ಆ್ಯಪ್ನಗರ

ರಾಜ್ಯದಲ್ಲಿ ಲಾಕ್‌ ಓಪನ್‌ ಆದಮೇಲೆ ಏನೇನಾಯ್ತು? ಇಲ್ಲಿದೆ ಮಾಹಿತಿ

ಆತಂಕದ ನಡುವೆಯೇ ಸಹಜ ಸ್ಥಿತಿಯತ್ತ ಜನಜೀವನ ಸಾಗಿದೆ. ಮಹಾರಾಷ್ಟ್ರ, ಗುಜರಾತ್‌, ತ.ನಾಡಿನಿಂದ ಆಗಮಿಸುವರಿಗೆ ಕಡಿವಾಣ ಹೇರಲಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಒಂದೇ ದಿನ 149 ಪ್ರಕರಣ, ಮೂವರ ಸಾವು ಸಂಭವಿಸಿದೆ. ಮಂಡ್ಯದಲ್ಲಿ ವ್ಯಾಪಕವಾಗಿ ಸೋಂಕು ಉಲ್ಬಣಗೊಂಡಿದೆ.

Vijaya Karnataka Web 20 May 2020, 9:23 am
ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಬಹುತೇಕ ಓಪನ್‌ ಆಗಿರುವುದರಿಂದ ಜನಜೀವನ ಸಹಜ ಸ್ಥಿತಿಯತ್ತ ಹೊರಳುತ್ತಿದೆ. ಆದರೆ ಸೋಂಕಿತರ ಪ್ರಮಾಣ ಉಲ್ಬಣಿಸುತ್ತಿರುವ ಕಾರಣ ಜನ ಆತಂಕಿತರಾಗಿದ್ದಾರೆ. ಮಂಗಳವಾರ ಒಂದೇ ದಿನ 149 ಹೊಸ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ106 ಮಂದಿ ಮಹಾರಾಷ್ಟ್ರದಿಂದ ಬಂದವರು. ಮೂವರು ಕೊರೊನಾಗೆ ಬಲಿಯಾಗಿದ್ದಾರೆ.
Vijaya Karnataka Web lockdown open in karnataka here is all about how works services all started
ರಾಜ್ಯದಲ್ಲಿ ಲಾಕ್‌ ಓಪನ್‌ ಆದಮೇಲೆ ಏನೇನಾಯ್ತು? ಇಲ್ಲಿದೆ ಮಾಹಿತಿ


ಈ ನಡುವೆ, ಕೆಎಸ್‌ಆರ್‌ಟಿಸಿ ಮಂಗಳವಾರ ಒಟ್ಟು 1,606 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿತು. ಈ ಬಸ್‌ಗಳಲ್ಲಿಒಟ್ಟು 53,506 ಮಂದಿ ಪ್ರಯಾಣ ಮಾಡಿದರು. ಈ ನಡುವೆ, ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಶರವೇಗ ಪಡೆಯಲು ಹೊರರಾಜ್ಯಗಳಿಂದ ಬಂದವರು ಕಾರಣ ಎಂಬುದು ಸ್ಪಷ್ಟವಾಗುತ್ತಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ಮಹಾರಾಷ್ಠ್ರ, ಗುಜರಾತ್‌, ತಮಿಳುನಾಡಿನಿಂದ ಆಗಮಿಸುವರಿಗೆ ಸಂಪೂರ್ಣ ಕಡಿವಾಣ ಹಾಕಿದೆ.

''ಈ ರಾಜ್ಯಗಳಿಂದ ಜನರು ಅಗಮಿಸುವುದಕ್ಕೆ ಕಡಿವಾಣ ಹಾಕುವ ಜತೆಗೆ, ರಾಜ್ಯದ ಎಲ್ಲ ಗಡಿಗಳಲ್ಲಿ ಬಿಗಿ ಕ್ರಮಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಲ್ಲ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ಟ್ರಕ್‌ ಚಾಲಕ ಸಿಬ್ಬಂದಿಯ ತಪಾಸಣೆ ಹಾಗೂ ಟ್ರಕ್‌ಗಳ ಸ್ಯಾನಿಟೈಸ್‌ಗೆ ಕ್ರಮ ಕೈಗೊಳ್ಳಲಾಗಿದೆ,'' ಎಂದು ಸಚಿವ ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

''ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡಿನಿಂದ ಬರುತ್ತಿರುವ ಜನರಲ್ಲಿ ಸೋಂಕು ಹೆಚ್ಚಿದೆ. ಇಷ್ಟು ದಿನ ಇವರನ್ನು ಮುಕ್ತವಾಗಿ ಬಿಟ್ಟು ರಾಜ್ಯದಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಬಿಗಿ ತೀರ್ಮಾನ ಕೈಗೊಳ್ಳಲಾಗಿದೆ. 5 ಶ್ರಮಿಕ್‌ ರೈಲುಗಳಲ್ಲಿ ಈವರೆಗೆ ಒಟ್ಟು 1577 ಮಂದಿ ರಾಜ್ಯಕ್ಕೆ ಬಂದಿದ್ದು, ಎಲ್ಲರ ತಪಾಸಣೆ ಮಾಡಲಾಗಿದೆ. ಈ ಪೈಕಿ ಇಬ್ಬರು ಮಾತ್ರ ಶಂಕಿತ ಸೋಂಕಿತರಿದ್ದಾರೆ,'' ಎಂದರು.

ಹೋಟೆಲ್‌ಗೆ ಸಿಗದ ಗ್ರೀನ್‌ ಸಿಗ್ನಲ್‌, ಮತ್ತೆ ಕೃಷಿ ಉತ್ಪನ್ನಕ್ಕೇ ಹೊಡೆತ!

​ರಾತ್ರಿಯೂ ಬಸ್‌ ಸಂಚಾರ

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಮಯವನ್ನು ಬುಧವಾರದಿಂದ ಸಂಜೆ 7 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ. ನಿಲ್ದಾಣಗಳಿಂದ ಹೊರಡುವ ಬಸ್‌ಗಳು ಸಂಜೆ 7ಕ್ಕೆ ಬೆಂಗಳೂರಿನಿಂದ ಕಾರ್ಯಾಚರಣೆಗೊಳ್ಳಲಿವೆ. ಈ ಬಸ್‌ಗಳು ದೂರದ ಊರುಗಳಾದ ಕಲಬುರಗಿ, ಬೀದರ್‌ಅನ್ನು ಮರುದಿನ ತಲುಪಲಿವೆ.

​ಗರಿಗೆದರಿದ ಚಟುವಟಿಕೆ

ಕೊರೊನಾ ಸೋಂಕು ಪ್ರಸರಣ ತಡೆಗೆ ಕಳೆದ 56 ದಿನಗಳಿಂದ ವಿಧಿಸಲಾಗಿದ್ದ ಕಠಿಣ ಲಾಕ್‌ಡೌನ್‌ ನಿಯಮಗಳು ಬಹುತೇಕ ಸಡಿಲಗೊಂಡ ಬೆನ್ನಲ್ಲೇ ಸೋಮವಾರದಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ದೇಶದ ಬಹುತೇಕ ಕಡೆ ಬಸ್‌ ಸಂಚಾರ ಆರಂಭವಾಗಿದೆ. ಇನ್ನು ಒಂದೆರಡು ವಾರಗಳಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ದಿಲ್ಲಿ, ಬೆಂಗಳೂರು, ಹೈದರಾಬಾದ್‌, ಮುಂಬಯಿನಲ್ಲಿ ಲಾಕ್‌ಡೌನ್‌ ಸಡಿಲಗೊಂಡ ಮೊದಲ ದಿನವೇ ಟ್ರಾಫಿಕ್‌ ಜಾಮ್‌ ವಿಪರೀತವಾಗಿತ್ತು.

​ಇಡೀ ಕಚೇರಿ ಮುಚ್ಚಬೇಕಿಲ್ಲ

ಕಚೇರಿಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಸೋಂಕಿತರು ಪತ್ತೆಯಾದಲ್ಲಿ ಅಂತಹ ಕಚೇರಿ ಕಟ್ಟಡವನ್ನು ಸೀಲ್‌ಡೌನ್‌ ಅಥವಾ ಲಾಕ್‌ ಮಾಡುವುದು ಬೇಕಿಲ್ಲ ಎಂದು ಕೇಂದ್ರದ ಹೊಸ ಮಾರ್ಗಸೂಚಿ ಸ್ಪಷ್ಟಪಡಿಸಿದೆ. ಇಡೀ ಕಟ್ಟಡ ಮುಚ್ಚುವ ಬದಲು ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ಸೋಂಕು ನಿರೋಧಕಗಳನ್ನು ಸಿಂಪಡಿಸಿ ನಂತರ ಕಚೇರಿಯಲ್ಲಿ ಕೆಲಸ ಮುಂದುವರಿಸಬಹುದಾಗಿದೆ.

​ರಾಜ್ಯಗಳ ಒಪ್ಪಿಗೆ ಬೇಕಿಲ್ಲ

ವಲಸೆ ಕಾರ್ಮಿಕರ ಸಂಚಾರಕ್ಕೆ ಪರಿಚಯಿಸಲಾಗಿರುವ ಶ್ರಮಿಕ್‌ ರೈಲುಗಳ ಸಂಚಾರದಲ್ಲಿ ಇನ್ನು ಮುಂದೆ ರಾಜ್ಯಗಳ ಒಪ್ಪಿಗೆ ಬೇಕಿಲ್ಲ ಎಂದು ಕೇಂದ್ರ ಹೇಳಿದೆ. ಗೃಹ ಸಚಿವಾಲಯದ ಜತೆ ಚರ್ಚಿಸಿ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಳ್ಳಬಹುದಾಗಿದೆ. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜತೆಗಿನ ಜಟಾಪಟಿ ಬಳಿಕ ಕೇಂದ್ರ ಈ ತೀರ್ಮಾನ ಕೈಗೊಂಡಿದೆ.

ಭಾರತಕ್ಕೆ 11ನೇ ಸ್ಥಾನ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಟಿದಾಟಿದ ಬಳಿಕ ವಿಶ್ವಾದ್ಯಂತ ಕೊರೊನಾ ಬಾಧಿತ ರಾಷ್ಟ್ರಗಳಲ್ಲಿಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದೆ.

​ವಿಮಾನಯಾನ ಬುಕಿಂಗ್‌

ಮುಂಬಯಿ: ವಿಮಾನಯಾನ ಸಂಸ್ಥೆಗಳು ಜೂನ್‌ನಿಂದ ತಮ್ಮ ಸೇವೆ ಆರಂಭಿಸುವ ಸಾಧ್ಯತೆ ಇದೆ. ಸ್ಪೈಸ್‌ಜೆಟ್‌, ಇಂಡಿಗೊ ಮತ್ತು ವಿಸ್ತಾರ ಸೇರಿ ಕೆಲವು ವಿಮಾನಯಾನ ಸಂಸ್ಥೆಗಳು ಜೂನ್‌ನಲ್ಲಿ ಸಂಚಾರಕ್ಕಾಗಿ ಟಿಕೆಟ್‌ ಬುಕಿಂಗ್‌ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

ಆದರೆ ಜೂನ್‌ 15ರವರೆಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧಿಸಲಾಗಿದೆ. ಈ ಬಗ್ಗೆ ಇಂಡಿಗೊ, ವಿಸ್ತಾರ ಅಥವಾ ಗೋಏರ್‌ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್‌ಜೆಟ್‌ ವಕ್ತಾರರು ಮಾತ್ರ ''ಜೂನ್‌ 15ರವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಇಲ್ಲ,'' ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ