ಆ್ಯಪ್ನಗರ

ಜನರ ಹಣ ಲೂಟಿ ಮಾಡಲು ಮಹಾ ಘಟಬಂಧನ್‌: ಸ್ಮೃತಿ ಇರಾನಿ

ದೇಶದ ಅಳಿಯನೆಂದು ಕರೆಯಲ್ಪಡುವವರೊಬ್ಬರು ಲಂಡನ್‌ಗೆ ಹೋಗಿ ಮನೆ ಖರೀದಿಸುತ್ತಾರೆ. ಇದನ್ನು ತನಿಖೆ ಮಾಡಲು ಹೋದರೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಾರೆ.

Vijaya Karnataka Web 10 Feb 2019, 9:09 pm
ಬೆಂಗಳೂರು: ಪ್ರತಿಪಕ್ಷಗಳು ರಚಿಸಿಕೊಂಡ ಮಹಾಘಟಬಂಧನ ಮೋದಿಯವರನ್ನು ಸೋಲಿಸುವುದಕ್ಕಲ್ಲ, ಅದು ಜನರ ಜೇಬಿನ ಹಣವನ್ನು ಲೂಟಿ ಮಾಡಲು ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಆರೋಪಿಸಿದರು.
Vijaya Karnataka Web ಸ್ಮೃತಿ ಇರಾನಿ
ಸ್ಮೃತಿ ಇರಾನಿ


ಭಾರತೀಯ ವಿದ್ಯಾಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿ, ''ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಸುಮಾರು 3 ಲಕ್ಷ ಕಂಪನಿಗಳು ತೆರಿಗೆ ವಂಚಿಸಿದ್ದವು. 8 ಕೋಟಿ ಕುಟುಂಬಗಳು ಅರ್ಹತೆ ಇಲ್ಲದಿದ್ದರೂ ಅಡುಗೆ ಅನಿಲದ ಸಹಾಯಧನ ಪಡೆದವು. 20 ಸಾವಿರ ಸಂಘ ಸಂಸ್ಥೆಗಳು ಅಕ್ರಮವಾಗಿ ವಿದೇಶಿ ಹಣ ಪಡೆದು ಬೆಳೆದವು. ಇಂತಹ ಅಕ್ರಮಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದ ಪಕ್ಷಗಳಿಗೆ ಈಗ ಮೋದಿ ಅಡ್ಡವಾಗಿ ನಿಂತಿದ್ದಾರೆ. ದೇಶವನ್ನು ಲೂಟಿ ಮಾಡಲು ಅಂತಹವರಿಗೆ ಅವಕಾಶ ನೀಡಬೇಕೆ, ಬೇಡವೆ ಎಂಬ ಆಯ್ಕೆಯನ್ನು ಜನರು ಮಾಡಬೇಕು'' ಎಂದರು.

''ದೇಶದ ಅಳಿಯನೆಂದು ಕರೆಯಲ್ಪಡುವವರೊಬ್ಬರು ಲಂಡನ್‌ಗೆ ಹೋಗಿ ಮನೆ ಖರೀದಿಸುತ್ತಾರೆ. ಇದನ್ನು ತನಿಖೆ ಮಾಡಲು ಹೋದರೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಇಡಿ ಕಚೇರಿಗೆ ಹೋಗಲು ಭಯಪಡುವ ಈ ವ್ಯಕ್ತಿಗಳ ಕುಟುಂಬ ಸದಸ್ಯರು ಕೇಂದ್ರದ ಮೇಲೆ ಆರೋಪಗಳನ್ನು ಮಾಡುತ್ತಾರೆ'' ಎಂದು ಟೀಕಿಸಿದರು.

''ಬಯಲು ಶೌಚ ಮುಕ್ತಗೊಳಿಸಲು 9 ಕೋಟಿ ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ, 10 ಕೋಟಿ ಕುಟುಂಬಗಳಿಗ ಆಯುಷ್ಮಾನ್‌ ಭಾರತ್‌ನಡಿ ವಿಮೆ ಸೇರಿದಂತೆ ಹಲವಾರು ಉತ್ತಮ ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ'' ಎಂದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ''ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗೆ, ಅದರಲ್ಲೂ ಬೆಂಗಳೂರಿನ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಆದರೆ ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ'' ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ