ಆ್ಯಪ್ನಗರ

ದಸರಾದಲ್ಲಿ ಸೀರೆ ಉಟ್ಟು ಮಿಂಚಿದ್ರು ಮಹಿಳಾ ಅಧಿಕಾರಿಗಳು-ಫಿದಾ ಆದ್ರು ಮಡಿಕೇರಿ ಮಂದಿ

ಕೊಡಗು ದಸರಾಗೆ ಸ್ಥಳೀಯ ಸಂಪ್ರದಾಯ ಉಡುಗೆ ತೊಟ್ಟು ಕೊಡಗು ಜಿಲ್ಲೆಯ ಮೂವರು ಮಹಿಳಾ ಉನ್ನತ ಅಧಿಕಾರಿಗಳು ಜನರ ಗಮನ ಸೆಳೆದಿದ್ದಾರೆ. ಅಧಿಕಾರಿಗಳ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Vijaya Karnataka Web 6 Oct 2019, 4:06 pm
ಮಡಿಕೇರಿ( ಕೊಡಗು): ಮಂಜಿನ ನಗರಿ ಕೊಡಗು ದಸರಾ ಉತ್ಸವದ ಸಂಭ್ರಮದಲ್ಲಿದೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ದಸರಾ ಸಂಭ್ರಮ ಕೊಡಗಿದಾದ್ಯಂತ ಮನೆಮಾಡಿದೆ. ಅದರಲ್ಲೂ ಈ ಬಾರಿಯ ಮಹಿಳಾ ದಸರಾ ಮತ್ತಷ್ಟು ವಿಶೇಷತೆಯೊಂದಿಗೆ ಸುದ್ದಿಯಾಗುತ್ತಿದೆ. ಕಾರಣ ಮಹಿಳಾ ದಸರಾಗೆ ಜಿಲ್ಲೆಯ ಮೂವರು ಉನ್ನತ ಮಹಿಳಾ ಅಧಿಕಾರಿಗಳು ವಿಶಿಷ್ಟವಾಗಿ ಭಾಗವಹಿಸುವುದರ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
Vijaya Karnataka Web kodagu dasara


ಹೌದು, ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಹಾಗೂ ಜಿಲ್ಲಾ ಸಿಇಓ ಕೆ. ಲಕ್ಷ್ಮೀ ಪ್ರಿಯ ತೊಟ್ಟ ಕೊಡಗು ಶೈಲಿಯ ಉಡುಗೆ ಜನರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಡಿಕೇರಿ ದಸರಾ ಸಂಭ್ರಮ : ಕೊಡಗು ಜಾನಪದ ಉತ್ಸವಕ್ಕೆ ಚಾಲನೆ

ಮಹಿಳಾ ದಸರಾ ಅಂಗವಾಗಿ ಈ ಮೂವರು ಮಹಿಳಾ ಅಧಿಕಾರಿಗಳು ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆ ಧರಿಸಿಕೊಂಡು ಬಂದಿದ್ದರು. ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನರ ಸಂಸ್ಕೃತಿಯೊಂದಿಗೆ ಬೆರೆಯುವ ಸಂದೇಶವನ್ನು ಈ ಮೂಲಕ ನೀಡಿದ್ದರು.

ಸಹಜವಾಗಿ ಬೇರೆ ರಾಜ್ಯಗಳಿಂದ ಬರುವ ಐಎಎಸ್ ಐಪಿಎಸ್ ಅಧಿಕಾರಿಗಳು ಸ್ಥಳೀಯ ಭಾಷೆ, ಸಂಸ್ಕೃತಿಯ ಜೊತೆಗೆ ಬೆರೆಯುವುದು ಅಪರೂಪ. ಇದಕ್ಕೆ ಅಪವಾದವಾಗಿ ಈ ಮೂವರು ಅಧಿಕಾರಿಗಳು ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನ ಸಂಸ್ಕೃತಿಯನ್ನು ಗೌರವಿಸಿ ಅಳವಡಿಸಿಕೊಂಡಿದ್ದು ಕೊಡಗಿನ ಜನರ ಮೆಚ್ಚುಗೆಯನ್ನು ಗಳಿಸಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅನಾಹುತಗಳು ನಡೆದಾಗಲು ಈ ಮೂವರು ಮಹಿಳಾ ಅಧಿಕಾರಿಗಳ ಕೆಲಸ ಕಾರ್ಯಗಳು ಜನರ ಪ್ರಶಂಸೆಗೂ ಪಾತ್ರವಾಗಿದ್ದವು.

ದೇವೇಗೌಡರಿಂದ'ಏಕತಾ ಪ್ರತಿಮೆ'ವೀಕ್ಷಣೆ: ಪ್ರಧಾನಿ ಮೋದಿ ಸಂತಸ

ಸಚಿವ ಸುರೇಶ್ ಕುಮಾರ್ ಅವರು ಕೂಡಾ ಕೊಡಗಿನ ಈ ಮೂವರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ (DC, CEO & SP) ಕೊಡಗಿನಲ್ಲಿ ನಡೆದ ಮಹಿಳಾ ದಸರಾದಲ್ಲಿ ಭಾಗವಹಿಸಿದ್ದು ಹೀಗೆ ವಿಶಿಷ್ಟವಾಗಿ. ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನ-ಸಂಸ್ಕೃತಿಯೊಂದಿಗೆ ಬೆರೆಯುವ ರೀತಿ ಇದು. ಈ ಮೂರೂ ಅಧಿಕಾರಿಗಳಿಗೆ ಅಭಿನಂದನೆಗಳು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


ಮೈಸೂರು ದಸರಾದಂತೆಯೇ ಮಡಿಕೇರಿಯಲ್ಲೂ ಒಂಬತ್ತು ದಿನಗಳ ಕಾಲ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಸೆ.30ರಿಂದ ಅ.8ರ ವರೆಗೆ ದಸರಾ ನಡೆಯಲಿದೆ. ಮಕ್ಕಳ ದಸರಾ, ಜನಪದೋತ್ಸವ, ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ ಹಾಗೂ ವಿಜಯ ದಶಮಿಯ ಕೊನೆಯ ದಿನ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯುತ್ತದೆ. ದಶಮಂಟಪಗಳ ಶೋಭಾಯಾತ್ರೆ ಕೊನೆಯಾಗುತ್ತಿದ್ದಂತೆಯೇ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಉತ್ಸವ ಸಂಪನ್ನಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ