ಆ್ಯಪ್ನಗರ

ಕಲ್ಯಾಣ ಮಂಟಪದ ಅಡ್ವಾನ್ಸ್‌ ಹಣ ಹಿಂದಿರುಗಿಸಿ: ಆರ್. ಅಶೋಕ್ ಸೂಚನೆ!

ಲಾಕ್‌ಡೌನ್‌ ಅವಧಿಯಲ್ಲಿ ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಿದ್ದವರಿಗೆ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. ತೆರಿಗೆ ಹಣವನ್ನಷ್ಟೇ ಕಡಿತ ಮಾಡಿ, ಉಳಿದ ಹಣವನ್ನು ಹಿಂದಿರುಗಿಸುವಂತೆ ತಿಳಿಸಿದ್ದಾರೆ.

Vijaya Karnataka Web 11 Jun 2020, 3:44 pm
ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಿದ್ದವರಿಗೆ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.
Vijaya Karnataka Web R ashok


ಕೊರೊನಾ ಲಾಕ್‌ಡೌನ್‌ ನಂತರ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳನ್ನು ನಿಷೇಧಿಸಲಾಗುತ್ತು.

ಈ ಹಿಂದೆಯೇ ಮದುವೆ ದಿನಾಂಕ ನಿಗದಿಪಡಿಸಿ ಕಲ್ಯಾಣ ಮಂಟಪ ಬುಕ್‌ ಮಾಡಿದ್ದವರಿಗೆ ಕೊರೊನಾ ಲಾಕ್‌ಡೌನ್‌ ನಿರಾಸೆ ಮೂಡಿಸಿತ್ತು. ಕೆಲವರು ಮದುವೆಗಳನ್ನು ಮುಂದೂಡಿ ಕಲ್ಯಾಣ ಮಂಟಪಕ್ಕೆ ನೀಡಿದ್ದ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದರು. ಆದರೆ, ಕಲ್ಯಾಣ ಮಂಟಪಗಳ ಮಾಲೀಕರು ಅಡ್ವಾನ್ಸ್‌ ಹಿಂದಿರುಗಿಸಲು ಆಗದು ಎಂದಿದ್ದರು.

ಶಾಸಕರ ಖರೀದಿಗಾಗಿ ರಾಜ್ಯಸಭಾ ಚುನಾವಣೆ ಮುಂದೂಡಿಕೆ - ಕಾಂಗ್ರೆಸ್‌ ಆರೋಪ

ಇದೀಗ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿಂದೆ ಕಲ್ಯಾಣ ಮಂಟಪ ಬುಕ್‌ ಮಾಡಿದ್ದು, ಮದುವೆ ಮಾಡದಿದ್ದರೆ ಅಂಥವರ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಬೇಕು ಎಂದು ತಿಳಿಸಿದ್ದಾರೆ.

ಅಡ್ವಾನ್ಸ್‌ ಹಣದಲ್ಲಿ ಕೇವಲ ತೆರಿಗೆಯನ್ನು ಮಾತ್ರವೇ ಕಡಿತ ಮಾಡಿಕೊಳ್ಳಬೇಕು. ಉಳಿದ ಎಲ್ಲ ಹಣವನ್ನೂ ಹಿಂದಿರುಗಿಸಬೇಕು ಎಂದು ತಿಳಿಸಿದ್ದಾರೆ.

ನವಾಜ್ ಷರೀಫ್ ಸಹೋದರನಿಗೆ ಕೊರೊನಾ: ಪ್ರಧಾನಿ 'ಇಮ್ರಾನ್ ನಿಯಾಜಿ' ಕಾರಣವಂತೆ!

ಒಂದು ವೇಳೆ ದಿನಾಂಕವನ್ನು ಮುಂದೂಡಿ, ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಇಚ್ಚೆ ಪಟ್ಟಲ್ಲಿ ಅದಕ್ಕೆ ಅವಕಾಶ ನೀಡಬೇಕು ಎಂದೂ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ