ಆ್ಯಪ್ನಗರ

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಜೆಪಿ ಸರ್ಕಾರಕ್ಕೆ ಭಯವಂತೆ!

ಪ್ರತಿವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸೋದು ವಾಡಿಕೆ. ಆದರೆ, ಈ ಬಾರಿ ಬಿಎಸ್‌ವೈ ಸರ್ಕಾರ ಈ ಸಂಪ್ರದಾಯ ಮುರಿದಿದೆ. ಯಡಿಯೂರಪ್ಪ ಅವರು ಈ ಸಂಪ್ರದಾಯ ಮುರಿಯಲು ಕಾರಣವೇನು? ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ. ಬಿ. ಪಾಟೀಲ್ ಗುಟ್ಟು ಬಿಚ್ಚಿಟ್ಟಿದ್ದಾರೆ ನೋಡಿ.

Vijaya Karnataka 20 Sep 2019, 8:32 pm
ವಿಜಯಪುರ: ಪ್ರವಾಹ ಸಂತ್ರಸ್ತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ ಅನ್ನೋ ಭಯದಿಂದ ಬೆಳಗಾವಿಯಲ್ಲಿ ನಡೆಸಬೇಕಿದ್ದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
Vijaya Karnataka Web m b patil bsy


ನಾನೇನೂ ‘ಮಾತಿನ ಮಲ್ಲ’ನಲ್ಲ: ಹಾಗೆ ಹೇಳೋಕೆ ಮೋದಿ ಯಾರು ಎಂದ ಠಾಕ್ರೆ!

ವಿಜಯಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೆರೆ ಸಂತ್ರಸ್ತರು ಸಮಸ್ಯೆ ಎದುರಿಸುತ್ತಿರುವುದರಿಂದ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕು' ಎಂದು ಆಗ್ರಹಿಸಿದರು.

‘ಮಾತಿನ ಮಲ್ಲರೇ ಸುಮ್ಮನಿರಿ’!: ಮಂದಿರದ ಬಗ್ಗೆ ಬೇಕಾಬಿಟ್ಟಿ ಮಾತೇಕೆ ಅಂದ್ರು ಮೋದಿ

'ಸರಕಾರ ಪ್ರವಾಹವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌, ಬೆಳೆ ಪರಿಹಾರ ಸಿಕ್ಕಿಲ್ಲ. 2-3 ಸಾವಿರ ಕೋಟಿ ರೂಪಾಯಿಗಳಲ್ಲಿ ಕಾಮಗಾರಿ ಮುಗಿಸಲು ಬಿಜೆಪಿ ಸರಕಾರ ಯತ್ನಿಸಿದೆ' ಎಂದು ಎಂ. ಬಿ. ಪಾಟೀಲ್ ಆರೋಪಿಸಿದರು.

ಮನೆ ಬಾಗಿಲಿಗೆ ‘ಮದ್ಯ’ ಸರಬರಾಜು ಕಾನೂನು ಬಾಹಿರ!: ಅನುಮತಿ ಕೊಡಲ್ಲ ಅಂತು ಕೋರ್ಟ್

ಬಿಎಸ್‌ವೈ ದ್ವೇಷದ ರಾಜಕಾರಣ

'ಸಿಎಂ ಯಡಿಯೂರಪ್ಪ ಎಲ್ಲ ವಿಷಯದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮತಕ್ಷೇತ್ರದ ಅನುದಾನವನ್ನು ತಡೆ ಹಿಡಿಯಲಾಗಿದೆ. ಈಗಿನ ಸರಕಾರಕ್ಕೆ ಗೊತ್ತು ಗುರಿ ಏನೂ ಇಲ್ಲ. ಸಮ್ಮಿಶ್ರ ಸರಕಾತ ಇದಕ್ಕಿಂತ ನೂರು ಪಟ್ಟು ಚೆನ್ನಾಗಿತ್ತು' ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಎಂ. ಬಿ. ಪಾಟೀಲ್ ಕಿಡಿಕಾರಿದ್ದಾರೆ.

5 ರೂ. ಚೇಂಜ್ ಕೊಡ್ಲಿಲ್ಲ ಅಂತಾ ಲೇಡಿ ಕಂಡಕ್ಟರ್‌ಗೆ ಪರಚಿ ಬಿಸಾಕಿದ ಶೂರ್ಪನಖಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ