ಆ್ಯಪ್ನಗರ

ಅತೃಪ್ತರಿಗೆ ಕೈನಾಯಕರ ಮನವಿ

ಅತೃಪ್ತರ ಮನವೊಲಿಸುವ ಎಲ್ಲ ಯತ್ನ ವಿಫಲವಾದದ್ದರಿಂದ ಕಡೆಯದಾಗಿ ಮನವಿ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರು ವಾಪಸ್‌ ಬರುವಂತೆ ಮುಂಬಯಿನಲ್ಲಿರುವ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ.

Vijaya Karnataka 16 Jul 2019, 5:00 am
ಬೆಂಗಳೂರು: ಅತೃಪ್ತರ ಮನವೊಲಿಸುವ ಎಲ್ಲ ಯತ್ನ ವಿಫಲವಾದದ್ದರಿಂದ ಕಡೆಯದಾಗಿ ಮನವಿ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರು ವಾಪಸ್‌ ಬರುವಂತೆ ಮುಂಬಯಿನಲ್ಲಿರುವ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ.
Vijaya Karnataka Web last request to rebel mlas
ಅತೃಪ್ತರಿಗೆ ಕೈನಾಯಕರ ಮನವಿ


ಸೋಮವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಕೈನಾಯಕರು ಈ ಮನವಿ ಮಾಡಿಕೊಂಡರು. ಶಾಸಕರು ವಾಪಸ್‌ ಬರುವ ವಿಶ್ವಾಸವಿರುವುದಾಗಿಯೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಬೆದರಿಕೆಯಿದೆ: ''ನಮ್ಮ ಶಾಸಕರಿಗೆ ಬಿಜೆಪಿಯಿಂದ ಬೆದರಿಕೆಯಿದೆ. ಹಾಗಾಗಿ ಸೂಕ್ತ ರಕ್ಷಣೆ ನೀಡುವಂತೆ ಗೃಹ ಸಚಿವರು ಹಾಗೂ ಡಿಜಿಗೆ ಮನವಿ ಮಾಡಿಕೊಳ್ಳಲಾಗಿದೆ,'' ಎಂದು ಗುಂಡೂರಾವ್‌ ಹೇಳಿದ್ದಾರೆ.

ವಾಸ್ತವ್ಯ ಬದಲು: ಯಶವಂತಪುರ ಬಳಿಯ ಹೋಟೆಲ್‌ನಲ್ಲಿದ್ದ ಕಾಂಗ್ರೆಸ್‌ ಶಾಸಕರನ್ನು ಇದೀಗ ವಿಮಾನ ನಿಲ್ದಾಣ ರಸ್ತೆಯ ರೆಸಾರ್ಟ್‌ಗೆ ಸ್ಥಳಾಂತರಿಸಲು ಕೈನಾಯಕರು ನಿರ್ಧಾರ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ