ಆ್ಯಪ್ನಗರ

ಏರೊ ಇಂಡಿಯ ಬಗ್ಗೆ ನಿಲುವು ಸ್ಪಷ್ಟ ಪಡಿಸಲಿ: ದಿನೇಶ್‌ ಗುಂಡೂರಾವ್‌

'ಏರೊ ಇಂಡಿಯ-2019' ರ ಸ್ಥಳದ ಬಗ್ಗೆ ಕೇಂದ್ರದ ನಿಲುವೇನು ಎನ್ನುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟ ಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದ್ದಾರೆ.

Vijaya Karnataka 8 Aug 2018, 8:31 am
ಬೆಂಗಳೂರು: 'ಏರೊ ಇಂಡಿಯ-2019' ರ ಸ್ಥಳದ ಬಗ್ಗೆ ಕೇಂದ್ರದ ನಿಲುವೇನು ಎನ್ನುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟ ಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದ್ದಾರೆ.
Vijaya Karnataka Web Dinesh Gundurao


ಈ ಸಂಬಂಧ ರಕ್ಷಣಾ ಸಚಿವರಿಗೆ ಪತ್ರ ಬರೆದಿರುವ ಅವರು, ''ಮುಂದಿನ ಏರೊ ಇಂಡಿಯಾದ ಸ್ಥಳ ನಿರ್ಧಾರವಾಗಿಲ್ಲವೆಂದು ಹೇಳಿದ್ದೀರಿ. ನಮಗಿರುವ ಮಾಹಿತಿಯಂತೆ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸುವ ಯತ್ನ ನಡೆದಿದೆ. 1996 ರಿಂದಲೂ ಬೆಂಗಳೂರಿನಲ್ಲಿ ಈ ಪ್ರದರ್ಶನ ನಡೆಯುತ್ತಿದೆ. ಇದನ್ನು ಅಲ್ಲಿಗೆ ಕೊಂಡೊಯ್ಯುವುದು ಸರಿಯಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನೀವು ಈ ವಿಚಾರದಲ್ಲಿ ಬದ್ಧತೆ ತೋರಬೇಕು,'' ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಸುದ್ದಿಗಾರರೊಂದಿಗೂ ಮಾತನಾಡಿರುವ ಅವರು, ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್‌ ಕೊಡುಗೆಯೇನು ಎಂಬ ಪ್ರಶ್ನೆ ಉದ್ಭವವಾಗಿದೆ. ಗ್ರಾಮೀಣ ಬ್ಯಾಂಕಿಂಗ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯವಾಗಿದೆ. ಆರ್‌ಪಿಎಫ್‌ ಘಟಕವನ್ನೂ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಬರ ಪರಿಹಾರ ಅನುದಾನ ಬಿಡುಗಡೆಯಲ್ಲೂ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದರು.

ದಕ್ಷಿಣ ರಾಜ್ಯಗಳ ಪರ ಬ್ಯಾಟಿಂಗ್‌


2011ರ ಜನಗಣತಿ ಆಧರಿಸಿ 15ನೇ ಹಣಕಾಸು ಆಯೋಗದಡಿ ಅನುದಾನ ಹಂಚಿಕೆ ಮಾಡುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ದರು. ಈಗ ಇದೇ ದಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ''15ನೇ ಹಣಕಾಸು ಆಯೋಗದ ಮಾನದಂಡ ಅಂತಿಮಗೊಳಿಸುವ ಮುನ್ನ ಈ ವಿಚಾರದಲ್ಲಿ ಪುನರ್‌ ಪರಿಶೀಲನೆ ಮಾಡಬೇಕು. ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿವೆ,'' ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ