ಆ್ಯಪ್ನಗರ

ಲಾಕ್‌ಡೌನ್‌ ಪರಿಹಾರ ನಿಯಮ ಸಡಿಲ: 1 ವಾಹನಕ್ಕೆ ಒಬ್ಬರಿಗೇ ಎಂದಿಲ್ಲ, ಮುಂಗಾರು ಬೆಳೆಗೂ ಪರಿಹಾರ!

ಕೊರೊನಾ ವೈರಸ್‌ ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ರೈತರು, ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಲಾದ ಪರಿಹಾರದಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಾಗಿದ್ದು, ಎಲ್ಲರಿಗೂ ಪರಿಹಾರ ಸಿಗುವಂತೆ ಬದಲಾವಣೆ ತರಲಾಗಿದೆ.

Vijaya Karnataka Web 29 May 2020, 7:48 am
ಬೆಂಗಳೂರು: ಕೋವಿಡ್‌-19 ಹಿನ್ನೆಲೆಯಲ್ಲಿ ರೈತರು, ಆಟೋ, ಟ್ಯಾಕ್ಸಿ ಚಾಲಕರು ಮತ್ತಿತರರಿಗಾಗಿ ಘೋಷಿಸಿದ ವೃತ್ತಿ ಆಧರಿತ ಪ್ಯಾಕೇಜ್‌ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಕೆಲವರಿಗೆ ಪರಿಹಾರ ಪಡೆಯಲು ಸಮಸ್ಯೆಯಾದ ಹಿನ್ನೆಲೆಯಲ್ಲಿ ಈ ಸರಳೀಕರಣ ನಡೆದಿದೆ.
Vijaya Karnataka Web Auto Drivers


ಆಟೋ, ಟ್ಯಾಕ್ಸಿ ಚಾಲಕರಿಗೆ ಬ್ಯಾಡ್ಜ್‌ ಸೇರಿ ಇನ್ನಿತರ ದಾಖಲೆಗಳನ್ನು ನೀಡುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಒಂದು ಆಟೋ, ಟ್ಯಾಕ್ಸಿಗಳಿಗೆ ಶಿಫ್ಟ್‌ ಆಧಾರದ ಮೇಲೆ ಇಬ್ಬರು ಚಾಲಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಂದು ವಾಹನಕ್ಕೆ ಒಬ್ಬರು ಎಂಬ ನಿಯಮ ಸಡಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಈ ಹಿಂದಿನ ಘೋಷಣೆ ಪ್ರಕಾರ ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ರೂ. ನೀಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ ನಿಯಮ ಹೊರಡಿಸುವ ಸಂದರ್ಭದಲ್ಲಿ ಹಿಂಗಾರು ಎಂಬ ಶಬ್ದ ಸೇರಿಸಲಾಗಿತ್ತು. ಇದರಿಂದ ಎಲ್ಲರಿಗೂ ಅನುಕೂಲವಾಗುವುದಿಲ್ಲ ಎಂಬ ಕಾರಣಕ್ಕೆ ಹಿಂಗಾರು, ಮುಂಗಾರು ಬೆಳೆ ಬೆಳೆದ ಎಲ್ಲ ರೈತರಿಗೂ ಎಕರೆಗೆ 5 ಸಾವಿರ ರೂ. ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.

ರಾಜಧಾನಿಯತ್ತ ಕಾರ್ಮಿಕರ ದೌಡು: ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಇಲ್ಲ, ಬೆಂಗಳೂರೇ ಎಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ