ಆ್ಯಪ್ನಗರ

ರೋಷನ್‌ ಬೇಗ್‌ ಮನ್ಸೂರ್‌ನನ್ನು ಕರೆತಂದಿದ್ದರು : ದೇಶಪಾಂಡೆ

ಶಿವಾಜಿನಗರ ಶಾಸಕ ಆರ್‌.ರೋಷನ್‌ಬೇಗ್‌ ಅವರು ತಿಂಗಳ ಹಿಂದೆ ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ನನ್ನು ತಮ್ಮ ಬಳಿಗೆ ಕರೆತಂದು ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ನೆರವು ಬಯಸಿದ್ದು ನಿಜ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

Vijaya Karnataka 18 Jun 2019, 5:00 am
ಬೆಂಗಳೂರು : ಶಿವಾಜಿನಗರ ಶಾಸಕ ಆರ್‌.ರೋಷನ್‌ಬೇಗ್‌ ಅವರು ತಿಂಗಳ ಹಿಂದೆ ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ನನ್ನು ತಮ್ಮ ಬಳಿಗೆ ಕರೆತಂದು ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ನೆರವು ಬಯಸಿದ್ದು ನಿಜ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.
Vijaya Karnataka Web mansoor khan met me says deshpande
ರೋಷನ್‌ ಬೇಗ್‌ ಮನ್ಸೂರ್‌ನನ್ನು ಕರೆತಂದಿದ್ದರು : ದೇಶಪಾಂಡೆ


''ನನ್ನ ಕ್ಷೇತ್ರದವರು. ಒಳ್ಳೇ ಜನ. ಚಾರಿಟಿ ಶಾಲೆ, ಆಸ್ಪತ್ರೆ, ಆಭರಣ ಮತ್ತು ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಆರ್‌ಬಿಐ ಕೂಡ ತನಿಖೆ ನಡೆಸಿದ್ದು, ಎಲ್ಲವೂ ಸರಿ ಇದೆ. ಆದರೂ, ಪೊಲೀಸ್‌ ತನಿಖೆ ಕಾರಣ ಯಾವುದೇ ವ್ಯವಹಾರ ಆಗುತ್ತಿಲ್ಲ. ಈ ಸಣ್ಣ ಸಮಸ್ಯೆ ಬಗೆಹರಿಸಿಕೊಡಿ ಎಂದು ರೋಷನ್‌ ಬೇಗ್‌ ಕೇಳಿದ್ದರು. ತನಿಖೆ ವರದಿ ಬಳಿಕ ಕಾನೂನು ಪ್ರಕಾರ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದೆ'' ಎಂದು ದೇಶಪಾಂಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಕೆಪಿಐಡಿ ಕಾಯಿದೆಗೆ ತಿದ್ದುಪಡಿ

''ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣೆ ಸಂಬಂಧದ 2004ರ ಕೆಪಿಐಡಿ ಕಾಯಿದೆಯಡಿ ಕ್ರಮ ಕೈಗೊಳ್ಳುವ ಅಧಿಕಾರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ, ಇಲಾಖೆ ಪಾತ್ರ ಸೀಮಿತವಾಗಿರುತ್ತದೆ. ಐಎಂಎ ವಂಚನೆ ಪ್ರಕರಣದಲ್ಲಿ ನವೆಂಬರ್‌ 16, 2018ರಲ್ಲೇ ಕಂದಾಯ ಇಲಾಖೆಯಿಂದ ಜಾಹೀರಾತು ನೀಡಲಾಗಿತ್ತು. ಆದರೆ, ಯಾವುದೇ ದೂರುಗಳು ಬಂದಿರಲಿಲ್ಲ'' ಎಂದು ದೇಶಪಾಂಡೆ ಹೇಳಿದರು.

''ಐಎಂಎ ವಂಚನೆ ಪ್ರಕರಣದಲ್ಲಿ ಠೇವಣಿದಾರರು ಎಂದಾಗಿದ್ದರೆ ಕೆಪಿಐಡಿ ಕಾಯಿದೆಯಡಿ ಕ್ರಮಕ್ಕೆ ಅವಕಾಶವಿತ್ತು. ಈ ಪ್ರಕರಣದಲ್ಲಿ ಹೂಡಿಕೆದಾರರು 'ವಂತಿಗೆದಾರರು' ಆಗಿದ್ದಾರೆ. ಈ ತಾಂತ್ರಿಕ ಕಾರಣದಿಂದ ಸಾರ್ವಜನಿಕರ ಹಿತರಕ್ಷಣೆ ಮಾಡುವಲ್ಲಿ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೆಪಿಐಡಿ ಕಾಯಿದೆಯಲ್ಲಿ ಸೂಕ್ತ ತಿದ್ದುಪಡಿಗೆ ಉದ್ದೇಶಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ