ಆ್ಯಪ್ನಗರ

ಹಿಂಗಾರು ಆಗಮನ ವಿಳಂಬ

ಅ.8 ರಂದು ಹಿಂಗಾರು ಆಗಮನವಾಗುವುದರಿಂದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಹಾಗೂ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಮುಂಗಾರು ಪೂರ್ಣವಾಗಿ ಹಿಂದೆ ಸರಿಯಲು ಸಾಧ್ಯವಾಗಿಲ್ಲ.

Vijaya Karnataka 9 Oct 2018, 7:34 am
ಬೆಂಗಳೂರು: ಅರಬ್ಬಿ ಸಮುದ್ರದ ನೈಋುತ್ಯ ಭಾಗದಲ್ಲಿ 'ಲುಬಾನ್‌' ಚಂಡಮಾರುತ ಉಂಟಾಗಿರುವುದು ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿರುವುದರಿಂದ ರಾಜ್ಯಕ್ಕೆ ಹಿಂಗಾರು ಆಗಮನವಾಗಿಲ್ಲ.
Vijaya Karnataka Web Rain


ಅ.8 ರಂದು ಹಿಂಗಾರು ಆಗಮನವಾಗುವುದರಿಂದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಹಾಗೂ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಮುಂಗಾರು ಪೂರ್ಣವಾಗಿ ಹಿಂದೆ ಸರಿಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಿಂಗಾರು ಆಗಮನಕ್ಕೆ ಪೂರಕ ವಾತಾವರಣ ದೊರೆತಿಲ್ಲ. ಹವಾಮಾನ ತಜ್ಞರ ಪ್ರಕಾರ ಅ.10 ನಂತರ ಹಿಂಗಾರು ಆಗಮನವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮುಂಗಾರು ದುರ್ಬಲಗೊಳ್ಳುತ್ತಿದ್ದರೂ ದಕ್ಷಿಣ ಒಳನಾಡಿನಲ್ಲಿ ಕೆಲ ಪ್ರದೇಶಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಾಲಾಡಿಯಲ್ಲಿ 70 ಮಿ.ಮೀ., ಬೆಳ್ತಂಗಡಿಯಲ್ಲಿ 41 ಮಿ.ಮೀ., ಮಡಿಕೇರಿಯಲ್ಲಿ 48 ಮಿ.ಮೀ., ಚಾಮರಾಜನಗರದಲ್ಲಿ 45 ಮಿ.ಮೀ., ಕಾರ್ಕಳದಲ್ಲಿ 38 ಮಿ.ಮೀ., ಹುಣಸೂರಿನಲ್ಲಿ 10 ಮಿ.ಮೀ. ಮಳೆ ಸುರಿದಿದೆ.

''ಅರಬ್ಬಿ ಸಮುದ್ರದಲ್ಲಿರುವ ಚಂಡಮಾರುತದ ಪರಿಣಾಮ ಕಡಿಮೆಯಾದರೆ ಹಿಂಗಾರು ಆಗಮನ ಸಾಧ್ಯವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಿರುವುದರಿಂದ ಹಿಂಗಾರು ಆಗಮನ ವಿಳಂಬವಾಗಿದೆ. ಅ.10 ರ ನಂತರ ಹಿಂಗಾರು ಆಗಮನಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬಹುದು,'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ