ಬೆಂಗಳೂರು: ರಾಜ್ಯದ ಕಾಂಗ್ರೆಸ್ ನಾಯಕರು ಯಾಕೋ ಒಬ್ಬೊಬ್ಬರಾಗಿ ಇಡಿ ಬಲೆಗೆ ಬೀಳುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಳಿಕ ಈಗ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಇಡಿ ಬಲೆಗೆ ಬೀಳುವ ಸಾಧ್ಯತೆ ಇದೆ.
ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಮನ್ಸೂರ್ ಖಾನ್ ತನ್ನ ಬಳಿ ಹಣ ಪಡೆದಿರುವ ಪೈಕಿ ಆರ್.ವಿ. ದೇಶಪಾಂಡೆ ಸಹ ಒಬ್ಬರು ಎಂದು ಹೆಸರಿಸಿದ್ದಾರೆ ಎಂದು ಇಡಿ ಮೂಲಗಳು ಮಾಹಿತಿ ನೀಡಿವೆ. ಮನ್ಸೂರ್ ಖಾನ್ ನೀಡಿರುವ 19 ಪುಟಗಳ ಮಾಹಿತಿಯಲ್ಲಿ ಮನ್ಸೂರ್ ಖಾನ್ ರಾಜಕಾರಣಿಗಳು, ಕೆಎಎಸ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಹೆಸರು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ದಾಖಲೆಗಳ ಪ್ರತಿ ಲಭ್ಯವಾಗಿದ್ದು, ತನ್ನಿಂದ ಲಾಭ ಪಡೆದುಕೊಂಡಿರುವವರ ಬಗ್ಗೆ, ಹಣ ಎಷ್ಟು ನೀಡಿದ್ದೇನೆ ಎಂಬ ಬಗ್ಗೆ ಹಾಗೂ ಕಾರಣದ ಬಗ್ಗೆಯೂ ಬರೆದಿದ್ದಾನೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್ ನಾಯಕ ದೇಶಪಾಂಡೆ, ತಾನು ಮನ್ಸೂರ್ ಖಾನ್ನನ್ನು ಆರ್.ರೋಷನ್ ಬೇಗ್ ಜತೆ ಒಮ್ಮೆ ಮಾತ್ರ ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಬ್ಯಾಂಕ್ನಿಂದ 600 ಕೋಟಿ ರೂ. ಸಾಲ ಪಡೆದುಕೊಳ್ಳುವಾಗ ರೋಷನ್ ಬೇಗ್ ಜತೆಗೆ ದೇಶಪಾಂಡೆಯನ್ನು ಭೇಟಿ ಮಾಡಿದ್ದೆ. ಎನ್ಒಸಿ ಪಡೆದುಕೊಳ್ಳಲು ದೇಶಪಾಂಡೆಯ ಸಹಾಯ ಪಡೆದುಕೊಂಡಿದ್ದಾಗಿ ಖಾನ್ ಹೇಳಿದ್ದಾರೆ.
ಅಲ್ಲದೆ, ಕಂದಾಯ ಇಲಾಖೆಯಲ್ಲಿದ್ದ ತಮ್ಮ ಫೈಲ್ ಬಿಡಿಸಿಕೊಳ್ಳಲು ದೇಶಪಾಂಡೆ 5 ಕೋಟಿ ರೂ. ನಗದು ಕೇಳಿದ್ದರು. ಅವರ ಮನೆಗೆ ಬಂದು ಹಣ ನೀಡಲು ದೇಶಪಾಂಡೆಯ ಸಹಾಯಕರು ಕೇಳಿಕೊಂಡಿದ್ದರು. ನಂತರ ಮೇ 29 ರಂದು ಕರೆ ಮಾಡಿ ಮತ್ತೆ 5 ಕೋಟಿ ರೂ> ಕೇಳಿದ್ದರು. ಆಗ ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ಮತ್ತೆ ಹಣ ನೀಡಲಿಲ್ಲ'ಎಂದು ಖಾನ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆದರೆ. ಮಾಜಿ ಸಚಿವ ದೇಶಪಾಂಡೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ತಾನು ಅವರನ್ನು ತಮ್ಮ ಮನೆಯಲ್ಲಿ ಒಮ್ಮೆ ಹಾಗೂ ಕಚೇರಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದೆ. ರೋಷನ್ ಬೇಗ್ ಕರೆದುಕೊಂಡು ಬಂದಿದ್ದರು. ಆದರೆ, ಮನ್ಸೂರ್ ಖಾನ್ ಹೇಳಿಕೆ ಸುಳ್ಳು ಎಂದು ಅವರು ಹೇಳಿದ್ದಾರೆ.
ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಮನ್ಸೂರ್ ಖಾನ್ ತನ್ನ ಬಳಿ ಹಣ ಪಡೆದಿರುವ ಪೈಕಿ ಆರ್.ವಿ. ದೇಶಪಾಂಡೆ ಸಹ ಒಬ್ಬರು ಎಂದು ಹೆಸರಿಸಿದ್ದಾರೆ ಎಂದು ಇಡಿ ಮೂಲಗಳು ಮಾಹಿತಿ ನೀಡಿವೆ. ಮನ್ಸೂರ್ ಖಾನ್ ನೀಡಿರುವ 19 ಪುಟಗಳ ಮಾಹಿತಿಯಲ್ಲಿ ಮನ್ಸೂರ್ ಖಾನ್ ರಾಜಕಾರಣಿಗಳು, ಕೆಎಎಸ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಹೆಸರು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ದಾಖಲೆಗಳ ಪ್ರತಿ ಲಭ್ಯವಾಗಿದ್ದು, ತನ್ನಿಂದ ಲಾಭ ಪಡೆದುಕೊಂಡಿರುವವರ ಬಗ್ಗೆ, ಹಣ ಎಷ್ಟು ನೀಡಿದ್ದೇನೆ ಎಂಬ ಬಗ್ಗೆ ಹಾಗೂ ಕಾರಣದ ಬಗ್ಗೆಯೂ ಬರೆದಿದ್ದಾನೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್ ನಾಯಕ ದೇಶಪಾಂಡೆ, ತಾನು ಮನ್ಸೂರ್ ಖಾನ್ನನ್ನು ಆರ್.ರೋಷನ್ ಬೇಗ್ ಜತೆ ಒಮ್ಮೆ ಮಾತ್ರ ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಬ್ಯಾಂಕ್ನಿಂದ 600 ಕೋಟಿ ರೂ. ಸಾಲ ಪಡೆದುಕೊಳ್ಳುವಾಗ ರೋಷನ್ ಬೇಗ್ ಜತೆಗೆ ದೇಶಪಾಂಡೆಯನ್ನು ಭೇಟಿ ಮಾಡಿದ್ದೆ. ಎನ್ಒಸಿ ಪಡೆದುಕೊಳ್ಳಲು ದೇಶಪಾಂಡೆಯ ಸಹಾಯ ಪಡೆದುಕೊಂಡಿದ್ದಾಗಿ ಖಾನ್ ಹೇಳಿದ್ದಾರೆ.
ಅಲ್ಲದೆ, ಕಂದಾಯ ಇಲಾಖೆಯಲ್ಲಿದ್ದ ತಮ್ಮ ಫೈಲ್ ಬಿಡಿಸಿಕೊಳ್ಳಲು ದೇಶಪಾಂಡೆ 5 ಕೋಟಿ ರೂ. ನಗದು ಕೇಳಿದ್ದರು. ಅವರ ಮನೆಗೆ ಬಂದು ಹಣ ನೀಡಲು ದೇಶಪಾಂಡೆಯ ಸಹಾಯಕರು ಕೇಳಿಕೊಂಡಿದ್ದರು. ನಂತರ ಮೇ 29 ರಂದು ಕರೆ ಮಾಡಿ ಮತ್ತೆ 5 ಕೋಟಿ ರೂ> ಕೇಳಿದ್ದರು. ಆಗ ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ಮತ್ತೆ ಹಣ ನೀಡಲಿಲ್ಲ'ಎಂದು ಖಾನ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆದರೆ. ಮಾಜಿ ಸಚಿವ ದೇಶಪಾಂಡೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ತಾನು ಅವರನ್ನು ತಮ್ಮ ಮನೆಯಲ್ಲಿ ಒಮ್ಮೆ ಹಾಗೂ ಕಚೇರಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದೆ. ರೋಷನ್ ಬೇಗ್ ಕರೆದುಕೊಂಡು ಬಂದಿದ್ದರು. ಆದರೆ, ಮನ್ಸೂರ್ ಖಾನ್ ಹೇಳಿಕೆ ಸುಳ್ಳು ಎಂದು ಅವರು ಹೇಳಿದ್ದಾರೆ.