ಆ್ಯಪ್ನಗರ

ಇಸ್ಲಾಂನಲ್ಲಿ ಮದುವೆ ಅನ್ನೋದು ಸಂಸ್ಕಾರವಲ್ಲ, ಅದೊಂದು ಒಪ್ಪಂದ; ಕರ್ನಾಟಕ ಹೈಕೋರ್ಟ್​

ಕುರಾನ್‌ ಹಾಗೂ ಹದೀಸ್‌ನಲ್ಲಿರುವ ಪದ್ಯವನ್ನು ಉಲ್ಲೇಖಿಸಿರುವ ಪೀಠ, ‘ವಿಚ್ಛೇದಿತ ಪತ್ನಿ ಮರು ಮದುವೆಯಾಗದಿದ್ದರೆ ಅಥವಾ ಅಶಕ್ತಳಾಗಿದ್ದರೆ ಆಕೆಗೆ ಜೀವನಾಂಶ ನೀಡಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ. ಮೊದಲ ಪತ್ನಿಗೆ ತಲಾಕ್‌ ನೀಡುವ ವೇಳೆ ಮೆಹರ್‌ (ಪತ್ನಿಗೆ ಪತಿ ಕೊಡುವ ಉಡುಗೊರೆ) ನೀಡಿರುವುದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ. ಎರಡನೇ ಪತ್ನಿ ಹಾಗೂ ಮಕ್ಕಳ ನಿರ್ವಹಣೆಗೆ ವೆಚ್ಚ ಭರಿಸಬೇಕು ಎಂದು ಪತಿಯು ನೀಡಿದ್ದ ಕಾರಣಗಳನ್ನು ಪೀಠವು ತಳ್ಳಿ ಹಾಕಿತು. ‘ನಿಮ್ಮ ವಾದ ಸರಣಿಯು ನೈತಿಕತೆಗೆ ವಿರುದ್ಧವಾದುದು’ ಎಂದಿದೆ.

Vijaya Karnataka 21 Oct 2021, 6:42 am
ಬೆಂಗಳೂರು: ಇಸ್ಲಾಂನಲ್ಲಿ ಮದುವೆ ಒಂದು ಸಂಸ್ಕಾರವಲ್ಲ, ಅದು ಒಪ್ಪಂದ. ಹಾಗೆಂದು ವಿಚ್ಛೇದನ ನೀಡಿದಾಕ್ಷಣ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Vijaya Karnataka Web Karnataka high court (1).
Karnataka high court(File Photo)


ಪತ್ನಿಗೆ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಎಜಾಜುರ್‌ ರೆಹಮಾನ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತು. ‘ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ. ಎರಡು ಕುಟುಂಬಗಳ ನಡುವಿನ ಒಪ್ಪಂದದಂತೆ ಇಬ್ಬರು ವಿವಾಹ ಒಪ್ಪಂದಕ್ಕೆ ಒಳಪಡುತ್ತಾರೆ. ವಿಚ್ಛೇದನದಿಂದ ಬೇರ್ಪಟ್ಟಾಗ ಪತಿಯಾದ ವ್ಯಕ್ತಿಯು ತನ್ನೆಲ್ಲಾ ಬಾದ್ಯತೆಗಳಿಂದ ಮುಕ್ತನಾಗುವುದಿಲ್ಲ. ಮೆಹರ್‌ ನೀಡಿದಾಕ್ಷಣ ಒಪ್ಪಂದ ಮುಕ್ತಾಯವಾಗುವುದಿಲ್ಲ. ಬದಲಿಗೆ ಕೆಲವು ನ್ಯಾಯಯುತ ಹೊಣೆಗಾರಿಕೆಗಳನ್ನು ಸೃಷ್ಟಿಸುತ್ತದೆ. ವಿಚ್ಛೇದನದಿಂದ ನಿರ್ಗತಿಕಳಾಗುವ ಮಾಜಿ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗುತ್ತದೆ’ ಎಂದು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ನ್ಯಾಯಾಧೀಶರ ನಿಂದನೆ; ಬೇಷರತ್‌ ಕ್ಷಮೆ ಕೋರಿದ ವಕೀಲನ ವಿರುದ್ಧದ ಪ್ರಕರಣ ಕೈಬಿಟ್ಟ ಹೈಕೋರ್ಟ್‌
ಕುರಾನ್‌ ಹಾಗೂ ಹದೀಸ್‌ನಲ್ಲಿರುವ ಪದ್ಯವನ್ನು ಉಲ್ಲೇಖಿಸಿರುವ ಪೀಠ, ‘ವಿಚ್ಛೇದಿತ ಪತ್ನಿ ಮರು ಮದುವೆಯಾಗದಿದ್ದರೆ ಅಥವಾ ಅಶಕ್ತಳಾಗಿದ್ದರೆ ಆಕೆಗೆ ಜೀವನಾಂಶ ನೀಡಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ. ಮೊದಲ ಪತ್ನಿಗೆ ತಲಾಕ್‌ ನೀಡುವ ವೇಳೆ ಮೆಹರ್‌ (ಪತ್ನಿಗೆ ಪತಿ ಕೊಡುವ ಉಡುಗೊರೆ) ನೀಡಿರುವುದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ. ಎರಡನೇ ಪತ್ನಿ ಹಾಗೂ ಮಕ್ಕಳ ನಿರ್ವಹಣೆಗೆ ವೆಚ್ಚ ಭರಿಸಬೇಕು ಎಂದು ಪತಿಯು ನೀಡಿದ್ದ ಕಾರಣಗಳನ್ನು ಪೀಠವು ತಳ್ಳಿ ಹಾಕಿತು. ‘ನಿಮ್ಮ ವಾದ ಸರಣಿಯು ನೈತಿಕತೆಗೆ ವಿರುದ್ಧವಾದುದು’ ಎಂದಿದೆ. ಜತೆಗೆ ಅರ್ಜಿದಾರ ಪತಿ ರೆಹಮಾನ್‌ಗೆ 25 ಸಾವಿರ ರೂ. ದಂಡ ವಿಧಿಸಿ, ಅದನ್ನು ಪತ್ನಿಗೆ ಕೊಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಅನುಸರಿಸಬೇಕಾದ ಕ್ರಮಗಳ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಭುವನೇಶ್ವರಿ ನಗರದ ಎಜಾಜುರ್‌ ರೆಹಮಾನ್‌ 1991 ರಲ್ಲಿ ಸಾಯಿರಾ ಬಾನು ಎಂಬ ಯುವತಿಯನ್ನು ಮದುವೆಯಾಗಿದ್ದರು. 8 ತಿಂಗಳ ಬಳಿಕ 5 ಸಾವಿರ ರೂ. ಮೆಹರ್‌ ನೀಡಿ ತಲಾಕ್‌ ನೀಡಿದ್ದರು. ಕೆಲ ವರ್ಷಗಳ ಬಳಿಕ 2002 ರ ಆ.24 ರಂದು ಸಾಯಿರಾ ಬಾನು ಜೀವನಾಂಶ ಕೋರಿ ಸಿವಿಲ್‌ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನಗರದ ಕೌಟುಂಬಿಕ ನ್ಯಾಯಾಲಯವು 2011 ರ ಆ.12 ರಂದು ತಿಂಗಳಿಗೆ ಮೂರು ಸಾವಿರದಂತೆ ಜೀವನಾಂಶ ನೀಡಲು ರೆಹಮಾನ್‌ಗೆ ಆದೇಶಿಸಿತ್ತು. ಜೀವನಾಂಶ ನೀಡಲು ನಿರಾಕರಿಸಿದ್ದ ರೆಹಮಾನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ