ಆ್ಯಪ್ನಗರ

ಪ್ರಮಾಣ ಮಾಡ್ತೀನಿ, ನಾನು ಬಿಎಸ್‌ವೈ ವಿರುದ್ಧ ಪತ್ರ ಬರೆದಿಲ್ಲ! ಹೀಗಂತ ಹೇಳಿದ್ದು ಯಾರು?

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಅವರ ಮಾಜಿ ಆಪ್ತ ಕಾರ್ಯದರ್ಶಿ ಎನ್‌.ಆರ್‌ ಸಂತೋಷ್‌ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ವೈರಲ್ ಆಗುತ್ತಿದೆ.

Vijaya Karnataka Web 15 Mar 2020, 4:08 pm
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕೆಲವು ದಿನಗಳಿಂದ ‘ಪತ್ರ ವ್ಯವಹಾರದ’ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧವಾಗಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದಕ್ಕೆ ಉತ್ತರ ಎಂಬುವಂತೆ ಬಿಎಸ್‌ವೈ ಪರವಾಗಿ ಬರೆದಿರುವ ಪತ್ರವೂ ವೈರಲ್ ಆಗಿತ್ತು.
Vijaya Karnataka Web bs yeddyurappa


ಈ ವಿಚಾರ ಸಿಎಂ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಯಡಿಯೂರಪ್ಪನವರ ಮಾಜಿ ಆಪ್ತ ಕಾರ್ಯದರ್ಶಿ ಎನ್‌.ಆರ್‌ ಸಂತೋಷ್‌ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ವೈರಲ್ ಆಗುತ್ತಿದೆ.

ಸದನದಲ್ಲಿ ಮತ್ತೆ ಗುರು-ಶಿಷ್ಯರಾದ ಸಿದ್ದು, ರೆಬಲ್‌ ಶಾಸಕರು, ಕೇಸರಿ ನಾಯಕರ ಮೊಗದಲ್ಲಿ ಹುಸಿ ಕೋಪ

ಬಿಎಸ್‌ವೈ ವಿರುದ್ಧವಾಗಿ ಕೆಲವು ಅಸಮಾಧಾನಿತ ಶಾಸಕರು ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಸಂಗತಿಯೂ ಚರ್ಚೆಯಲ್ಲಿದೆ. ಬೆಂಗಳೂರಿನಲ್ಲಿ ಸಚಿವ ನಿವಾಸದಲ್ಲಿ ಕೆಲವು ಸಚಿವಾಕಾಂಕ್ಷಿಗಳು ಇತ್ತೀಚೆಗೆ ಸಭೆಯನ್ನು ಸೇರಿದ್ದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಸೇರಿದಂತೆ ಯಡಿಯೂರಪ್ಪ ಬಣದ ಕೆಲವು ನಡೆಗಳಿಂದ ಅಸಮಾಧಾನಿತಗೊಂಡಿರುವ ಇವರೆಲ್ಲಾ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಪಿನಲ್ಲಿ ಎನ್‌.ಆರ್‌ ಸಂತೋಷ್‌ ಕೂಡಾ ಕಾಣಿಸಿಕೊಂಡಿದ್ದರು.

ಬಿಎಸ್‌ವೈ ವಿರುದ್ಧ ವರಿಷ್ಠರಿಗೆ ಪತ್ರ ಬರೆದಿದ್ದು ಎನ್‌.ಆರ್‌ ಸಂತೋಷ್‌ ಎಂಬ ಆರೋಪವೂ ಪಕ್ಷದ ವಲಯದಲ್ಲಿ ಕೇಳಿಬಂದಿತ್ತು. ಬಹಿರಂಗವಾಗಿ ಆರೋಪ ಮಾಡದಿದ್ದರೂ ಆಂತರಿಕವಾಗಿ ಬಿಎಸ್‌ವೈ ಆಪ್ತರು ಎನ್‌.ಆರ್‌ ಸಂತೋಷ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಎನ್‌.ಆರ್‌ ಸಂತೋಷ್ , ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಹಾಗೂ ಬಿಎಸ್‌ವೈ ವಿರುದ್ಧ ದೂರು ಹೇಳಲು ದೆಹಲಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಡೋಜ ಪಾಟೀಲ ಪುಟ್ಟಪ್ಪರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಶೀಘ್ರ ಪ್ರದಾನ: ಸಿಎಂ ಬಿಎಸ್ವೈ ಭರವಸೆ

ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಆಡಳಿದಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಯಡಿಯೂರಪ್ಪನವರಿಂದ ನಾನು ಸಾಕಷ್ಟು ಪಾಠ ಕಲಿತಿದ್ದೇನೆ. ಹೀಗಿದ್ದರೂ ನನ್ನ ವಿರುದ್ಧ ಯಾರದೋ ಪ್ರಲೋಭನೆಯಿಂದ ಸುಳ್ಳು ಆರೋಪವನ್ನು ಹೊರಿಸಲಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

ನನ್ನ ವಿರುದ್ಧ ಮಾಡಿರುವ ಆರೋಪಗಳಿಂದ ನನಗೆ ನೋವಾಗಿದೆ ಎಂದಿರುವ ಸಂತೋಷ್‌ ಬಿಎಸ್‌ವೈ ನನಗೆ ಗುರುವಾಗಿದ್ದು, ಗುರು ದೂಷಣೆ ಮಾಡಬಾರದು ಆದರೆ ನಾನು ಗುರುವಿನಿಂದ ದೂರ ಉಳಿದಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್‌ ಆಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ