ಆ್ಯಪ್ನಗರ

ಸಂಪುಟ ಸರ್ಕಸ್‌ ಬಳಿಕ ಖಾತೆ ಬದಲಾವಣೆ ತಲೆನೋವು..! ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಅತೃಪ್ತಿ ಸ್ಫೋಟ ಸಾಧ್ಯತೆ

ಗುರುವಾರ ಬೆಳಗ್ಗೆಯಷ್ಟೇ 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಕೆಲ ಸಚಿವರ ಖಾತೆಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಪ್ರಮುಖ ಖಾತೆಗಳನ್ನು ಕಳೆದುಕೊಂಡ ಸಚಿವರು ಅಸಮಾಧಾನಗೊಂಡಿದ್ದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅತೃಪ್ತಿ ಹೊರಹಾಕುವ ಸಾಧ್ಯತೆ ಇದೆ.

Vijaya Karnataka Web 21 Jan 2021, 4:44 pm
ಬೆಂಗಳೂರು: ಸಚಿವರ ಖಾತೆ ಬದಲಾವಣೆ ಹಿನ್ನೆಲೆ ಗುರುವಾರದ ಸಚಿವ ಸಂಪುಟ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ. ಸಂಜೆ ನಡೆಯಲಿರುವ ಕ್ಯಾಬಿನೆಟ್‌ ಸಭೆಯಲ್ಲಿ ಸಚಿವರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬಳಿ ಅಸಮಾಧಾನ ತೋಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
Vijaya Karnataka Web Karnataka Chief Minister BS Yediyurappa. Photo: ANI
ಬಿಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ (ಸಂಗ್ರಹ ಚಿತ್ರ)


ಸಚಿವರಾದ ಮಾಧುಸ್ವಾಮಿ, ಕೆ ‌ಸುಧಾಕರ್, ನಾರಾಯಣ ಗೌಡ, ಎಂಟಿಬಿ ನಾಗರಾಜ್, ಕೆ ಗೋಪಾಲಯ್ಯ ಅವರು ಸಂಪುಟ ಸಭೆಗೆ ಹಾಜರಾಗುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಒಂದು ವೇಳೆ ಹಾಜರಾದರೆ ಸಿಎಂ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಜೆ.ಸಿ.ಮಾಧುಸ್ವಾಮಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಪ್ರಭಾವಿ ಖಾತೆಯನ್ನು ಕಳೆದುಕೊಂಡಿದ್ದು, ಅವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆ. ಇನ್ನು, ಕೆ ‌ಗೋಪಾಲಯ್ಯ ಅವರ ಬಳಿಯಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ಉಮೇಶ್‌ ಕತ್ತಿಗೆ ನೀಡಿ, ಗೋಪಾಲಯ್ಯ ಅವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಖಾತೆ ನೀಡಲಾಗಿದೆ.
ನೂತನ ಸಚಿವರಿಗೆ ಖಾತೆ ಹಂಚಿಕೆ ಅಧಿಕೃತ ಘೋಷಣೆ, ಯಾರು ಯಾರಿಗೆ ಯಾವ ಖಾತೆ, ಇಲ್ಲಿದೆ ಸಂಪೂರ್ಣ ಮಾಹಿತಿಇನ್ನು, ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಆರೋಗ್ಯ ಖಾತೆ ಜೊತೆಗೆ ಇರಬೇಕು, ಇದರಿಂದ ಸಮನ್ವಯ ಸಾಧಿಸಲು ಸಾಧ್ಯ ಎಂಬ ಕಾರಣಕ್ಕಾಗಿ ಶ್ರೀರಾಮುಲು ಅವರಲ್ಲಿ ಇದ್ದ ಆರೋಗ್ಯ ಖಾತೆಯನ್ನು ಬದಲಾವಣೆ ಮಾಡಲಾಗಿತ್ತು. ಎರಡೂ ಖಾತೆಯನ್ನು ಕೆ ಸುಧಾಕರ್ ಗೆ ನೀಡಲಾಗಿತ್ತು. ಆದರೆ, ಇದೀಗ ಈ ಎರಡು ಖಾತೆಯನ್ನು ಮಾಧುಸ್ವಾಮಿ ಹಾಗೂ ಸುಧಾಕರ್ ನಡುವೆ ಹಂಚಿಕೆ ಮಾಡಲಾಗಿದೆ. ಸಂಪುಟ ಸಭೆಯಲ್ಲಿ ಇವೆಲ್ಲವೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬಿಎಸ್‌ವೈ ಸಂಪುಟದ ಯಾವ ಸಚಿವರ ಬಳಿ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಮಾಹಿತಿ7 ನೂತನ ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಲಾಗಿತ್ತು. ಅದಲ್ಲದೇ ಹಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿ ಸಿಎಂ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಪ್ರಮುಖ ಖಾತೆ ಕಳೆದುಕೊಂಡ ಸಚಿವರು ಅಸಮಾಧಾನಿತರಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಅತೃಪ್ತಿ ಹೊರಹಾಕುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ