ಆ್ಯಪ್ನಗರ

19 ನಂತರ ಮುಂಗಾರು ಪ್ರಬಲ

ರಾಜ್ಯಕ್ಕೆ ನೈಋುತ್ಯ ಮುಂಗಾರು ಆಗಮಿಸಿದ್ದರೂ ಮಳೆ ಕಡಿಮೆಯಾಗಿದೆ ಜೂ19 ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ...

Vijaya Karnataka 17 Jun 2019, 5:00 am
ಬೆಂಗಳೂರು: ರಾಜ್ಯಕ್ಕೆ ನೈಋುತ್ಯ ಮುಂಗಾರು ಆಗಮಿಸಿದ್ದರೂ ಮಳೆ ಕಡಿಮೆಯಾಗಿದೆ. ಜೂ.19 ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ.
Vijaya Karnataka Web rain


ಈ ಬಾರಿ 'ವಾಯು' ಹಾಗೂ ಅದಕ್ಕೂ ಹಿಂದೆ ಬಂದಿದ್ದ ಫೋನಿ ಚಂಡಮಾರುತದಿಂದಾಗಿ ಮುಂಗಾರು ಆಗಮನ ತಡವಾಗಿದೆ. ಈಗ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದ್ದ 'ವಾಯು' ಚಂಡಮಾರುತದಿಂದ ಮುಂಗಾರು ದುರ್ಬಲಗೊಂಡಿದೆ. ಈ ಚಂಡಮಾರುತ ಸಂಪೂರ್ಣವಾಗಿ ಮರೆಯಾದ ಬಳಿಕವೇ ಮುಂಗಾರು ಪ್ರಬಲವಾಗಿ ಮಳೆ ಸುರಿಸಲಿದೆ. ಜೂ.19 ರ ನಂತರ ಮಳೆ ಜೋರಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

''ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಸದ್ಯಕ್ಕೆ ಉತ್ತಮ ಮಳೆ ನಿರೀಕ್ಷಿಸುವುದು ಕಷ್ಟ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮುಂಗಾರಿಗೆ ಅನುಕೂಲವಾಗುವಂತೆ ಉಂಟಾಗುವ ವಾಯುಭಾರ ಕುಸಿತ ಆಧರಿಸಿ ಉತ್ತಮ ಮಳೆ ನಿರೀಕ್ಷಿಸಬಹುದು,'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಭಾನುವಾರ ಸುಬ್ರಹ್ಮಣ್ಯ, ಕಾರ್ಕಳ, ಗೇರುಸೊಪ್ಪದಲ್ಲಿ 30 ಮಿ.ಮೀ., ಗೋಕರ್ಣ, ಕೊಲ್ಲೂರು, ಆಗುಂಬೆಯಲ್ಲಿ 20 ಮಿ.ಮೀ. ಮಳೆ ಸುರಿದಿದೆ. ಕರಾವಳಿಯ ಅಲೆಗಳಬ್ಬರ ಜೋರಾಗಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ