ಆ್ಯಪ್ನಗರ

ಬಾಂಗ್ಲಾ ಉಗ್ರನಿಂದ ದೊರೆತ ಮಾಹಿತಿ: ರಾಮನಗರದಲ್ಲಿ ಸಜೀವ ಬಾಂಬ್‌ಗಳು ಪತ್ತೆ

ದೊಡ್ಡಬಳ್ಳಾಪುರದಲ್ಲಿ ಸೆರೆಯಾದ ಬಾಂಗ್ಲಾದೇಶ ಉಗ್ರನಿಂದ ಹಲವಾರು ಮಾಹಿತಿ ದೊರೆತಿದೆ.

Vijaya Karnataka Web 26 Jun 2019, 5:37 pm
ರಾಮನಗರ: ಬಾಂಗ್ಲಾದೇಶ ಮೂಲದ ಶಂಕಿತ ಉಗ್ರ ಸೆರೆಯಾಗಿದ್ದರಿಂದ ಹಲವಾರು ಮಾಹಿತಿಗಳು ಬಹಿರಂಗಗೊಂಡಿವೆ.
Vijaya Karnataka Web ಎನ್‌ಐಎ
ಎನ್‌ಐಎ


ರಾಮನಗರದಲ್ಲಿ ಸಜೀವ ಬಾಂಬ್‌ಗಳು ಪತ್ತೆಯಾಗಿದೆ. ಬಾಂಗ್ಲಾ ಉಗ್ರ ಅಬೀಬುರ್ ರೆಹಮಾನ್ ವಿಚಾರಣೆ ನಡೆಸಿದ್ದರಿಂದ ದೊರೆತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿದಾಗ ಸಜೀವ ಬಾಂಬ್‌ಗಳು ಪತ್ತೆಯಾಗಿವೆ.

ಅಗ್ನಿಶಾಮಕದಳ, ಪೊಲೀಸರ ತಂಡ ಆಗಮಿಸಿ ರಾಮನಗರದ ಟಿಪ್ಪು ನಗರದ 23ನೇ ವಾರ್ಡ್‌ನ ಬ್ರಿಡ್ಜ್ ಬಳಿ ಶೋಧ ಕಾರ್ಯ ನಡೆಸಿತು.

ಬಂಧಿತ ಬಾಂಗ್ಲಾ ಉಗ್ರನನ್ನು ರಾಮನಗರಕ್ಕೆ ಕರೆತಂದು ಪರಿಶೀಲನೆ

ದೊಡ್ಡಬಳ್ಳಾಪುರದಲ್ಲಿ ಸೆರೆಯಾದ ಅಬೀಬುರ್ ರೆಹಮಾನ್ ವಿಚಾರಣೆ ನಡೆಸಲಾಯಿತು.

ಟಿಪ್ಪು‌ನಗರದಲ್ಲಿ ಬಾಂಬ್ ಉಳ್ಳ ಬಾಕ್ಸ್ ಎಸೆದು ಹೋಗಿದ್ದ ಹೋಗಿದ್ದ. ರಾಮನಗರದಲ್ಲೇ ಮುನೀರ್ ಶೇಕ್ ಜತೆಗೆ ಉಗ್ರ ರೆಹಮಾನ್ ಇದ್ದ. ಸದ್ಯ ಎರಡು ಕುಡಿಕೆ ರೀತಿಯಲ್ಲಿ ಇದ್ದ ಸಜೀವ ಬಾಂಬ್‌ಗಳು ಪತ್ತೆಯಾಗಿವೆ.

ಇನ್ನು ಹೆಚ್ಚು ಬಾಂಬ್ ಇರುವ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಮತ್ತೊಂದು ಎನ್ಐಎ ತಂಡ ಕೂಡ ಆಗಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ