ಆ್ಯಪ್ನಗರ

ತಾಯಿ ಮತ್ತು ಪ್ರಿಯಕರನ ಜತೆ ಇಹಲೋಕ ತ್ಯಜಿಸಿದ ಪ್ರೇಯಸಿ

ಮಗಳು ಪ್ರಿಯಕರನೊಂದಿಗೆ ಹೋದಳೆಂದು ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ಪ್ರೇಮಿಗಳೂ ಸಾವಿಗೆ ಶರಣಾದ ಮನಕಲಕುವ ಘಟನೆ ಕಗ್ಗಲಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಕಂಬ ಕ್ರಾಸ್‌ ಬಳಿ ನಡೆದಿದೆ.

Vijaya Karnataka 15 Jan 2018, 8:35 am

ಹಾರೋಹಳ್ಳಿ (ಕನಕಪುರ ತಾ.): ಮಗಳು ಪ್ರಿಯಕರನೊಂದಿಗೆ ಹೋದಳೆಂದು ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ಪ್ರೇಮಿಗಳೂ ಸಾವಿಗೆ ಶರಣಾದ ಮನಕಲಕುವ ಘಟನೆ ಕಗ್ಗಲಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಕಂಬ ಕ್ರಾಸ್‌ ಬಳಿ ನಡೆದಿದೆ.

ಪ್ರೇಮಿಗಳಾದ ವೇಣು(26) ,ದಿವ್ಯಾ (22) ಹಾಗೂ ಹುಡುಗಿಯ ತಾಯಿ ಶಾಂತಮ್ಮ () ಆತ್ಮಹತ್ಯೆ ಮಾಡಿಕೊಂಡವರು.

ಮೂಲತಃ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗದ ಹಳೆಯೂರು ಗ್ರಾಮ ಪಂಚಾಯಿತಿಯ ಬಿಲ್‌ ಕಲೆಕ್ಟರ್‌ ವೇಣು ಮತ್ತು ಅದೇ ಗ್ರಾಮದ ದಿವ್ಯಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.ಮದುವೆಗೆ ಮನೆಯವರ ವಿರೋಧವಿದ್ದ ಕಾರಣ ಮನೆ ತ್ಯಜಿಸಿದ್ದರು. ಮಗಳ ಈ ತೀರ್ಮಾನದಿಂದ ಆಘಾತಗೊಂಡ ಆಕೆಯ ತಾಯಿ ಶಾಂತಮ್ಮ ಭಾನುವಾರ ಬೆಳಗಿನ ಜಾವ ಹುಲಿಯೂರುದುರ್ಗದ ತಮ್ಮ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಯಸಿಯ ತಾಯಿ ಸತ್ತ ವಿಷಯ ತಿಳಿದ ವೇಣು ಹಾಗೂ ದಿವ್ಯಾ ತೀವ್ರ ಮನನೊಂದಿದ್ದು ತಾವು ತಂಗಿದ್ದ ಹಳೆಯೂರಿನ ಸ್ನೇಹಿತನ ಮನೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ