ಆ್ಯಪ್ನಗರ

ವಿಧಾನಮಂಡಲ ಅಧಿವೇಶನ ಇಂದಿನಿಂದ

ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು ರಾಜ್ಯಪಾಲ ವಿಆರ್‌ ವಾಲಾ ಜಂಟಿ ಸದನ ಉದ್ದೇಶಿಸಿ ಮಧ್ಯಾಹ್ನ 12.30 ಕ್ಕೆ ಭಾಷಣ ಮಾಡಲಿದ್ದಾರೆ.

Vijaya Karnataka Web 2 Jul 2018, 10:10 am
ಬೆಂಗಳೂರು: ವಿಧಾನಮಂಡಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು ರಾಜ್ಯಪಾಲ ವಿ.ಆರ್‌. ವಾಲಾ ಜಂಟಿ ಸದನ ಉದ್ದೇಶಿಸಿ ಮಧ್ಯಾಹ್ನ 12.30 ಕ್ಕೆ ಭಾಷಣ ಮಾಡಲಿದ್ದಾರೆ.
Vijaya Karnataka Web vidhana soudha


ಜುಲೈ 5 ರಂದು ಸಿಎಂ ಎಚ್‌ಡಿಕೆ, ಮೈತ್ರಿ ಸರಕಾರದ ಮೊದಲ ಬಜೆಟ್‌ ಮಂಡಿಸಲಿದ್ದಾರೆ. ಜುಲೈ 12 ರಂದು ಅಧಿವೇಶನ ಅಂತ್ಯಗೊಳ್ಳಲಿದೆ.

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ 2ನೇ ಅಧಿವೇಶನ ಇದಾಗಿದೆ. ಮೇ 25 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಬಳಿಕ 2ನೇ ಬಾರಿಗೆ ಅಧಿವೇಶನ ಎದುರಿಸುತ್ತಿದ್ದಾರೆ. ಪ್ರಬಲ ಪ್ರತಿಪಕ್ಷವಾಗಿ ಬಿಜೆಪಿಯನ್ನು ಎದುರಿಸುವ ಜತೆಗೆ, ಮಿತ್ರಪಕ್ಷ ಕಾಂಗ್ರೆಸ್‌ ಅನ್ನು ಸಂಬಾಳಿಸಬಬೇಕಿದೆ.

ಪ್ರಸ್ತತ ಅಧಿವೇಶನದಲ್ಲಿ ಸಾಲ ಮನ್ನಾ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಿ ಬಿಜೆಪಿಯೂ ಸಿದ್ಧವಾಗಿದೆ. ಈ ನಡುವೆ ದೋಸ್ತಿ ಸರಕಾರದಲ್ಲಿನ ಸಮನ್ವಯತೆಯ ಕೊರತೆಯಿಂದ ಸಚಿವರು ಇನ್ನೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜನರಿಗೆ ಸ್ಪಂದಿಸದಿರುವ ಬಗ್ಗೆಯೂ ಬಿಜೆಪಿ ಪ್ರಸ್ತಾಪಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ