ಆ್ಯಪ್ನಗರ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆಯಿಲ್ಲ : ಗುಂಡೂರಾವ್‌

ಕಾಂಗ್ರೆಸ್‌-ಜೆಡಿಎಸ್‌ ನಡುವೆ ಯಾವ ಗೊಂದಲವೂ ಇಲ್ಲ ಮಿತ್ರಪಕ್ಷಗಳು ಸೇರಿ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ...

Vijaya Karnataka 10 Apr 2019, 5:00 am
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ನಡುವೆ ಯಾವ ಗೊಂದಲವೂ ಇಲ್ಲ. ಮಿತ್ರಪಕ್ಷಗಳು ಸೇರಿ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ. ಆದರೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಹೊಂದಾಣಿಕೆ ಇರುವುದಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Vijaya Karnataka Web 0904-2-2-02


ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿ, ''ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರದ ಧೋರಣೆಯವರಿಗೆ ಕಡಿವಾಣ ಹಾಕಲು ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿ ಬಗ್ಗೆ ತಳಮಟ್ಟದಲ್ಲಿ ಅಪಸ್ವರ ಕಂಡು ಬಂದಿಲ್ಲ. ಮಂಡ್ಯದಲ್ಲಿ ಕೆಲವು ಸಮಸ್ಯೆಯಿದ್ದರೂ ಬಗೆಹರಿಸಿಕೊಳ್ಳಲಾಗುತ್ತಿದೆ,'' ಎಂದು ಸಮರ್ಥಿಸಿಕೊಂಡರು.

''ಬಿಜೆಪಿಯಲ್ಲೂ ಸಾಕಷ್ಟು ಒಡಕಿದೆ. ಈ ಬಾರಿ ಯುಪಿಎ ಸರಕಾರ ಬರುವುದು ನಿಶ್ಚಿತ. ಒಂದು ವೇಳೆ ಎನ್‌ಡಿಎ ಬಂದರೂ ಬಿಜೆಪಿಗೆ ಅಧಿಕಾರಕ್ಕೆ ಬರುವಷ್ಟು ಸೀಟು ಬಾರದಿದ್ದರೆ ಮೋದಿ ಪುನಃ ಪ್ರಧಾನಿಯಾಗುವುದಿಲ್ಲ. ಆಗ ಗಡ್ಕರಿ ಪ್ರಧಾನಿಯಾಗಬಹುದು,'' ಎಂದು ಭವಿಷ್ಯ ನುಡಿದರು.

''ಮೋದಿ ಸರಕಾರ ಬಂದ ಮೇಲೆ ಪ್ರತಿಪಕ್ಷಗಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ರಾಹುಲ್‌ ಗಾಂಧಿ ಅವರನ್ನೂ ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

-------------------------------

ಸಮರ್ಥ ನಿರ್ವಹಣೆ

''ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಾಗಿದೆ. ಕೆಲವೊಂದು ವಿಚಾರದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಕ್ಷದ ಕಚೇರಿಯಲ್ಲೆ ಎಲ್ಲ ಸಭೆಗಳೂ ನಡೆದಿವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಮಾಸ್‌ ಲೀಡರ್‌ ಆಗಿದ್ದು ಶಕ್ತಿ ತುಂಬುತ್ತಿದ್ದಾರೆ,''ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

-----------------

ಜೋಶಿ ಹೊಗಳಿದ ಗುಂಡೂರಾವ್‌

''ಬಿಜೆಪಿ ಸಂಸದರಿರುವ ಕ್ಷೇತ್ರಗಳಲ್ಲಿ ವಿರೋಧಿ ಅಲೆಯಿದೆ. ಪ್ರಹ್ಲಾದ ಜೋಶಿ ಹೊರತುಪಡಿಸಿದರೆ ಬಿಜೆಪಿ ಹಾಲಿ ಸಂಸದರಲ್ಲಿ ಯಾರೂ ಕೆಲಸ ಮಾಡಿಲ್ಲ. ಜೋಶಿ ಬ್ರಾಹ್ಮಣರು ಎಂಬ ಕಾರಣಕ್ಕೆ ಸಮರ್ಥಿಸಿಕೊಳ್ಳುತ್ತಿಲ್ಲ. ಅವರು ಕೆಲಸ ಮಾಡಿಸಿರುವುದು ನಿಜ,'' ಎಂದು ದಿನೇಶ್‌ ಗುಂಡೂರಾವ್‌ ಅಚ್ಚರಿ ಮೂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ