ಬೆಂಗಳೂರು: ರಾಜ್ಯವ್ಯಾಪಿ ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನಗಳ (ಮೊಬೈಲ್ ಶಾಪ್) ಮೂಲಕ ಮದ್ಯ ಸರಬರಾಜು ಮಾಡುವ ಮಹತ್ವದ ಹಾಗೂ ವಿವಾದಿತ ತೀರ್ಮಾನವನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಅಬಕಾರಿ ಇಲಾಖಾ ಅಧಿಕಾರಿಗಳ ಸಭೆ ಬಳಿಕ ಸಚಿವ ಎಚ್.ನಾಗೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು. 'ಬಡವರಿಗೆ ಗುಣಮಟ್ಟದ ಮದ್ಯ ಪೂರೈಕೆ, ಸಾರ್ವಜನಿಕ ಬೊಕ್ಕಸಕ್ಕೆ ಆದಾಯ' ಅಬಕಾರಿ ಇಲಾಖೆಯ ಗುರಿ ಎಂದು ಅವರು ಘೋಷಿಸಿದರು.
''ಪ್ರಸ್ತುತ ತಾಂಡಾಗಳ ಜನರು ಸ್ವತಃ ತಾವೇ ಸಾರಾಯಿ ತಯಾರಿಸಿ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಗ್ರಾಮಗಳಂತಿರುವ ತಾಂಡಾಗಳಿಗೆ ಸಮೀಪದಲ್ಲಿ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯುವುದು ಕಷ್ಟ. ಈ ಕಾರಣಕ್ಕೆ ಮೊಬೈಲ್ ವಾಹನಗಳ ಮೂಲಕ ತಾಂಡಾಗಳ ಜನರಿಗೆ ಮದ್ಯ ತಲುಪಿಸಲು ನಿರ್ಧರಿಸಲಾಗಿದೆ. ಆದರೆ, ತಾಂಡಾಗಳ ಜನರಿಗೆ ಮಾರಾಟ ಮಾಡುವ ಮದ್ಯಕ್ಕೆ ಯಾವುದೇ ಸಬ್ಸಿಡಿ ಅಥವಾ ರಿಯಾಯಿತಿ ಇರುವುದಿಲ್ಲ. ಎಂಆರ್ಪಿ ಬೆಲೆಗೇ ಮದ್ಯ ಖರೀದಿಸಬೇಕಾಗುತ್ತದೆ'' ಎಂದು ಸಚಿವರು ಸ್ಪಷ್ಟಪಡಿಸಿದರು.
''ತಾಂಡಾಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಸೇವನೆ ಜತೆಗೆ, ಯಾದಗಿರಿ, ರಾಯಚೂರು ಗಡಿಭಾಗದಲ್ಲಿ ಆಂಧ್ರಪ್ರದೇಶದ ಅಗ್ಗದ ಸೇಂದಿಯನ್ನು ಅಲ್ಲಿನ ಜನ ಅವಲಂಬಿಸಿದ್ದಾರೆ. ಇದರಿಂದ ಆ ಭಾಗದಲ್ಲಿ ರಾಜ್ಯದ ಮದ್ಯ ಮಾರಾಟವಾಗುತ್ತಿಲ್ಲದ ಕಾರಣ ಆದಾಯವೂ ಇಲ್ಲ. ಬೆಳಗಾವಿ, ವಿಜಯಪುರ, ಬಾಗಲಕೋಟ ಭಾಗದಲ್ಲಿ ಕಳ್ಳಭಟ್ಟಿ ದಂಧೆ ಅವ್ಯಾಹತವಾಗಿ ನಡೆದಿದೆ. ಇದೆಲ್ಲದಕ್ಕೂ ಪರಿಹಾರವಾಗಿ ಬಡವರಿಗೆ ಗುಣಮಟ್ಟದ ಮದ್ಯವೂ ಸಿಗಬೇಕು, ಸರಕಾರಕ್ಕೆ ಆದಾಯವೂ ಬರಬೇಕು. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.
ಮನೆಮನೆಗೆ ಮದ್ಯ
''ಕೆಎಂಎಫ್ ಹಾಲಿನ ಮಾದರಿಯಲ್ಲಿ ಬೇಡಿಕೆ ಆಧರಿಸಿ ಮನೆಮನೆಗಳಿಗೆ ಮದ್ಯ ಪೂರೈಸುವ ಪ್ರಸ್ತಾವನೆ ಇದೆ. ಆದರೆ, ಈ ಕುರಿತು ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿಎಂ ಜತೆ ಚರ್ಚಿಸಿ, ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು,'' ಎಂದು ನಾಗೇಶ್ ಹೇಳಿದರು.
''ಮನೆಮನೆಗೆ ಮದ್ಯ ಸರಬರಾಜು ಎಂದಾಕ್ಷಣ ಕೇಳಿದ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಇರುವುದಿಲ್ಲ. ರೇಷನ್ ಕಾರ್ಡ್ ರೀತಿ ಸಂಬಂಧಿತ ಜಿಲ್ಲಾಧಿಕಾರಿಗಳಿಂದ (ಕಂದಾಯ) ಪರ್ಮಿಟ್ ಪಡೆದುಕೊಂಡವರು ಮಾತ್ರ ಮನೆಗಳಿಗೆ ಮದ್ಯ ತರಿಸಿಕೊಳ್ಳಲು ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ. ಗುಜರಾತ್ನಲ್ಲಿ ಮದ್ಯ ನಿಷೇಧ ತೀರ್ಮಾನದ ಬಳಿಕ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು ಮತ್ತಿತರರಿಗೆ ಮದ್ಯ ಪೂರೈಸಲು ಅವಕಾಶ ಕಲ್ಪಿಸಲಾಗಿತ್ತು. ಇದೇ ಮಾದರಿಯನ್ನು ಅನುಸರಿಸುವ ಉದ್ದೇಶವಿದೆ'' ಎಂದರು.
''ಮದ್ಯ ಸೇವಿಸದ ಜನರು ವಿರಳ. ಮದ್ಯ ಕುಡಿಯುವವರು ಕುಡಿದೇ ಕುಡೀತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮೆಡಿಸಿನ್ಗಳಲ್ಲಿ ಶೇ.40ರಷ್ಟು ಬೋಗಸ್ ಇರುವಂತೆ ಮದ್ಯದಲ್ಲೂ ಕಲಬೆರಕೆ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ, ಗುಣಮಟ್ಟದ ಮದ್ಯವನ್ನು ಹಾಲಿನ ಮಾದರಿಯಲ್ಲಿ ಮನೆಗಳಿಗೆ ತಲುಪಿಸಿದರೆ ಒಳ್ಳೆಯದಲ್ಲವೇ'' ಎಂದು ಪ್ರಶ್ನಿಸಿದರು.
ಉಳಿದವರೂ ಕೈಜೋಡಿಸಲಿ
''ರಾಜ್ಯದಲ್ಲಿ ಪ್ರಸ್ತುತ 10,300 ಮದ್ಯದಂಗಡಿಗಳಿದ್ದು, 1993 ರಿಂದ ಹೊಸ ಮದ್ಯದಂಗಡಿ ತೆರೆಯಲು ಲೈಸೆನ್ಸ್ ನೀಡಿಲ್ಲ. ಹೀಗಾಗಿ, 1800 ಹೊಸ ಮದ್ಯದಂಗಡಿ ಆರಂಭಿಸುವ ಪ್ರಸ್ತಾಪ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಆದರೆ, ಹೊಸ ಲೈಸೆನ್ಸ್ ನೀಡಲು ಸಚಿವ ಸಂಪುಟದ ಒಪ್ಪಿಗೆ ಬೇಕು. ತಾವೊಬ್ಬರೇ ಈ ವಿಚಾರವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಬೇಡ ಎಂದಾದರೆ ಮುಜುಗರವಾಗುತ್ತದೆ. ಹೀಗಾಗಿ, ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಬೆಂಬಲಿಸಿದರೆ ಅನುಕೂಲವಾಗುತ್ತದೆ'' ಎಂದು ಅಬಕಾರಿ ಸಚಿವರು ಹೇಳಿದರು.
''ಪ್ರಸ್ತುತ ಮದ್ಯ ಖರೀದಿಸಲು ಕೆಲವು ಕಡೆಗಳಲ್ಲಿ 10 ರಿಂದ 15 ಕಿ.ಮೀ. ಹೋಗಿ ಬರುವುದು ಅನಿವಾರ್ಯವಾಗಿದೆ. ಮಾರ್ಗ ಮಧ್ಯೆ ಮಳೆ ಬಂದರೆ ಕಷ್ಟವಾಗುತ್ತದೆ. ಈ ಎಲ್ಲ ವಿಚಾರಗಳನ್ನು ಗಮನಿಸಬೇಕಿದೆ'' ಎಂದರು.
''ಬೀಚ್, ನದಿ ದಂಡೆ, ಅರಣ್ಯ ಪ್ರದೇಶಗಳಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಬಿಸಾಡಿದರೆ ಅಬಕಾರಿ ಇಲಾಖೆ ಹೊಣೆಯಲ್ಲ. ಮದ್ಯ ಮಾರಾಟ ಮಾಡುವುದು ಮಾತ್ರವೇ ಇಲಾಖೆ ಜವಾಬ್ದಾರಿ'' ಎಂದು ಪ್ರತಿಪಾದಿಸಿದರು.
ಉಪದೇಶ ಸ್ವಾಮೀಜಿಗಳ ಕೆಲಸ
ಸಾಣೆಹಳ್ಳಿ ಸ್ವಾಮೀಜಿ ನೇತೃತ್ವದಲ್ಲಿ ಮಹಿಳೆಯರು ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ಕೆಲತಿಂಗಳ ಹಿಂದೆ ಬೃಹತ್ ಪಾದಯಾತ್ರೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯಿಸಿ, ''ಸ್ವಾಮೀಜಿಗಳು ಇರುವುದು ಉಪದೇಶ ಮಾಡುವುದಕ್ಕೆ. ಪಾನ ನಿಷೇಧ ಮಾಡುವುದು ಸಾಧ್ಯವೇ? ಎಲ್ಲರೂ ಕುಡಿಯುತ್ತಾರೆ. ತಪ್ಪಿಸಲು ಸಾಧ್ಯವಿದೆಯೇ? ಪಾನ ನಿಷೇಧ ಆಗುವ, ಹೋಗುವ ಮಾತಲ್ಲ. ಮೇಲಾಗಿ, ಈ ಪಾದಯಾತ್ರೆ ನಡೆದ ವಿಚಾರವೇ ಗೊತ್ತಿಲ್ಲ. ಆ ವೇಳೆ ನಾನು ಮುಂಬಯಿಯಲ್ಲಿದ್ದೆ'' ಎಂದು ಸಚಿವರು ಉತ್ತರಿಸಿದರು.
ಅಬಕಾರಿ ಇಲಾಖಾ ಅಧಿಕಾರಿಗಳ ಸಭೆ ಬಳಿಕ ಸಚಿವ ಎಚ್.ನಾಗೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು. 'ಬಡವರಿಗೆ ಗುಣಮಟ್ಟದ ಮದ್ಯ ಪೂರೈಕೆ, ಸಾರ್ವಜನಿಕ ಬೊಕ್ಕಸಕ್ಕೆ ಆದಾಯ' ಅಬಕಾರಿ ಇಲಾಖೆಯ ಗುರಿ ಎಂದು ಅವರು ಘೋಷಿಸಿದರು.
''ಪ್ರಸ್ತುತ ತಾಂಡಾಗಳ ಜನರು ಸ್ವತಃ ತಾವೇ ಸಾರಾಯಿ ತಯಾರಿಸಿ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಗ್ರಾಮಗಳಂತಿರುವ ತಾಂಡಾಗಳಿಗೆ ಸಮೀಪದಲ್ಲಿ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯುವುದು ಕಷ್ಟ. ಈ ಕಾರಣಕ್ಕೆ ಮೊಬೈಲ್ ವಾಹನಗಳ ಮೂಲಕ ತಾಂಡಾಗಳ ಜನರಿಗೆ ಮದ್ಯ ತಲುಪಿಸಲು ನಿರ್ಧರಿಸಲಾಗಿದೆ. ಆದರೆ, ತಾಂಡಾಗಳ ಜನರಿಗೆ ಮಾರಾಟ ಮಾಡುವ ಮದ್ಯಕ್ಕೆ ಯಾವುದೇ ಸಬ್ಸಿಡಿ ಅಥವಾ ರಿಯಾಯಿತಿ ಇರುವುದಿಲ್ಲ. ಎಂಆರ್ಪಿ ಬೆಲೆಗೇ ಮದ್ಯ ಖರೀದಿಸಬೇಕಾಗುತ್ತದೆ'' ಎಂದು ಸಚಿವರು ಸ್ಪಷ್ಟಪಡಿಸಿದರು.
''ತಾಂಡಾಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಸೇವನೆ ಜತೆಗೆ, ಯಾದಗಿರಿ, ರಾಯಚೂರು ಗಡಿಭಾಗದಲ್ಲಿ ಆಂಧ್ರಪ್ರದೇಶದ ಅಗ್ಗದ ಸೇಂದಿಯನ್ನು ಅಲ್ಲಿನ ಜನ ಅವಲಂಬಿಸಿದ್ದಾರೆ. ಇದರಿಂದ ಆ ಭಾಗದಲ್ಲಿ ರಾಜ್ಯದ ಮದ್ಯ ಮಾರಾಟವಾಗುತ್ತಿಲ್ಲದ ಕಾರಣ ಆದಾಯವೂ ಇಲ್ಲ. ಬೆಳಗಾವಿ, ವಿಜಯಪುರ, ಬಾಗಲಕೋಟ ಭಾಗದಲ್ಲಿ ಕಳ್ಳಭಟ್ಟಿ ದಂಧೆ ಅವ್ಯಾಹತವಾಗಿ ನಡೆದಿದೆ. ಇದೆಲ್ಲದಕ್ಕೂ ಪರಿಹಾರವಾಗಿ ಬಡವರಿಗೆ ಗುಣಮಟ್ಟದ ಮದ್ಯವೂ ಸಿಗಬೇಕು, ಸರಕಾರಕ್ಕೆ ಆದಾಯವೂ ಬರಬೇಕು. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.
ಮನೆಮನೆಗೆ ಮದ್ಯ
''ಕೆಎಂಎಫ್ ಹಾಲಿನ ಮಾದರಿಯಲ್ಲಿ ಬೇಡಿಕೆ ಆಧರಿಸಿ ಮನೆಮನೆಗಳಿಗೆ ಮದ್ಯ ಪೂರೈಸುವ ಪ್ರಸ್ತಾವನೆ ಇದೆ. ಆದರೆ, ಈ ಕುರಿತು ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿಎಂ ಜತೆ ಚರ್ಚಿಸಿ, ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು,'' ಎಂದು ನಾಗೇಶ್ ಹೇಳಿದರು.
''ಮನೆಮನೆಗೆ ಮದ್ಯ ಸರಬರಾಜು ಎಂದಾಕ್ಷಣ ಕೇಳಿದ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಇರುವುದಿಲ್ಲ. ರೇಷನ್ ಕಾರ್ಡ್ ರೀತಿ ಸಂಬಂಧಿತ ಜಿಲ್ಲಾಧಿಕಾರಿಗಳಿಂದ (ಕಂದಾಯ) ಪರ್ಮಿಟ್ ಪಡೆದುಕೊಂಡವರು ಮಾತ್ರ ಮನೆಗಳಿಗೆ ಮದ್ಯ ತರಿಸಿಕೊಳ್ಳಲು ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ. ಗುಜರಾತ್ನಲ್ಲಿ ಮದ್ಯ ನಿಷೇಧ ತೀರ್ಮಾನದ ಬಳಿಕ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು ಮತ್ತಿತರರಿಗೆ ಮದ್ಯ ಪೂರೈಸಲು ಅವಕಾಶ ಕಲ್ಪಿಸಲಾಗಿತ್ತು. ಇದೇ ಮಾದರಿಯನ್ನು ಅನುಸರಿಸುವ ಉದ್ದೇಶವಿದೆ'' ಎಂದರು.
''ಮದ್ಯ ಸೇವಿಸದ ಜನರು ವಿರಳ. ಮದ್ಯ ಕುಡಿಯುವವರು ಕುಡಿದೇ ಕುಡೀತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮೆಡಿಸಿನ್ಗಳಲ್ಲಿ ಶೇ.40ರಷ್ಟು ಬೋಗಸ್ ಇರುವಂತೆ ಮದ್ಯದಲ್ಲೂ ಕಲಬೆರಕೆ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ, ಗುಣಮಟ್ಟದ ಮದ್ಯವನ್ನು ಹಾಲಿನ ಮಾದರಿಯಲ್ಲಿ ಮನೆಗಳಿಗೆ ತಲುಪಿಸಿದರೆ ಒಳ್ಳೆಯದಲ್ಲವೇ'' ಎಂದು ಪ್ರಶ್ನಿಸಿದರು.
ಉಳಿದವರೂ ಕೈಜೋಡಿಸಲಿ
''ರಾಜ್ಯದಲ್ಲಿ ಪ್ರಸ್ತುತ 10,300 ಮದ್ಯದಂಗಡಿಗಳಿದ್ದು, 1993 ರಿಂದ ಹೊಸ ಮದ್ಯದಂಗಡಿ ತೆರೆಯಲು ಲೈಸೆನ್ಸ್ ನೀಡಿಲ್ಲ. ಹೀಗಾಗಿ, 1800 ಹೊಸ ಮದ್ಯದಂಗಡಿ ಆರಂಭಿಸುವ ಪ್ರಸ್ತಾಪ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಆದರೆ, ಹೊಸ ಲೈಸೆನ್ಸ್ ನೀಡಲು ಸಚಿವ ಸಂಪುಟದ ಒಪ್ಪಿಗೆ ಬೇಕು. ತಾವೊಬ್ಬರೇ ಈ ವಿಚಾರವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಬೇಡ ಎಂದಾದರೆ ಮುಜುಗರವಾಗುತ್ತದೆ. ಹೀಗಾಗಿ, ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಬೆಂಬಲಿಸಿದರೆ ಅನುಕೂಲವಾಗುತ್ತದೆ'' ಎಂದು ಅಬಕಾರಿ ಸಚಿವರು ಹೇಳಿದರು.
''ಪ್ರಸ್ತುತ ಮದ್ಯ ಖರೀದಿಸಲು ಕೆಲವು ಕಡೆಗಳಲ್ಲಿ 10 ರಿಂದ 15 ಕಿ.ಮೀ. ಹೋಗಿ ಬರುವುದು ಅನಿವಾರ್ಯವಾಗಿದೆ. ಮಾರ್ಗ ಮಧ್ಯೆ ಮಳೆ ಬಂದರೆ ಕಷ್ಟವಾಗುತ್ತದೆ. ಈ ಎಲ್ಲ ವಿಚಾರಗಳನ್ನು ಗಮನಿಸಬೇಕಿದೆ'' ಎಂದರು.
''ಬೀಚ್, ನದಿ ದಂಡೆ, ಅರಣ್ಯ ಪ್ರದೇಶಗಳಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಬಿಸಾಡಿದರೆ ಅಬಕಾರಿ ಇಲಾಖೆ ಹೊಣೆಯಲ್ಲ. ಮದ್ಯ ಮಾರಾಟ ಮಾಡುವುದು ಮಾತ್ರವೇ ಇಲಾಖೆ ಜವಾಬ್ದಾರಿ'' ಎಂದು ಪ್ರತಿಪಾದಿಸಿದರು.
ಉಪದೇಶ ಸ್ವಾಮೀಜಿಗಳ ಕೆಲಸ
ಸಾಣೆಹಳ್ಳಿ ಸ್ವಾಮೀಜಿ ನೇತೃತ್ವದಲ್ಲಿ ಮಹಿಳೆಯರು ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ಕೆಲತಿಂಗಳ ಹಿಂದೆ ಬೃಹತ್ ಪಾದಯಾತ್ರೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯಿಸಿ, ''ಸ್ವಾಮೀಜಿಗಳು ಇರುವುದು ಉಪದೇಶ ಮಾಡುವುದಕ್ಕೆ. ಪಾನ ನಿಷೇಧ ಮಾಡುವುದು ಸಾಧ್ಯವೇ? ಎಲ್ಲರೂ ಕುಡಿಯುತ್ತಾರೆ. ತಪ್ಪಿಸಲು ಸಾಧ್ಯವಿದೆಯೇ? ಪಾನ ನಿಷೇಧ ಆಗುವ, ಹೋಗುವ ಮಾತಲ್ಲ. ಮೇಲಾಗಿ, ಈ ಪಾದಯಾತ್ರೆ ನಡೆದ ವಿಚಾರವೇ ಗೊತ್ತಿಲ್ಲ. ಆ ವೇಳೆ ನಾನು ಮುಂಬಯಿಯಲ್ಲಿದ್ದೆ'' ಎಂದು ಸಚಿವರು ಉತ್ತರಿಸಿದರು.