ಆ್ಯಪ್ನಗರ

ಲಿಂಗಾಯತ ಧರ್ಮ: ಮನವಿಯೇ ಬಂದಿಲ್ಲ ಎಂದ ಸಿಎಂ

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಮನವಿ ಬಾರದಿದ್ದರೂ ನಾವು ಹೇಗೆ ಶಿಫಾರಸು ಮಾಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಕ ಸುದ್ದಿಲೋಕ 26 Jul 2017, 1:14 pm
ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಮನವಿ ಬಾರದಿದ್ದರೂ ನಾವು ಹೇಗೆ ಶಿಫಾರಸು ಮಾಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web lingayat religion issue
ಲಿಂಗಾಯತ ಧರ್ಮ: ಮನವಿಯೇ ಬಂದಿಲ್ಲ ಎಂದ ಸಿಎಂ


ವಿಧಾನಸೌಧದಲ್ಲಿ ಮಾತನಾಡಿದ ಅವರು ಸ್ವತಂತ್ರ ಧರ್ಮಕ್ಕೆ ಮನವಿ ಕೊಡಲಿ, ಅಮೇಲೆ ನೋಡೋಣ ಎಂದು ಹೇಳಿದರು. ಬಿಜೆಪಿಯವರು ಜಾತಿವಾದಿಗಳು, ಜಾತಿವಾದಿಗಳಿಗೆ ಜಾತಿ ರಾಜಕಾರಣ ಮಾಡುತ್ತಾರೆ ಅನಿಸುತ್ತದೆ ಎಂದರು.

ಲಿಂಗಾಯತ ಧರ್ಮದ ವಿಚಾರ ಈಗಿನದಲ್ಲ. ಹಿಂದಿನಿಂದಲೂ ಲಿಂಗಾಯತ ಧರ್ಮದ ಬೇಡಿಕೆ ಇತ್ತು. ಈಗ ಬಿಜೆಪಿ ವಿರೋಧಿಸುವುದರಲ್ಲಿ ಅರ್ಥ ಇಲ್ಲ. ಹಿಂದೆ ಯಡಿಯೂರಪ್ಪ ಅವರು ಒಂದು ಗುಂಪನ್ನು 2ಎಗೆ ಸೇರಿಸಿ ಅಂತ ವೀರಶೈವ ಲಿಂಗಾಯತ ಎಂದು ವಿಭಾಗಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಗೊತ್ತಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಗೃಹ ಖಾತೆ ಯಾರಿಗೆ ಅಂತ ಸಿಎಂ ನಿರ್ಧಾರ ಮಾಡುತ್ತಾರೆ. ಸಿಎಂ ಜತೆ ಖಾಸಗಿ ಚರ್ಚೆ ನಡೆಸಿದ್ದೇನೆ, ಅದೆಲ್ಲವನ್ನು ಹೇಳಲಾಗದು,' ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ