ಆ್ಯಪ್ನಗರ

ಭ್ರಷ್ಟರ ಸಿಂಹಸ್ವಪ್ನ ನ್ಯಾ. ವೆಂಕಟಾಚಲ ಇನ್ನಿಲ್ಲ: ಹೃದಯಾಘಾತಕ್ಕೆ ತುತ್ತಾದ ನಿವೃತ್ತ ಲೋಕಾಯುಕ್ತ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಇನ್ನಿಲ್ಲ. ಹೃದಯಾಘಾತದಿಂದ ಕೊನೆಯುಸಿರೆಳೆದ ವೆಂಕಟಾಚಲ, ಲೋಕಾಯುಕ್ತ ಸಂಸ್ಥೆಗೆ ಹೊಸ ವರ್ಚಸ್ಸು ತಂದುಕೊಟ್ಟವರು. ಭ್ರಷ್ಟರ ಎದೆಯಲ್ಲಿ ನಡುಕು ಹಟ್ಟಿಸಿದವರು!

Vijaya Karnataka Web 30 Oct 2019, 12:49 pm
ಬೆಂಗಳೂರು: ದಿಢೀರ್ ದಾಳಿ ಮೂಲಕ ಲೋಕಾಯುಕ್ತ ಸಂಸ್ಥೆಗೆ ಹೊಸ ವರ್ಚಸ್ಸು ನೀಡಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಬುಧವಾರ ಬೆಳಿಗ್ಗೆ ನಿಧನರಾಗಿದ್ಧಾರೆ. ಭ್ರಷ್ಟ ಆಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದ ನ್ಯಾಯಮೂರ್ತಿ ವೆಂಕಟಾಚಲ, ಎಂ. ಎಸ್. ರಾಮಯ್ಯ ಅಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. 90 ವರ್ಷ ವಯಸ್ಸಿನ ನ್ಯಾ. ಎನ್. ವೆಂಕಟಾಚಲ ಅವರು ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
Vijaya Karnataka Web venkatachala new


ಭ್ರಷ್ಟ ವ್ಯವಸ್ಥೆಗೆ ಬಿಸಿ ಮುಟ್ಟಿಸಿದ್ದ ಲೋಕಾಯುಕ್ತ: ನ್ಯಾ. ವೆಂಕಟಾಚಲ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರಿನ ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರದ ಹಿಂಭಾಗದಲ್ಲಿರುವ ಲಕ್ಷ್ಮಿ ದೇಗುಲದ ಬಳಿ ನ್ಯಾ. ವೆಂಕಟಾಚಲ ಅವರ ನಿವಾಸವಿದೆ. ಬೆಳಗ್ಗೆ 5.45ರ ಸುಮಾರಿಗೆ ತಮ್ಮ ನಿವಾಸದಲ್ಲಿ ಇರುವಾಗಲೇ ವೆಂಕಟಾಚಲ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನ್ಯಾ. ವೆಂಕಟಾಚಲ ನಿಧನರಾಗಿದ್ದಾರೆ.

ಅಮೆರಿಕದಲ್ಲಿರುವ ವೆಂಕಟಾಚಲ ಅವರ ಒಬ್ಬ ಪುತ್ರ ಮತ್ತು ಪುತ್ರಿ, ಬೆಂಗಳೂರಿಗೆ ದೌಡಾಯಿಸುತ್ತಿದ್ಧಾರೆ. ಹೀಗಾಗಿ ಅವರು ಬಂದ ನಂತರ ಗುರುವಾರ (ಅಕ್ಟೋಬರ್ 31) ಅಂತ್ಯಸಂಸ್ಕಾರ ನಡೆಯಲಿದೆ.

ವೆಂಕಟಾಚಲ ಅವರ ಪುತ್ರರಾದ ಶೇಷಾಚಲ ಹಾಗೂ ವೇದಾಚಲ ಇಬ್ಬರೂ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳು ಅರುಣಾಚಲ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮತ್ತೊಬ್ಬ ಮಗ ಅರ್ಜುನಾಚಲ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾ. ವೆಂಕಟಾಚಲ ಅವರ ಪತ್ನಿ ಅನುಶ್ರೀಯಾ ಅವರು ಸದ್ಯ ಮನೆಯಲ್ಲಿಯೇ ಇದ್ದು, ನ್ಯಾ. ವೆಂಕಟಾಚಲ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಖ್ಯಾತ ನ್ಯಾಯವಾದಿ, ಖಡಕ್ ನ್ಯಾಯಮೂರ್ತಿ, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ: ನ್ಯಾ. ವೆಂಕಟಾಚಲ ಹಲವು ಮುಖ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ