya Karnataka Web kumaraswamy attended physcially challenged wedding
ದಿವ್ಯಾಂಗ ಅಭಿಮಾನಿ ಮದುವೆಗೆ ಹಾಜರಾದ ಎಚ್‌ಡಿಕೆ




ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಅಭಿಮಾನಿ ಶ್ರೀಶೈಲ ವಧುವಿಗೆ ತಾಳಿಕಟ್ಟಿದ್ದಾರೆ. ಕೊಟ್ಟ ಮಾತಿನಂತೆ ಎಚ್‌ಡಿಕೆ ಮದುವೆಗೆ ಆಗಮಿಸಿ ಅಭಿಮಾನಿಯನ್ನು ಹರಸಿ, ಶುಭ ಕೋರಿದ್ದಾರೆ.

ಬೆಂಗಳೂರಲ್ಲಿ ಆರ್ಕೆಸ್ಟ್ರಾ ಕಲಾವಿದನಾಗಿರುವ ಬಾಗಲಕೋಟೆಯ ತೆಗ್ಗಿ ಗ್ರಾಮದ ಶ್ರೀಶೈಲ ಲಾಮಣಿ ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿ. ವಿಕಲಚೇತನರಾಗಿರುವ ಶ್ರೀಶೈಲ ಅವರಿಗೆ ಶಾರದಾ ಎಂಬುವವರ ಜತೆ ವಿವಾಹ ನಿಶ್ಚಯವಾಗಿತ್ತು. ನಂತರ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು ಶ್ರೀಶೈಲ, ನಿಮ್ಮ ಉಪಸ್ಥಿತಿಯಲ್ಲಿ ಮದುವೆ ಆಗಬೇಕು ಎಂಬ ಹಂಬಲವನ್ನು ತೋಡಿಕೊಂಡಿದ್ದರು.

ಕಳೆದ ತಿಂಗಳು ಕುಮಾರಸ್ವಾಮಿ ಬಾಗಲಕೋಟೆಗೆ ಬರಬೇಕಾಗಿತ್ತಾದರೂ ಕಾರಣಾಂತರಗಳಿಂದ ಮುಂದೂಡಿದ್ದರು. ಇದರಿಂದ ಕುಮಾರಸ್ವಾಮಿ ಅವರಿಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ಶ್ರೀಶೈಲ ತಮ್ಮ ಮದುವೆಯನ್ನೂ ಮುಂದೂಡಿದ್ದರು.

ಮೇ.30ರಂದು ಬಾಗಲಕೋಟೆಯಲ್ಲಿ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳುವುದರಿಂದ ಅಂದೇ ವಿವಾಹ ಮಾಡಿಕೊಳ್ಳಲು ಶ್ರೀಶೈಲ ನಿರ್ಧರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ