ಆ್ಯಪ್ನಗರ

ಮೆಕ್ಕಾ ಯಾತ್ರಿಗಳಿಗೆ ಅರ್ಧಕ್ಕೆ ಕೈ ಕೊಟ್ಟ ಟ್ರಾವೆಲ್‌ ಏಜೆಂಟ್‌

ಮೆಕ್ಕಾ, ಮದೀನಾ ತೀರ್ಥಯಾತ್ರೆಗೆ ಕರೆದೊಯ್ದ ಟ್ರಾವೆಲ್‌ ಏಜೆಂಟ್‌ವೊಬ್ಬ ಅರ್ಧದಲ್ಲಿ ಕೈಕೊಟ್ಟ ಕಾರಣ ಬೆಂಗಳೂರು ಮತ್ತು ದಾವಣಗೆರೆ ಮೂಲದ ಸುಮಾರು 82 ...

Vijaya Karnataka 7 Jul 2019, 5:00 am
ಬೆಂಗಳೂರು: ಮೆಕ್ಕಾ, ಮದೀನಾ ತೀರ್ಥಯಾತ್ರೆಗೆ ಕರೆದೊಯ್ದ ಟ್ರಾವೆಲ್‌ ಏಜೆಂಟ್‌ವೊಬ್ಬ ಅರ್ಧದಲ್ಲಿ ಕೈಕೊಟ್ಟ ಕಾರಣ ಬೆಂಗಳೂರು ಮತ್ತು ದಾವಣಗೆರೆ ಮೂಲದ ಸುಮಾರು 82 ಜನ ಯಾತ್ರಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
Vijaya Karnataka Web mecca yatre
ಮೆಕ್ಕಾ ಯಾತ್ರಿಗಳಿಗೆ ಅರ್ಧಕ್ಕೆ ಕೈ ಕೊಟ್ಟ ಟ್ರಾವೆಲ್‌ ಏಜೆಂಟ್‌


ಟ್ರಾವೆಲ್‌ ಏಜೆಂಟ್‌ ತನ್ವೀರ್‌ ಎಂಬಾತನೇ ಯಾತ್ರಿಗಳ ಪಾಸ್‌ಪೋರ್ಟ್‌ ಸಹಿತ ಪರಾರಿಯಾಗಿದ್ದು, ಒಂದು ವಾರದಿಂದ ಮದೀನಾದಲ್ಲಿರುವ ಯಾತ್ರಿಗಳು ವಾಪಸ್‌ ಭಾರತಕ್ಕೆ ಹಿಂದಿರುಗಲಾಗದೆ ಪರದಾಡುತ್ತಿದ್ದಾರೆ. ಯಾತ್ರೆಗಾಗಿ (ಉಮ್ರಾ) ಹಿರಿಯ ನಾಗರಿಕರು ತಲಾ 40 ಸಾವಿರ ರೂ.ಯಿಂದ 50 ಸಾವಿರ ರೂ.ವರೆಗೆ ಬೆಂಗಳೂರು ಮೂಲದ ಟ್ರಾವೆಲ್ಸ್‌ ಏಜೆನ್ಸಿಗೆ ಹಣ ಪಾವತಿ ಮಾಡಿದ್ದರು. ಈ ಎಲ್ಲರೂ ಏಜೆಂಟ್‌ ತನ್ವೀರ್‌ ಎಂಬಾತನ ಜೊತೆಗೆ ಜೂ.20ರಂದು ಮೆಕ್ಕಾಗೆ ತೆರಳಿದ್ದರು. ಮೆಕ್ಕಾದಲ್ಲಿ ಒಂದು ವಾರ ಕಳೆದ ಬಳಿಕ ಜೂ.26ರಂದು ಮದೀನಾಗೆ ಕರೆದೊಯ್ಯಲಾಗಿತ್ತು. ಯಾತ್ರಿಗಳನ್ನು ಲಾಡ್ಜ್‌ವೊಂದರಲ್ಲಿ ಉಳಿದುಕೊಳ್ಳಲು ತಿಳಿಸಿದ್ದ ತನ್ವೀರ್‌, ಭಾರತಕ್ಕೆ ವಾಪಸ್‌ ಮರಳುವ ಟಿಕೆಟ್‌ನೊಂದಿಗೆ ಬರುತ್ತೇನೆ ಎಂದು ಹೇಳಿ ಅವರ ಪಾಸ್‌ಪೋರ್ಟ್‌ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಮರಳಿ ಬಾರದ ಕಾರಣ ಯಾತ್ರಾರ್ಥಿಗಳು ಕರೆ ಮಾಡಿದರೆ ತನ್ವೀರ್‌ ನಂಬರ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಈಗ ಯಾತ್ರಿಗಳು ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಕೈಯಲ್ಲಿ ಹೆಚ್ಚಿನ ಹಣವೂ ಇಲ್ಲದೇ ಕುಟುಂಬ ಸದಸ್ಯರನ್ನು ಫೋನ್‌ನಲ್ಲಿ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅಲ್ಲದೇ, ಸಂಕಷ್ಟಕ್ಕೆ ಸಿಲುಕಿರುವ ಮತ್ತು ನೆರವು ಕೋರಿ ಯುಟ್ಯೂಬ್‌ನಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದರು.

ಯಾತ್ರಿಗಳು ತಮ್ಮ ಪ್ರಯಾಣ ದಾಖಲೆಗಳಿಗಾಗಿ ನೆರವು ಕೋರಿ ಮದೀನಾದಲ್ಲಿರುವ ಕರ್ನಾಟಕ ಮುಸ್ಲಿಂ ಕಲ್ಯಾಣ ಸಂಘವನ್ನು ಸಂಪರ್ಕಿಸಿದ್ದರು. ಆ ಮುಸ್ಲಿಂ ಸಂಘಟನೆಯು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.

''ಸಂಕಷ್ಟದಲ್ಲಿರುವ ಜನರಿಗೆ ಹಣವನ್ನು ಹೊಂದಿಸಲಾಗುತ್ತಿದೆ'' ಎಂದು ಮುಸ್ಲಿಂ ಸಂಘಟನೆ ಅಧ್ಯಕ್ಷ ಇಕ್ಬಾಲ್‌ ಅಹ್ಮೆದ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ