ಆ್ಯಪ್ನಗರ

ಸದನದಲ್ಲಿ 'ಭೂಸುಧಾರಣಾ ಕಾಯಿದೆ' ಗದ್ದಲ: ಸಭಾತ್ಯಾಗ ಮಾಡಿದ ಕಾಂಗ್ರೆಸ್‌

ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಶನಿವಾರ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು. ಕಾಂಗ್ರೆಸ್ ಸದಸ್ಯರು ಕಾಯಿದೆ ತಿದ್ದುಪಡಿಗೆ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಸದಸ್ಯರೆಲ್ಲರೂ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಿಲ್ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು.

Vijaya Karnataka Web 26 Sep 2020, 3:24 pm
ಬೆಂಗಳೂರು: ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಶನಿವಾರ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು. ಕಾಯಿದೆಯ ತಿದ್ದುಪಡಿ ಕುರಿತಂತೆ ಕಂದಾಯ ಇಲಾಖೆ ಸಚಿವ ಆರ್‌. ಅಶೋಕ್ ಅವರು ವಿಧಾನಸಭೆಯಲ್ಲಿ ವಿವರಣೆ ನೀಡುತ್ತಿದ್ದ ಸಂದರ್ಭ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಕಾಂಗ್ರೆಸ್ ಸದಸ್ಯರು ಕಾಯಿದೆ ತಿದ್ದುಪಡಿಗೆ ಧಿಕ್ಕಾರ ಕೂಗಿದರು.
Vijaya Karnataka Web R ashok


ಕಾಂಗ್ರೆಸ್ ಸದಸ್ಯರೆಲ್ಲರೂ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಿಲ್ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು. ಸರ್ಕಾರ ರೈತ ವಿರೋಧಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಆರ್. ಆಶೋಕ್ ಅವರು ಮಾತು ಮುಂದುವರಿಸಿದರು. ಕಾಂಗ್ರೆಸ್ ಅವಧಿಯಲ್ಲಿ ಭೂ ಖರೀದಿ ಯುನಿಟ್ ಹೆಚ್ಚಳ ಮಾಡಿದ್ದಾರೆ. 79 ಎ ಹಾಗೂ 79ಬಿ ಅಪ್ರಸ್ತುತ ಎಂದು ಕಾಂಗ್ರೆಸ್ ಅವಧಿಯಲ್ಲಿ ಕ್ಯಾಬಿನೆಟ್ ಉಪ ಸಮಿತಿ ವರದಿ ಕೊಟ್ಟಿದೆ. 2015 ರಲ್ಲಿ 20 ಇದ್ದಿದ್ದನ್ನು 40 ಯುನಿಟ್ ಗೆ ಏರಿಕೆ ಮಾಡಿದ್ದು ಕಾಂಗ್ರೆಸ್ ಎಂದು ಆರ್‌. ಅಶೋಕ್ ಅವರು ತಿಳಿಸಿದರು.

ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಮತ್ತೆ ಜಮೀನ್ದಾರಿ ಪದ್ದತಿಗೆ ಹೋಗುವ ಅನುಮಾನವಿದೆ ; ಎಚ್‌ಡಿಕೆ

79 ಎ ಹಾಗೂ 79 ಬಿ ರದ್ದು ಮಾಡಬೇಕು ಎಂದು ರೈತ ಮುಖಂಡ ಪ್ರೊ. ‌ನಂಜುಡಸ್ವಾಮಿ ಅವರು ವಿಧಾನಸಭೆಯಲ್ಲಿ ಕೂಡ ಹೇಳಿದ್ದರು‌ ಎಂದು ಕಾಯಿದೆಯ ತಿದ್ದುಪಡಿಯನ್ನು ಆರ್‌. ಅಶೋಕ್‌ ಅವರು ಸಮರ್ಥನೆ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ