ಆ್ಯಪ್ನಗರ

ಭ್ರಷ್ಟ ವ್ಯವಸ್ಥೆಗೆ ಬಿಸಿ ಮುಟ್ಟಿಸಿದ್ದ ಲೋಕಾಯುಕ್ತ: ನ್ಯಾ. ವೆಂಕಟಾಚಲ ನಿಧನಕ್ಕೆ ಗಣ್ಯರ ಸಂತಾಪ

​​​​​ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ್ದವರು, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದವರು, ಲೋಕಾಯುಕ್ತದ ಶಕ್ತಿಯನ್ನು ದಕ್ಷತೆಯಿಂದ ಉಪಯೋಗಿಸಿದ್ದವರು, ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿದ್ದವರು.. ಹೀಗೆ ನ್ಯಾ. ವೆಂಕಟಾಚಲ ಅವರನ್ನು ಹೊಗಳಲು ಪದಗಳೇ ಸಾಲದು

Vijaya Karnataka Web 30 Oct 2019, 1:44 pm
ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಮನೆ ಮಾತಾಗಿದ್ದ ಎನ್. ವೆಂಕಟಾಚಲ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಇಡೀ ವ್ಯವಸ್ಥೆಗೇ ಚುರುಕು ಮುಟ್ಟಿಸಿದವರು. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯಬೇಕೆಂದು ಪಣ ತೊಟ್ಟಿದ್ದವರು. ನ್ಯಾ. ಎನ್. ವೆಂಕಟಾಚಲ ಅವರ ನಿಧನಕ್ಕೆ ಸಮಾಜದ ಎಲ್ಲ ವರ್ಗಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
Vijaya Karnataka Web venkatachala new 2


ಖ್ಯಾತ ನ್ಯಾಯವಾದಿ, ಖಡಕ್ ನ್ಯಾಯಮೂರ್ತಿ, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ: ನ್ಯಾ. ವೆಂಕಟಾಚಲ ಹಲವು ಮುಖ

ನ್ಯಾ. ವೆಂಕಟಾಚಲ ನಿಧನಕ್ಕೆ ಗಣ್ಯರ ಸಂತಾಪ

ನ್ಯಾ. ವೆಂಕಟಾಚಲ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಲೋಕಾಯುಕ್ತ ಸಂಸ್ಥೆಗೆ ವೆಂಕಟಾಚಲ ಅವರು ಘನತೆ ತಂದುಕೊಟ್ಟಿದ್ದರು ಎಂದು ಟ್ವೀಟ್ ಮಾಡಿದ್ದಾರೆ.



ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


ಲೋಕಾಯುಕ್ತದ ಶಕ್ತಿಯನ್ನು ದಕ್ಷತೆಯಿಂದ ಉಪಯೋಗಿಸಿದವರು ನ್ಯಾ. ವೆಂಕಟಾಚಲ ಎಂದು ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.


ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ್ದ ನ್ಯಾ. ವೆಂಕಟಾಚಲ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ವೆಂಕಟಾಚಲ ಅವರ ನಿಧನ ಆಘಾತಕಾರಿ ಸುದ್ದಿ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.


ಕ್ರಿಯಾಶೀಲ ವ್ಯಕ್ತಿತ್ವದ ವೆಂಕಟಾಚಲ ಅವರು ಲೋಕಾಯುಕ್ತಕ್ಕೆ ಕಾಯಕಲ್ಪ ನೀಡಿದವರು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.


ಲೋಕಾಯುಕ್ತ ಸಂಸ್ಥೆಗೆ ನ್ಯಾ. ವೆಂಕಟಾಚಲ ಅವರ ಕೊಡುಗೆ ಅಪಾರ ಎಂದು ರಾಜ್ಯಸಭಾ ಸದಸ್ಯ, ಉದ್ಯಮಿ ರಾಜೀವ್ ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ.


ಭ್ರಷ್ಟರ ಸಿಂಹಸ್ವಪ್ನ ನ್ಯಾ. ವೆಂಕಟಾಚಲ ಇನ್ನಿಲ್ಲ: ನಿವೃತ್ತ ಲೋಕಾಯುಕ್ತರ ನಿಧನಕ್ಕೆ ಗಣ್ಯರ ಸಂತಾಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ