ಬೆಂಗಳೂರು : ಕೋಲಾರದ ಮಾಸ್ತಿ ಟ್ರಸ್ಟ್ ಪ್ರಸಕ್ತ ಸಾಲಿನ ಕಾದಂಬರಿ ಪುರಸ್ಕಾರ ಮತ್ತು ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳ ಫಲಿತಾಂಶವನ್ನು ಪ್ರಕಟಿಸಿದೆ.
'ಮಾಸ್ತಿ ಕಾದಂಬರಿ ಪುರಸ್ಕಾರ-2019 ಪ್ರಶಸ್ತಿ'ಗೆ ಎಂ.ಆರ್. ದತ್ತಾತ್ರಿಯವರ 'ತಾರಾಬಾಯಿಯ ಪತ್ರ' ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಕಾಶನ ವಿಭಾಗದಲ್ಲಿ ಪ್ರಶಸ್ತಿಯು ಛಂದ ಪ್ರಕಾಶನಕ್ಕೆ ಸಂದಿದ್ದು, ಪ್ರಶಸ್ತಿಯು 10 ಸಾವಿರ ನಗದು ಒಳಗೊಂಡಿದೆ.
ಮಾಸ್ತಿ ಕಥಾ ಪುರಸ್ಕಾರ-2019ಕ್ಕೆ ಇಬ್ಬರು ಲೇಖಕರು ಆಯ್ಕೆಯಾಗಿದ್ದಾರೆ. ಎ.ಎನ್. ಪ್ರಸನ್ನ ಅವರ 'ಪ್ರತಿಫಲನ' ಹಾಗೂ ಶಿವಮೊಗ್ಗದ ಎಸ್. ಶೇಷಾದ್ರಿ ಕಿನಾರರ 'ಅವತಾರ' ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಕಾಶನ ವಿಭಾಗದಲ್ಲಿ ಕ್ರಮವಾಗಿ ನಾಗರಬಾವಿಯ ಗೀತಾಂಜಲಿ ಪಬ್ಲಿಕೇಷನ್ಸ್ ಮತ್ತು ಪಾಪರೆಡ್ಡಿ ಪಾಳ್ಯದ ಪಾಂಚಜನ್ಯ ಪಬ್ಲಿಕೇಷನ್ಸ್ಗೆ ಪ್ರಶಸ್ತಿಗಳು ಸಂದಿದ್ದು, ತಲಾ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡೂ ಸ್ಪರ್ಧೆಗಳಿಗೆ ಜಿ.ಎನ್. ರಂಗನಾಥರಾವ್, ಆರ್. ವಿಜಯರಾಘವನ್, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ. ಕೆ. ಸತ್ಯನಾರಾಯಣ ಹಾಗೂ ಮಾವಿನಕೆರೆ ರಂಗನಾಥನ್ ತೀರ್ಪುಗಾರರಾಗಿದ್ದರು.
'ಮಾಸ್ತಿ ಕಾದಂಬರಿ ಪುರಸ್ಕಾರ-2019 ಪ್ರಶಸ್ತಿ'ಗೆ ಎಂ.ಆರ್. ದತ್ತಾತ್ರಿಯವರ 'ತಾರಾಬಾಯಿಯ ಪತ್ರ' ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಕಾಶನ ವಿಭಾಗದಲ್ಲಿ ಪ್ರಶಸ್ತಿಯು ಛಂದ ಪ್ರಕಾಶನಕ್ಕೆ ಸಂದಿದ್ದು, ಪ್ರಶಸ್ತಿಯು 10 ಸಾವಿರ ನಗದು ಒಳಗೊಂಡಿದೆ.
ಮಾಸ್ತಿ ಕಥಾ ಪುರಸ್ಕಾರ-2019ಕ್ಕೆ ಇಬ್ಬರು ಲೇಖಕರು ಆಯ್ಕೆಯಾಗಿದ್ದಾರೆ. ಎ.ಎನ್. ಪ್ರಸನ್ನ ಅವರ 'ಪ್ರತಿಫಲನ' ಹಾಗೂ ಶಿವಮೊಗ್ಗದ ಎಸ್. ಶೇಷಾದ್ರಿ ಕಿನಾರರ 'ಅವತಾರ' ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಕಾಶನ ವಿಭಾಗದಲ್ಲಿ ಕ್ರಮವಾಗಿ ನಾಗರಬಾವಿಯ ಗೀತಾಂಜಲಿ ಪಬ್ಲಿಕೇಷನ್ಸ್ ಮತ್ತು ಪಾಪರೆಡ್ಡಿ ಪಾಳ್ಯದ ಪಾಂಚಜನ್ಯ ಪಬ್ಲಿಕೇಷನ್ಸ್ಗೆ ಪ್ರಶಸ್ತಿಗಳು ಸಂದಿದ್ದು, ತಲಾ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡೂ ಸ್ಪರ್ಧೆಗಳಿಗೆ ಜಿ.ಎನ್. ರಂಗನಾಥರಾವ್, ಆರ್. ವಿಜಯರಾಘವನ್, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ. ಕೆ. ಸತ್ಯನಾರಾಯಣ ಹಾಗೂ ಮಾವಿನಕೆರೆ ರಂಗನಾಥನ್ ತೀರ್ಪುಗಾರರಾಗಿದ್ದರು.