ಆ್ಯಪ್ನಗರ

ವಿಧಾನಸಭೆ ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ: ಏಳು ದಿನದಲ್ಲಿ 38 ಗಂಟೆ ಚರ್ಚೆ

ವಿಧಾನಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ. ಜನವರಿ 28 ರಿಂದ ಆರಂಭವಾಗಿದ್ದ ರಾಜ್ಯದ ವಿಧಾನಸಭೆ ಅಧಿವೇಶನ ಒಟ್ಟು ಏಳು ದಿನಗಳ ಕಾಲ ನಡೆದಿದೆ. ಈ ಅವಧಿಯಲ್ಲಿ ಒಟ್ಟು 38 ಗಂಟೆ 50 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ.

Vijaya Karnataka Web 5 Feb 2021, 4:14 pm
ಬೆಂಗಳೂರು: ವಿಧಾನಸಭೆ ಅಧಿವೇಶನವನ್ನು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶುಕ್ರವಾರ ಅನಿರ್ದಿಷ್ಟಾವಧಿ ಕಾಲ ಮುಂದೂಡಿಕೆ ಮಾಡಿದರು.ಜನವರಿ 28 ರಿಂದ ರಾಜ್ಯದ ವಿಧಾನಸಭೆ ಅಧಿವೇಶನ ಆರಂಭವಾಗಿತ್ತು. ಫೆ. 5 ರ ವರೆಗೆ ನಡೆದ ಅಧಿವೇಶನವನ್ನು ಇಂದು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಯಿತು.
Vijaya Karnataka Web karnataka assembly


ಈ ಬಾರಿ ಒಟ್ಟು ಏಳು ದಿನಗಳ ಕಾಲ 38 ಗಂಟೆ 50 ನಿಮಿಷಗಳ ಕಾಲ ಅಧಿವೇಶನ ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ 20 ಸದಸ್ಯರಿಂದ ಚರ್ಚೆ ನಡೆಯಿತು. ಅಧಿವೇಶನದಲ್ಲಿ 1 ಅಧಿಸೂಚನೆ, 3 ಅಧ್ಯಾದೇಶ, 42 ವಾರ್ಷಿಕ ವರದಿ, 20 ಲೆಕ್ಕ ಪರಿಶೋಧನೆ ವರದಿ, 2 ಅನುಷ್ಠಾನ ವರದಿ ಮಂಡನೆಯಾಗಿವೆ.

ಭಗವಾನ್‌ ಪಾಕಿಸ್ತಾನದಲ್ಲಿ ಇದ್ದಿದ್ರೆ ತಲೆ ತೆಗಿತಿದ್ರು, ಪುಣ್ಯಕ್ಕೆ ಭಾರತದಲ್ಲಿದ್ದಾರೆ: ಸಿಟಿ ರವಿ

ಅಧಿವೇಶನದಲ್ಲಿ ಒಟ್ಟು 14 ವಿಧೇಯಕಗಳಿಗೆ ಅಂಗೀಕಾರ ನೀಡಲಾಯಿತು. ಒಂದು ನಿಲುವಳಿ ಸೂಚನೆಯನ್ನು ನಿಯಮ 69ರಡಿ ಚರ್ಚೆ ನಡೆಸಲಾಯಿತು. ಒಟ್ಟು 1320 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. 88 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಲಾಯಿತು. 897 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಯಿತು. 168 ಗಮನ ಸೆಳೆಯುವ ಸೂಚನೆಗಳ ಪೈಕಿ 69 ಸೂಚನೆಗಳನ್ನು ಚರ್ಚಿಸಲಾಗಿದ್ದು, ಉತ್ತರ ನೀಡಲಾಗಿದೆ.

ಏರೋ ಇಂಡಿಯಾ 2021 ಸೂಪರ್ ಸಕ್ಸಸ್: ಭಾರತ ಆತ್ಮನಿರ್ಭರತೆಯತ್ತ ಹೆಜ್ಜೆ ಇಟ್ಟಿದೆ ಎಂದರು ರಾಷ್ಟ್ರಪತಿ

ಅಧಿವೇಶನದಲ್ಲಿ ಮಂಡನೆಯಾದ ಮಸೂದೆಗಳಿವು
  • ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ
  • ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ
  • ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ
  • ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ
  • ಕರ್ನಾಟಕ ಲೋಕಾಯುಕ್ತ ಮೂರನೇ ತಿದ್ದುಪಡಿ ವಿಧೇಯಕ
  • ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಎರಡನೇ ತಿದ್ದುಪಡಿ
  • ಕರ್ನಾಟಕ ಸಾಂಕ್ರಾಮಿಕ ರೋಗಗಳು ತಿದ್ದುಪಡಿ ವಿಧೇಯಕ
  • ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ
  • ಕರ್ನಾಟಕ ನಗರಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕ
  • ಕರ್ನಾಟಕ ಪೌರಸಭೆಗಳ ನಾಲ್ಕನೇ ತಿದ್ದುಪಡಿ ವಿಧೇಯಕ
  • ಕರ್ನಾಟಕ ನಗರಪಾಲಿಕೆಗಳ ಮತ್ತು ಇತರ ಕೆಲವು ಕಾನೂನು ವಿಧೇಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ