ಬೆಂಗಳೂರು: ಹೆಚ್ಚುತ್ತಿರುವ ಅಕ್ರಮ ಬಡಾವಣೆ ಸಂಬಂಧ ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಸರಕಾರದ ಪರವಾಗಿ ಭರವಸೆ ನೀಡಿದರು. ವಿಧಾನಸಭೆಯಲ್ಲಿ ಶುಕ್ರವಾರ ಕಾಂಗ್ರೆಸ್ನ ರಾಘವೇಂದ್ರ ಹಿಟ್ನಾಳ್ ಹಾಗೂ ಬಿಜೆಪಿಯ ಅಮೃತ್ ದೇಸಾಯಿ ಕೇಳಿದ ಪ್ರತ್ಯೇಕ ಮೂಲ ಪ್ರಶ್ನೆ ಸಂಬಂಧ ಕಾರಜೋಳ ಉತ್ತರಿಸಿದರು. ಎರಡು ಇಲಾಖೆಯ ಉತ್ತರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಎರಡು ಇಲಾಖೆಗಳ ನಡುವಿನ ದ್ವಂದ್ವದ ಬಗ್ಗೆ ಸದನದ ಗಮನ ಸೆಳೆದರು. ಶಾಸಕರ ಭಾವನೆ ಆಧರಿಸಿ ಸ್ಪೀಕರ್ ಕಾಗೇರಿ ''ಯೋಜನಾ ಪ್ರಾಧಿಕಾರ ರಚನೆಗೂ ಮೊದಲಿನ ಕಟ್ಟಡದಾರರಿಗೆ ಹೆಚ್ಚುವರಿ ಮಹಡಿ ನಿರ್ಮಿಸುವುದಕ್ಕೂ ಅಡ್ಡಿಯಾಗುತ್ತಿದೆ. ಸ್ಥಳೀಯ ಹಂತದ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಗಮನ ಹರಿಸುತ್ತಿಲ್ಲ. ಇಡೀ ರಾಜ್ಯದಲ್ಲಿಈ ಸಮಸ್ಯೆ ಇದೆ. ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಬಿಗಿ ಮಾಡಬೇಕು,'' ಎಂದು ಸೂಚಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ನೀರು, ವಿದ್ಯುತ್ ಸಂಪರ್ಕ
''ಅನಧಿಕೃತ ಬಡಾವಣೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಕುಡಿಯುವ ನೀರು, ಬೀದಿದೀಪ ನಿರ್ವಹಣೆ ಇತರೆ ನಿರ್ವಹಣೆ ಮಾಡಲಾಗುತ್ತಿದ್ದು, ಯಾವ ಸೇವೆಯನ್ನೂ ಸ್ಥಗಿತಗೊಳಿಸಿಲ್ಲ," ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಧಾರವಾಡದಲ್ಲಿನ ಅಕ್ರಮ ಬಡಾವಣೆ ಸಂಬಂಧ ಕಾಂಗ್ರೆಸ್ನ ರಾಘವೇಂದ್ರ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಸಚಿವರು,''ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯಿದೆ. ಹೊಸದಾಗಿ ತಲೆಯೆತ್ತಿರುವ ಅನಧಿಕೃತ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುತ್ತಿಲ್ಲ. ಹಾಗಾಗಿ ಅರ್ಜಿ ನಮೂನೆ- 3 ಹಾಗೂ ನಕ್ಷೆ ಮಂಜೂರಾತಿಗೆ ಅನುಮತಿ ನೀಡುತ್ತಿಲ್ಲ,'' ಎಂದು ಹೇಳಿದರು.
''ಯೋಜನಾ ಪ್ರಾಧಿಕಾರ ರಚನೆ ನಂತರ ಅಕ್ರಮ ಬಡಾವಣೆಗಳ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದೆಡೆ 'ಎ', 'ಬಿ' ಖಾತಾ ನೀಡಿಕೆ ಸ್ಥಗಿತಗೊಂಡಿರುವುದರಿಂದ ಶೇ. 35ರಷ್ಟು ಆದಾಯ ಇಳಿಕೆಯಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು,'' ಎಂದು ಹೇಳಿದರು.
ರಾಘವೇಂದ್ರ ಹಿಟ್ನಾಳ್ ''ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೂ ಮೊದಲು ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದಾಗ ನಿರ್ಮಾಣಗೊಂಡ ಬಡಾವಣೆಗಳನ್ನು ಅರ್ಜಿ ನಮೂನೆ- 3ರಡಿ ನೋಂದಾಯಿಸಿ ಸಕ್ರಮಗೊಳಿಸುವ ಪ್ರಕ್ರಿಯೆ ಸ್ಥಗಿತದಿಂದ ತೀವ್ರ ತೊಂದರೆಯಾಗುತ್ತಿದೆ," ಎಂದು ದೂರಿದರು.
ಪಟ್ಟಿ ರದ್ದುಪಡಿಸಿ , ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್
ಅಕ್ರಮ ಬಡಾವಣೆಗಳ ಪಟ್ಟಿ ಪಡೆದು ರದ್ದುಪಡಿಸುವ ಜತೆಗೆ ಅಕ್ರಮ ಬಡಾವಣೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.
ಬಿಜೆಪಿಯ ಅಮೃತ್ ದೇಸಾಯಿ ಪ್ರಶ್ನೆಗೆ ಉತ್ತರಿಸಿ, ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕೃಷಿ ಜಮೀನಿನಲ್ಲಿ ತಲೆಯೆತ್ತಿರುವ ಅಕ್ರಮ ಬಡಾವಣೆಗಳ ತೆರವಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಅಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸದಂತೆಯೂ ಸೂಚಿಸಲಾಗಿದೆ," ಎಂದು ಹೇಳಿದರು.
''ಈ ಹಿಂದೆ ಯೋಜನಾ ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಅನಧಿಕೃತ ಬಡಾವಣೆಗಳ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಪ್ರಾಧಿಕಾರ/ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆ ಮಾಡಲು ಸೂಚಿಸಿದ್ದೇನೆ," ಎಂದು ತಿಳಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಅಮೃತ್ ದೇಸಾಯಿ, "ರೈತರಿಗೆ ಕಡಿಮೆ ಹಣ ನೀಡಿ ಜಿಪಿಎ ಮಾಡಿಕೊಂಡು ಒಂದೇ ನಿವೇಶನವನ್ನು ನಾಲ್ಕೈದು ಮಂದಿಗೆ ಮಾರಲಾಗುತ್ತಿದೆ. ಈ ವ್ಯವಹಾರದಲ್ಲಿ ಪುಢಾರಿಗಳು, ರೌಡಿಗಳು ತೊಡಗಿಸಿಕೊಂಡಿದ್ದು, ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಕ್ರಿಮಿನಲ್ ಕೇಸ್ ಹಾಕಬೇಕು,'' ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ನ ಎ.ಟಿ.ರಾಮಸ್ವಾಮಿ, ''ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಬಡಾವಣೆ ಮಾಡಲಾಗುತ್ತಿದೆ. ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರೂ ನಾಯಿಕೊಡೆಗಳಂತೆ ನಿರ್ಮಾಣವಾಗುತ್ತಿವೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ,'' ಎಂದು ದೂರಿದರು.
--------------
''ಯೋಜನಾ ಪ್ರಾಧಿಕಾರಗಳು ಅಸಮರ್ಪಕ ಕೆಲಸದಿಂದ ಅನಧಿಕೃತ ಬಡಾವಣೆಗಳು ಸೃಷ್ಟಿ. ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಬೆಂಗಳೂರಿನ ಕಪ್ಪು ಹಣ ಹೂಡುವುದಕ್ಕೆ ಕಡಿವಾಣ ಹಾಕಬೇಕು,'' - ಶಿವಲಿಂಗೇಗೌಡ, ಜೆಡಿಎಸ್
ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯು ಯೋಜನಾ ಪ್ರಾಧಿಕಾರಗಳನ್ನು ಬಿಗಿಗೊಳಿಸಿದರೆ ನಿಯಂತ್ರಣಕ್ಕೆ ಬರಲಿದೆ -ಕುಮಾರ್ ಬಂಗಾರಪ್ಪ, ಬಿಜೆಪಿ
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ - ಶಿವಾನಂದ ಪಾಟೀಲ್,ಕಾಂಗ್ರೆಸ್
--------------------------------
ಇಲಾಖೆಗಳ ದ್ವಂದ್ವ ನಿಲುವು
ಅಕ್ರಮ ಬಡಾವಣೆಗೆ ಪೌರಾಡಳಿತ ಇಲಾಖೆ ಮೂಲ ಸೌಲಭ್ಯ ಕೊಡುತ್ತಿದೆ... ಮತ್ತೊಂದು ಕಡೆ ನಗರಾಭಿವೃದ್ಧಿ ಇಲಾಖೆ ಎಲ್ಲ ಸವಲತ್ತು ಕಡಿತ ಮಾಡುವುದಾಗಿ ಹೇಳುತ್ತಿದೆ. ಇಲಾಖೆಗಳ ನಡುವೆಯೇ ದ್ವಂದ್ವ. ಒಂದೇ ಸರಕಾರದಲ್ಲಿ ಈ ರೀತಿ ಧೋರಣೆ ಎಷ್ಟು ಸರಿ. ಅಕ್ರಮ ಬಡಾವಣೆಗಳಿಗೆ ಕಡಿವಾಣ ಎಂದು? ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ನೀರು, ವಿದ್ಯುತ್ ಸಂಪರ್ಕ
''ಅನಧಿಕೃತ ಬಡಾವಣೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಕುಡಿಯುವ ನೀರು, ಬೀದಿದೀಪ ನಿರ್ವಹಣೆ ಇತರೆ ನಿರ್ವಹಣೆ ಮಾಡಲಾಗುತ್ತಿದ್ದು, ಯಾವ ಸೇವೆಯನ್ನೂ ಸ್ಥಗಿತಗೊಳಿಸಿಲ್ಲ," ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಧಾರವಾಡದಲ್ಲಿನ ಅಕ್ರಮ ಬಡಾವಣೆ ಸಂಬಂಧ ಕಾಂಗ್ರೆಸ್ನ ರಾಘವೇಂದ್ರ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಸಚಿವರು,''ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯಿದೆ. ಹೊಸದಾಗಿ ತಲೆಯೆತ್ತಿರುವ ಅನಧಿಕೃತ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುತ್ತಿಲ್ಲ. ಹಾಗಾಗಿ ಅರ್ಜಿ ನಮೂನೆ- 3 ಹಾಗೂ ನಕ್ಷೆ ಮಂಜೂರಾತಿಗೆ ಅನುಮತಿ ನೀಡುತ್ತಿಲ್ಲ,'' ಎಂದು ಹೇಳಿದರು.
''ಯೋಜನಾ ಪ್ರಾಧಿಕಾರ ರಚನೆ ನಂತರ ಅಕ್ರಮ ಬಡಾವಣೆಗಳ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದೆಡೆ 'ಎ', 'ಬಿ' ಖಾತಾ ನೀಡಿಕೆ ಸ್ಥಗಿತಗೊಂಡಿರುವುದರಿಂದ ಶೇ. 35ರಷ್ಟು ಆದಾಯ ಇಳಿಕೆಯಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು,'' ಎಂದು ಹೇಳಿದರು.
ರಾಘವೇಂದ್ರ ಹಿಟ್ನಾಳ್ ''ನಗರಾಭಿವೃದ್ಧಿ ಪ್ರಾಧಿಕಾರ ರಚನೆಗೂ ಮೊದಲು ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದಾಗ ನಿರ್ಮಾಣಗೊಂಡ ಬಡಾವಣೆಗಳನ್ನು ಅರ್ಜಿ ನಮೂನೆ- 3ರಡಿ ನೋಂದಾಯಿಸಿ ಸಕ್ರಮಗೊಳಿಸುವ ಪ್ರಕ್ರಿಯೆ ಸ್ಥಗಿತದಿಂದ ತೀವ್ರ ತೊಂದರೆಯಾಗುತ್ತಿದೆ," ಎಂದು ದೂರಿದರು.
ಪಟ್ಟಿ ರದ್ದುಪಡಿಸಿ , ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್
ಅಕ್ರಮ ಬಡಾವಣೆಗಳ ಪಟ್ಟಿ ಪಡೆದು ರದ್ದುಪಡಿಸುವ ಜತೆಗೆ ಅಕ್ರಮ ಬಡಾವಣೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.
ಬಿಜೆಪಿಯ ಅಮೃತ್ ದೇಸಾಯಿ ಪ್ರಶ್ನೆಗೆ ಉತ್ತರಿಸಿ, ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕೃಷಿ ಜಮೀನಿನಲ್ಲಿ ತಲೆಯೆತ್ತಿರುವ ಅಕ್ರಮ ಬಡಾವಣೆಗಳ ತೆರವಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಅಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸದಂತೆಯೂ ಸೂಚಿಸಲಾಗಿದೆ," ಎಂದು ಹೇಳಿದರು.
''ಈ ಹಿಂದೆ ಯೋಜನಾ ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಅನಧಿಕೃತ ಬಡಾವಣೆಗಳ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಪ್ರಾಧಿಕಾರ/ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆ ಮಾಡಲು ಸೂಚಿಸಿದ್ದೇನೆ," ಎಂದು ತಿಳಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಅಮೃತ್ ದೇಸಾಯಿ, "ರೈತರಿಗೆ ಕಡಿಮೆ ಹಣ ನೀಡಿ ಜಿಪಿಎ ಮಾಡಿಕೊಂಡು ಒಂದೇ ನಿವೇಶನವನ್ನು ನಾಲ್ಕೈದು ಮಂದಿಗೆ ಮಾರಲಾಗುತ್ತಿದೆ. ಈ ವ್ಯವಹಾರದಲ್ಲಿ ಪುಢಾರಿಗಳು, ರೌಡಿಗಳು ತೊಡಗಿಸಿಕೊಂಡಿದ್ದು, ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಕ್ರಿಮಿನಲ್ ಕೇಸ್ ಹಾಕಬೇಕು,'' ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ನ ಎ.ಟಿ.ರಾಮಸ್ವಾಮಿ, ''ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಬಡಾವಣೆ ಮಾಡಲಾಗುತ್ತಿದೆ. ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರೂ ನಾಯಿಕೊಡೆಗಳಂತೆ ನಿರ್ಮಾಣವಾಗುತ್ತಿವೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ,'' ಎಂದು ದೂರಿದರು.
--------------
''ಯೋಜನಾ ಪ್ರಾಧಿಕಾರಗಳು ಅಸಮರ್ಪಕ ಕೆಲಸದಿಂದ ಅನಧಿಕೃತ ಬಡಾವಣೆಗಳು ಸೃಷ್ಟಿ. ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಬೆಂಗಳೂರಿನ ಕಪ್ಪು ಹಣ ಹೂಡುವುದಕ್ಕೆ ಕಡಿವಾಣ ಹಾಕಬೇಕು,'' - ಶಿವಲಿಂಗೇಗೌಡ, ಜೆಡಿಎಸ್
ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯು ಯೋಜನಾ ಪ್ರಾಧಿಕಾರಗಳನ್ನು ಬಿಗಿಗೊಳಿಸಿದರೆ ನಿಯಂತ್ರಣಕ್ಕೆ ಬರಲಿದೆ -ಕುಮಾರ್ ಬಂಗಾರಪ್ಪ, ಬಿಜೆಪಿ
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ - ಶಿವಾನಂದ ಪಾಟೀಲ್,ಕಾಂಗ್ರೆಸ್
--------------------------------
ಇಲಾಖೆಗಳ ದ್ವಂದ್ವ ನಿಲುವು
ಅಕ್ರಮ ಬಡಾವಣೆಗೆ ಪೌರಾಡಳಿತ ಇಲಾಖೆ ಮೂಲ ಸೌಲಭ್ಯ ಕೊಡುತ್ತಿದೆ... ಮತ್ತೊಂದು ಕಡೆ ನಗರಾಭಿವೃದ್ಧಿ ಇಲಾಖೆ ಎಲ್ಲ ಸವಲತ್ತು ಕಡಿತ ಮಾಡುವುದಾಗಿ ಹೇಳುತ್ತಿದೆ. ಇಲಾಖೆಗಳ ನಡುವೆಯೇ ದ್ವಂದ್ವ. ಒಂದೇ ಸರಕಾರದಲ್ಲಿ ಈ ರೀತಿ ಧೋರಣೆ ಎಷ್ಟು ಸರಿ. ಅಕ್ರಮ ಬಡಾವಣೆಗಳಿಗೆ ಕಡಿವಾಣ ಎಂದು? ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಪ್ರಶ್ನಿಸಿದ್ದಾರೆ.