ಬೆಂಗಳೂರು: ಶಾಸನಸಭೆ ಹೊರಗಿನ ಶಾಸಕರ ನಡವಳಿಕೆಗಳು ಸಭಾಧ್ಯಕ್ಷರ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ನಡಿ ಪ್ರಕರಣ ದಾಖಲಾದರೆ ಬಂಧನಕ್ಕಾಗಿ ತನಿಖಾಧಿಕಾರಿಗಳು ತಮ್ಮ ಅನುಮತಿ ಪಡೆಯಬೇಕಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರೆಸಾರ್ಟ್ನಲ್ಲಿ ಬಡದಾಟ ಪ್ರಕರಣದಲ್ಲಿ ಶಾಸಕ ಆನಂದ್ಸಿಂಗ್ ದೂರು ಆಧರಿಸಿ ಕಂಪ್ಲಿ ಶಾಸಕ ಗಣೇಶ್ ಬಂಧನಕ್ಕೆ ಅನುಮತಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಸ್ಪೀಕರ್ ಈ ಪ್ರತಿಕ್ರಿಯೆ ನೀಡಿದರು. ''ಸಚಿವ, ಶಾಸಕ ಯಾರೇ ಆದರೂ ಕಾನೂನಿನ ಮುಂದೆ ಸಮಾನರು. ಐಪಿಸಿ ಸೆಕ್ಷನ್ನಡಿ ಪ್ರಕರಣ ದಾಖಲಾದರೆ ಬಂಧನ ಅಥವಾ ಬಿಡುಗಡೆಗೆ ಸ್ಪೀಕರ್ ಅನುಮತಿ ಪಡೆಯಲೇಬೇಕಿಲ್ಲ. ಆದರೆ, ಶಾಸಕರ ಬಂಧನವಾದರೆ ಈ ಬಗ್ಗೆ ತನಿಖಾಧಿಕಾರಿ ಸ್ಪೀಕರ್ಗೆ ಮಾಹಿತಿ ನೀಡುತ್ತಾರೆ ಮತ್ತು ಆ ಮಾಹಿತಿಯನ್ನು ನಾವು ಸದನದ ಗಮನಕ್ಕೆ ತರುತ್ತೇವೆ'' ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಅತೃಪ್ತ ಶಾಸಕರು ಅಜ್ಞಾತವಾಸದ ಬಗ್ಗೆ ಕೇಳಿದ ಪ್ರತಿಕ್ರಿಯಿಸಿ ''ಅತೃಪ್ತರು ಯಾರು, ಎಷ್ಟು ಮಂದಿ, ಯಾವ ಪಕ್ಷದವರು, ನಾಲ್ವರೋ, 40 ಮಂದಿಯೋ ಈ ಯಾವ ಅಧಿಕೃತ ಮಾಹಿತಿಯೂ ಇಲ್ಲ. ಯಾರೊಬ್ಬರೂ ನಮ್ಮ ಕಚೇರಿಗೆ ಬಂದು ಭೇಟಿ ಮಾಡಿಲ್ಲ. ಅತೃಪ್ತಿಯನ್ನು ಹೇಳಿಕೊಂಡೂ ಇಲ್ಲ. ಒಂದು ವೇಳೆ, ಅತೃಪ್ತ ಶಾಸಕರು ಎಂದು ಹೇಳಿಕೊಳ್ಳುವವರು ಯಾರಾದರೂ ನಿಮಗೆ (ಮಾಧ್ಯಮದವರಿಗೆ) ಸಿಕ್ಕರೆ ನಮ್ಮಲ್ಲಿಗೆ ಕರೆದುಕೊಂಡು ಬನ್ನಿ'' ಎಂದರು.
''ಅತೃಪ್ತಿ, ಭಿನ್ನಮತ ಎಂಬ ಮಾಧ್ಯಮ ವರದಿಗಳಿಗೆಲ್ಲಾ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಾನು ವಿದೇಶಕ್ಕೆ ಹೋಗಿದ್ದೇನೆ ಎಂಬ ವರದಿಗಳೂ ಬಂದವು. ಆದರೆ, ವಾಸ್ತವದಲ್ಲಿ ನಾನು ನನ್ನ ತೋಟದಲ್ಲಿದ್ದೆ. ಅದೇ ನನಗೆ ವಿದೇಶ. ಅಗತ್ಯಬಿದ್ದರೆ ನಾನು ವಿದೇಶಕ್ಕೆ ಹೋಗುತ್ತೇನೆ. ಯಾರೊಬ್ಬರೂ ನನ್ನನ್ನು ಕಳಿಸಬೇಕಿಲ್ಲ'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿರುಗೇಟು ನೀಡಿದರು.
ರೆಸಾರ್ಟ್ನಲ್ಲಿ ಬಡದಾಟ ಪ್ರಕರಣದಲ್ಲಿ ಶಾಸಕ ಆನಂದ್ಸಿಂಗ್ ದೂರು ಆಧರಿಸಿ ಕಂಪ್ಲಿ ಶಾಸಕ ಗಣೇಶ್ ಬಂಧನಕ್ಕೆ ಅನುಮತಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಸ್ಪೀಕರ್ ಈ ಪ್ರತಿಕ್ರಿಯೆ ನೀಡಿದರು. ''ಸಚಿವ, ಶಾಸಕ ಯಾರೇ ಆದರೂ ಕಾನೂನಿನ ಮುಂದೆ ಸಮಾನರು. ಐಪಿಸಿ ಸೆಕ್ಷನ್ನಡಿ ಪ್ರಕರಣ ದಾಖಲಾದರೆ ಬಂಧನ ಅಥವಾ ಬಿಡುಗಡೆಗೆ ಸ್ಪೀಕರ್ ಅನುಮತಿ ಪಡೆಯಲೇಬೇಕಿಲ್ಲ. ಆದರೆ, ಶಾಸಕರ ಬಂಧನವಾದರೆ ಈ ಬಗ್ಗೆ ತನಿಖಾಧಿಕಾರಿ ಸ್ಪೀಕರ್ಗೆ ಮಾಹಿತಿ ನೀಡುತ್ತಾರೆ ಮತ್ತು ಆ ಮಾಹಿತಿಯನ್ನು ನಾವು ಸದನದ ಗಮನಕ್ಕೆ ತರುತ್ತೇವೆ'' ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಅತೃಪ್ತ ಶಾಸಕರು ಅಜ್ಞಾತವಾಸದ ಬಗ್ಗೆ ಕೇಳಿದ ಪ್ರತಿಕ್ರಿಯಿಸಿ ''ಅತೃಪ್ತರು ಯಾರು, ಎಷ್ಟು ಮಂದಿ, ಯಾವ ಪಕ್ಷದವರು, ನಾಲ್ವರೋ, 40 ಮಂದಿಯೋ ಈ ಯಾವ ಅಧಿಕೃತ ಮಾಹಿತಿಯೂ ಇಲ್ಲ. ಯಾರೊಬ್ಬರೂ ನಮ್ಮ ಕಚೇರಿಗೆ ಬಂದು ಭೇಟಿ ಮಾಡಿಲ್ಲ. ಅತೃಪ್ತಿಯನ್ನು ಹೇಳಿಕೊಂಡೂ ಇಲ್ಲ. ಒಂದು ವೇಳೆ, ಅತೃಪ್ತ ಶಾಸಕರು ಎಂದು ಹೇಳಿಕೊಳ್ಳುವವರು ಯಾರಾದರೂ ನಿಮಗೆ (ಮಾಧ್ಯಮದವರಿಗೆ) ಸಿಕ್ಕರೆ ನಮ್ಮಲ್ಲಿಗೆ ಕರೆದುಕೊಂಡು ಬನ್ನಿ'' ಎಂದರು.
''ಅತೃಪ್ತಿ, ಭಿನ್ನಮತ ಎಂಬ ಮಾಧ್ಯಮ ವರದಿಗಳಿಗೆಲ್ಲಾ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಾನು ವಿದೇಶಕ್ಕೆ ಹೋಗಿದ್ದೇನೆ ಎಂಬ ವರದಿಗಳೂ ಬಂದವು. ಆದರೆ, ವಾಸ್ತವದಲ್ಲಿ ನಾನು ನನ್ನ ತೋಟದಲ್ಲಿದ್ದೆ. ಅದೇ ನನಗೆ ವಿದೇಶ. ಅಗತ್ಯಬಿದ್ದರೆ ನಾನು ವಿದೇಶಕ್ಕೆ ಹೋಗುತ್ತೇನೆ. ಯಾರೊಬ್ಬರೂ ನನ್ನನ್ನು ಕಳಿಸಬೇಕಿಲ್ಲ'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿರುಗೇಟು ನೀಡಿದರು.