ಆ್ಯಪ್ನಗರ

ಮಾಯಾ ಕಾಮತ್‌ ಸ್ಮಾರಕ ವ್ಯಂಗ್ಯಚಿತ್ರ ಸರ್ಧೆಬಹುಮಾನ ಪ್ರಕಟ

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಆಯೋಜಿಸಿದ್ದ '10ನೇ ಮಾಯಾ ಕಾಮತ್‌ ...

Vijaya Karnataka 15 Apr 2018, 5:00 am
ದಿಲ್ಲಿಯ ಶಶಿಕುಮಾರ್‌ ಪ್ರಥಮ,ಹೈದರಾಬಾದ್‌ನ ಮೃತ್ಯುಂಜಯ ದ್ವಿತೀಯ
Vijaya Karnataka Web maya kamath memory cartoon first prize
ಮಾಯಾ ಕಾಮತ್‌ ಸ್ಮಾರಕ ವ್ಯಂಗ್ಯಚಿತ್ರ ಸರ್ಧೆಬಹುಮಾನ ಪ್ರಕಟ


ಬೆಂಗಳೂರು : ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಆಯೋಜಿಸಿದ್ದ '10ನೇ ಮಾಯಾ ಕಾಮತ್‌ ಸ್ಮಾರಕ 2017ರ ವ್ಯಂಗ್ಯಚಿತ್ರ ಸ್ಪರ್ಧೆ'ಯ ವಿಜೇತರ ಪಟ್ಟಿ ಪ್ರಕಟಿಸಿದ್ದು, ಹೊಸದಿಲ್ಲಿಯ ಶಶಿಕಮಾರ್‌ ಪ್ರಥಮ (25 ಸಾವಿರ ರೂ. ನಗದು) ಬಹುಮಾನಕ್ಕೆ ಭಾಜನರಾಗಿದ್ದಾರೆ.

ಹೈದರಾಬಾದ್‌ನ ಮೃತ್ಯುಂಜಯ 2ನೇ (15 ಸಾವಿರ ರೂ. ನಗದು) ಹಾಗೂ ತಿರುವನಂತಪುರಮ್‌ನ ರೆಂಜಿತ್‌ 3ನೇ (5 ಸಾವಿರ ರೂ. ನಗದು) ಬಹುಮಾನ ಗಳಿಸಿದ್ದಾರೆ. ಉತ್ತಮ ಉದಯೋನ್ಮುಖ ವ್ಯಂಗ್ಯಚಿತ್ರಕಾರರಾಗಿ ಕಾಸರಗೋಡಿನ ಅಲಿ ಹೈದರ್‌ (10 ಸಾವಿರ ರೂ. ನಗದು ) ಬಹುಮಾನಕ್ಕೆ ಆಯ್ಕೆ ಯಾಗಿದ್ದಾರೆ. ಉಳಿದಂತೆ ಆಯ್ಕೆ ಸಮಿತಿಯ ವಿಶೇಷ ಮೆಚ್ಚುಗೆ ಬಹುಮಾನ (2, 500 ರೂ. ನಗದು)ಕ್ಕೆ ಜಮ್ಮು ಕಾಶ್ಮೀರದ ಚಂದ್ರಶೇಖರ್‌, ಅಮರಾವತಿಯ ಸತೀಶ ಉಪಾಧ್ಯ ಮತ್ತು ಬೆಂಗಳೂರಿನ ಯತೀಶ್‌ ಸಿದ್ದಕಟ್ಟೆ ಆಯ್ಕೆಯಾಗಿದ್ದಾರೆ. ಉತ್ತಮ ವಿದೇಶಿ ವ್ಯಂಗ್ಯಚಿತ್ರ ವಿಭಾಗದಲ್ಲಿ ಉಜ್ಜೇಕಿಸ್ತಾನ್‌ನ ಮಖಮುದ್‌ಜಾನ್‌ ಎಶಾಂಕುಲೊವ್‌ (200 ಡಾಲರ್‌) ಹಾಗೂ ಇಂಡೋನೇಶಿಯಾದ ಜಿತೆತ್‌ ಕುಸ್ತಾನಾ (100 ಡಾಲರ್‌) ಬಹುಮಾನಕ್ಕೆ ಭಾಜನರಾಗಿದ್ದಾರೆ.

ಇರಾನ್‌ನ ಸಯೀದ್‌ ಸದೇಗಿ, ಮೆಹದಿ ಅಜೀಜಿ, ಅಮೀರ್‌ ಸೊಹೈಲಿ, ಚೀನಾದ ಲಿಯು ಕಿಯಾಂಗ್‌ ಮತ್ತು ಲಿ ಹೈ ಫೆಂಗ್‌ ಮೆರಿಟ್‌ ಸರ್ಟಿಫಿಕೇಟ್‌ಗಳಿಗೆ ಆಯ್ಕೆಯಾಗಿದ್ದಾರೆ. ಜೂನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಹಾಗು ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ