ಆ್ಯಪ್ನಗರ

ನೀರವ್‌ ಮೋದಿ, ಮಲ್ಯಗೆ ಪಿಎಂ, ಸುಷ್ಮಾ, ಜೇಟ್ಲಿ ಕುಮ್ಮಕ್ಕಿದೆ: ಸಿದ್ದರಾಮಯ್ಯ

ಬಹುಕೋಟಿ ರೂ. ವಂಚನೆ ಆರೋಪಗಳಲ್ಲಿ ಆರೋಪಿಗಳಾಗಿರುವ ನೀರವ್‌ ಮೋದಿ, ವಿಜಯ ಮಲ್ಯ ಅವರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಕುಮ್ಮಕ್ಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Vijaya Karnataka Web 27 Sep 2018, 10:16 pm
ಬಾದಾಮಿ: ಬಹುಕೋಟಿ ರೂ. ವಂಚನೆ ಆರೋಪಗಳಲ್ಲಿ ಆರೋಪಿಗಳಾಗಿರುವ ನೀರವ್‌ ಮೋದಿ, ವಿಜಯ ಮಲ್ಯ ಅವರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಕುಮ್ಮಕ್ಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Vijaya Karnataka Web sidda


ಬಾದಾಮಿಯಲ್ಲಿ ಮಾತನಾಡಿದ ಅವರು, ನೀರವ್ ಮೋದಿ, ವಿಜಯ ಮಲ್ಯ ಇವರ ಜೊತೆ ಮಾತಾಡಿಕೊಂಡೇ ವಿದೇಶಕ್ಕೆ ಹೋಗಿದ್ದಾರೆ. ಜನರ ದುಡ್ಡು ಲೂಟಿ ಹೊಡೆಯಲು ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಶೇ.30 ರಷ್ಟು ಜನ ಮಾತ್ರ ಕೋಮುವಾದಿಗಳ ವಿರುದ್ಧ ಮತ ಚಲಾವಣೆ ಮಾಡಿದ್ದಾರೆ. ಕೋಮುವಾದಿಗಳು ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು. . ಅವರು ಜಾತಿ-ಧರ್ಮದ ನಡುವೆ ಜಗಳದ ಕಿಚ್ಚನ್ನು ಹೆಚ್ಚುತ್ತಾರೆ ಎಂದು ದೂರಿದ್ದಾರೆ.

ಸಿಲಿಂಡರ್ ಬೆಲೆ 400 ಇದ್ದಿದ್ದು 800 ರೂ. ಆಗಿದೆ. ನಾಲ್ಕುವರೆ ವರ್ಷದಲ್ಲಿ ಮೋದಿ ಏನ್ ಮಾಡಿದ್ದಾರೆ. ಚೌಕಿದಾರನಾಗಿ‌ ಕೆಲಸ ಮಾಡುವೆ ಎಂದಿದ್ದ ಪ್ರಧಾನಿ ಮೋದಿಯ ಮುಖವಾಡ ಇದೀಗ ಕಳಚಿ ಬಿದ್ದಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂದರೆ ಇದುವೆಯೇ ಎಂದ ಅವರು, ಬಿಜೆಪಿಯವರು ಯಾವುದೇ ಕಾರಣಕ್ಕೆ ಅಧಿಕಾರಕ್ಕೆ ಬರಬಾರದು ಎಂದರು.

ಬಾದಾಮಿಯಲ್ಲಿ ಕಳೆದ 4 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದಿನ 2 ವರ್ಷದ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು, ಬಾದಾಮಿಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ