ಎಂ. ಎನ್. ಅಹೋಬಳಪತಿ
ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಕಬ್ಬಿಣದ ಅದಿರು ರಫ್ತು ಮಾಡಲು ಇರುವ ನಿರ್ಬಂಧಗಳ ತೆರವಿಗೆ ಗಣಿ ಕಂಪನಿಗಳು ತೆರೆ ಮರೆಯ ಕಸರತ್ತು ನಡೆಸುತ್ತಿದ್ದು, ಕಬ್ಬಿಣದ ಅದಿರು ಗಣಿಗಾರಿಕೆ ವಲಯದ ನಿಜವಾದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿರುವ ನಿರ್ಬಂಧಿತ ವ್ಯಾಪಾರ ಪದ್ಧತಿ, ಇ - ಹರಾಜು ಪದ್ದತಿ ಬದಲಾಗಬೇಕು ಎನ್ನುವ ಆಗ್ರಹವನ್ನು ಮುಂದಿಟ್ಟಿವೆ. ಈ ಕುರಿತಾಗಿ ಮಾಧ್ಯಮ ಸಂಸ್ಥೆಗಳಿಗೆ ಪೂರಕ ಮಾಹಿತಿಗಳನ್ನು ತಲುಪಿಸಿ ಗಮನ ಸೆಳೆಯುತ್ತಿವೆ. ಒಂದು ದಶಕದ ಹಳೆಯ ಇ - ಹರಾಜು ವ್ಯವಸ್ಥೆ ಮತ್ತು ನಿರ್ಬಂಧಿತ ವ್ಯಾಪಾರ ಪದ್ಧತಿಯಿಂದಾಗಿ ಅದಿರು ಉದ್ಯಮದಾರರು ನೆರೆಯ ರಾಜ್ಯಗಳಿಗೆ ಮಾತ್ರ ಕಬ್ಬಿಣದ ಅದಿರನ್ನು ಮಾರಾಟ ಮಾಡಲು ಅವಕಾಶ ಇದೆ. ರಫ್ತಿಗೆ ಅವಕಾಶ ನಿರ್ಬಂಧಿಸಿರುವುದರಿಂದ ವಾರ್ಷಿಕ 8,000 ಕೋಟಿ ರೂ. ಗಳಷ್ಟು ಸಂಭವನೀಯ ಆದಾಯವನ್ನು ರಾಜ್ಯ ಸರಕಾರ ಕಳೆದುಕೊಳ್ಳುತ್ತಿದೆ ಎನ್ನುತ್ತಿವೆ.
ಕರ್ನಾಟಕ ರಾಜ್ಯವು 2021 ರ ಆಗಸ್ಟ್ ತಿಂಗಳಲ್ಲಿ 3.35 ದಶ ಲಕ್ಷ ಟನ್ ಮಾರಾಟ ಮಾಡಬಹುದಾದ ಕಬ್ಬಿಣದ ಅದಿರಿನ ದೊಡ್ಡ ಸಂಗ್ರಹವನ್ನು ಹೊಂದಿದ್ದರೂ, ಕರ್ನಾಟಕ ಸ್ಟೀಲ್ ಉದ್ಯಮಿಗಳು ಒಡಿಶಾ ರಾಜ್ಯದಿಂದ 7 ಲಕ್ಷ ಟನ್ ಕಬ್ಬಿಣದ ಅದಿರನ್ನು ಖರೀದಿಸಿದ್ದಾರೆ. ಮತ್ತೊಂದು ಕಡೆ ಇತರೆ ರಾಜ್ಯಗಳಿಂದ ಕಬ್ಬಿಣದ ಅದಿರನ್ನು ಪಡೆಯಲು ಅನುಸರಿಸುತ್ತಿರುವ ವಿಧಾನದಿಂದಾಗಿ ರಾಜ್ಯದ ಕಬ್ಬಿಣದ ಅದಿರು ಮಾರಾಟದ ಬೆಲೆಯಲ್ಲಿ ಕುಸಿತ ಆಗಿರುವುದರಿಂದ ರಾಜ್ಯದ ಆದಾಯಕ್ಕೆ 30% ನಷ್ಟವಾಗಿದೆ ಎನ್ನುವ ಲೆಕ್ಕಾಚಾರ ಮುಂದಿಟ್ಟಿವೆ.
ಅಂತಾರಾಷ್ಟ್ರೀಯ ಕಬ್ಬಿಣದ ಅದಿರು ಮಾರುಕಟ್ಟೆಗೆ ಹೋಲಿಸಿದರೆ ಕರ್ನಾಟಕ ಕಬ್ಬಿಣದ ಅದಿರಿನ ಬೆಲೆಗಳನ್ನು 43% ಕಡಿಮೆ ಮಾಡಲಾಗಿದೆ. ಆದರೆ, ಆಮದು ಮಾಡಿಕೊಳ್ಳಲಾದ ಕಬ್ಬಿಣದ ಅದಿರು ಬೆಲೆಗಳು ಡಿಎಂಟಿಗೆ 9,760 ರೂ. ಹತ್ತಿರದಲ್ಲಿವೆ. ಕರ್ನಾಟಕ ಕಬ್ಬಿಣದ ಅದಿರಿನ ಬೆಲೆಗಳು ಡಿಎಂಟಿಗೆ 5,606 ರೂ. ಹತ್ತಿರದಲ್ಲಿವೆ. ನೆರೆಯ ರಾಜ್ಯಗಳಿಂದ ಕಬ್ಬಿಣದ ಅದಿರಿನ ಹೆಚ್ಚಿನ ಒಳ ಹರಿವು ಕರ್ನಾಟಕ ಕಬ್ಬಿಣದ ಅದಿರು ಗಣಿಗಾರಿಕೆ ಉದ್ಯಮಕ್ಕೆ ತೀವ್ರ ಹೊಡೆತ ನೀಡಿದೆ ಎಂದು ಗಣಿ ಉದ್ಯಮದಾರರು ಹೇಳುತ್ತಿದ್ದಾರೆ.
ಕಬ್ಬಿಣದ ಅದಿರು ರಫ್ತು ನ್ಯಾಯ ಬದ್ಧ ಸಲಹೆ ಅಲ್ಲ: ಎಸ್. ಆರ್. ಹಿರೇಮಠ್
'ಕಬ್ಬಿಣದ ಅದಿರನ್ನು ರಫ್ತು ಮಾಡಬೇಕೆನ್ನುವುದು ನ್ಯಾಯಬದ್ಧ ಸಲಹೆ ಅಲ್ಲ. ಇದನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು' ಎನ್ನುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ್.
ಕಬ್ಬಿಣದ ಅದಿರು ರಫ್ತಿಗೆ ಪೂರಕವಲ್ಲದ, ನಿರ್ಬಂಧಿತ ವ್ಯಾಪಾರ ಪದ್ಧತಿ ಹಾಗೂ ಇ - ಹರಾಜು ಪದ್ಧತಿಗಳ ಕುರಿತು ಗಣಿ ಕಂಪನಿಗಳ ಆಕ್ಷೇಪದ ಕುರಿತು ವಿಕ ಗಮನ ಸೆಳೆದಾಗ 'ಗಣಿ ಕಂಪನಿಗಳು ಮುಂದಿಡುತ್ತಿರುವ ವಾದದಲ್ಲಿ ಹುರುಳಿಲ್ಲ. ದೇಶದ ಭವಿಷ್ಯ, ಮುಂದಿನ ಪೀಳಿಗೆಯ ಕಾಳಜಿ ಯಾವುದೂ ಇಲ್ಲ. ಅವರ ಕಸರತ್ತಿನಿಂದ ಯಾವುದೇ ಪ್ರಯೋಜನ ಇಲ್ಲ' ಎಂದರು.
'ಜಸ್ಟಿಸ್ ಸಂತೋಷ್ ಹೆಗ್ಡೆಯವರು ಲೋಕಾಯುಕ್ತ ಆಗಿದ್ದಾಗ ಸಲ್ಲಿಸಿದ್ದ ಮೊದಲ ವರದಿ ಆಧರಿಸಿ 2009ರಲ್ಲಿ ನಾವು ಸುಪ್ರೀಂ ಕೋರ್ಟ್ಗೆ ಹೋದೆವು. ಈ ವರದಿ ಜತೆಗೆ ಹಲವು ಮಹತ್ವದ ದಾಖಲೆಗಳಿದ್ದವು. ಆದರೂ ಕರ್ನಾಟಕದಲ್ಲಿ ಸಂತೋಷ್ ಹೆಗ್ಡೆಯವರ ವರದಿ ನಮ್ಮ ಪಿಐಎಲ್ಗೆ ಒಂದು ಮಹತ್ವದ ಆಧಾರವಾಗಿತ್ತು. ಈ ಪಿಐಎಲ್ನಿಂದ ಸುಪ್ರೀಂ ಕೋರ್ಟ್ ಜುಲೈ 29, 2011 ರಂದು ಮೊದಲು ಬಳ್ಳಾರಿಯಲ್ಲಿ ಅದಿರು ರಫ್ತು ನಿಷೇಧ ಮಾಡಿತು. ಒಂದು ತಿಂಗಳ ನಂತರ ಆಗಸ್ಟ್ 26 ಕ್ಕೆ ಇದೇ ನಿಷೇಧವನ್ನು ಚಿತ್ರದುರ್ಗ ಹಾಗು ತುಮಕೂರು ಜಿಲ್ಲೆಗಳಿಗೂ ವಿಸ್ತರಿಸಿತು' ಎಂದರು.
ನ್ಯಾ. ಸಂತೋಷ್ ಹೆಗ್ಡೆಯವರ ವರದಿಯಲ್ಲಿ 'ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇವೆ. ಅವಶ್ಯಕತೆಯಿದ್ದಲ್ಲಿ ಬೇರೆ ಕಡೆಯಿಂದ ತಂತ್ರಜ್ಞಾನ ತರಬಹುದು. ಕಬ್ಬಿಣದ ಅದಿರು ಪುನರ್ ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ ಇದನ್ನು ರಫ್ತು ಮಾಡಿದರೆ ಹೊರ ದೇಶಗಳಿಗೆ ಹೋಗುತ್ತದೆ. ಮುಂದಿನ ಪೀಳಿಗೆ ಇದರ ಪ್ರಯೋಜದಿಂದ ವಂಚಿತವಾಗಲಿವೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ರಫ್ತು ಮಾಡಬಾರದು ಎಂದು ಹೇಳಿದ್ದರು' ಎಂಬುದನ್ನು ಸ್ಮರಿಸಿಕೊಂಡರು.
ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಕಬ್ಬಿಣದ ಅದಿರು ರಫ್ತು ಮಾಡಲು ಇರುವ ನಿರ್ಬಂಧಗಳ ತೆರವಿಗೆ ಗಣಿ ಕಂಪನಿಗಳು ತೆರೆ ಮರೆಯ ಕಸರತ್ತು ನಡೆಸುತ್ತಿದ್ದು, ಕಬ್ಬಿಣದ ಅದಿರು ಗಣಿಗಾರಿಕೆ ವಲಯದ ನಿಜವಾದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿರುವ ನಿರ್ಬಂಧಿತ ವ್ಯಾಪಾರ ಪದ್ಧತಿ, ಇ - ಹರಾಜು ಪದ್ದತಿ ಬದಲಾಗಬೇಕು ಎನ್ನುವ ಆಗ್ರಹವನ್ನು ಮುಂದಿಟ್ಟಿವೆ. ಈ ಕುರಿತಾಗಿ ಮಾಧ್ಯಮ ಸಂಸ್ಥೆಗಳಿಗೆ ಪೂರಕ ಮಾಹಿತಿಗಳನ್ನು ತಲುಪಿಸಿ ಗಮನ ಸೆಳೆಯುತ್ತಿವೆ.
ಕರ್ನಾಟಕ ರಾಜ್ಯವು 2021 ರ ಆಗಸ್ಟ್ ತಿಂಗಳಲ್ಲಿ 3.35 ದಶ ಲಕ್ಷ ಟನ್ ಮಾರಾಟ ಮಾಡಬಹುದಾದ ಕಬ್ಬಿಣದ ಅದಿರಿನ ದೊಡ್ಡ ಸಂಗ್ರಹವನ್ನು ಹೊಂದಿದ್ದರೂ, ಕರ್ನಾಟಕ ಸ್ಟೀಲ್ ಉದ್ಯಮಿಗಳು ಒಡಿಶಾ ರಾಜ್ಯದಿಂದ 7 ಲಕ್ಷ ಟನ್ ಕಬ್ಬಿಣದ ಅದಿರನ್ನು ಖರೀದಿಸಿದ್ದಾರೆ. ಮತ್ತೊಂದು ಕಡೆ ಇತರೆ ರಾಜ್ಯಗಳಿಂದ ಕಬ್ಬಿಣದ ಅದಿರನ್ನು ಪಡೆಯಲು ಅನುಸರಿಸುತ್ತಿರುವ ವಿಧಾನದಿಂದಾಗಿ ರಾಜ್ಯದ ಕಬ್ಬಿಣದ ಅದಿರು ಮಾರಾಟದ ಬೆಲೆಯಲ್ಲಿ ಕುಸಿತ ಆಗಿರುವುದರಿಂದ ರಾಜ್ಯದ ಆದಾಯಕ್ಕೆ 30% ನಷ್ಟವಾಗಿದೆ ಎನ್ನುವ ಲೆಕ್ಕಾಚಾರ ಮುಂದಿಟ್ಟಿವೆ.
ಅಂತಾರಾಷ್ಟ್ರೀಯ ಕಬ್ಬಿಣದ ಅದಿರು ಮಾರುಕಟ್ಟೆಗೆ ಹೋಲಿಸಿದರೆ ಕರ್ನಾಟಕ ಕಬ್ಬಿಣದ ಅದಿರಿನ ಬೆಲೆಗಳನ್ನು 43% ಕಡಿಮೆ ಮಾಡಲಾಗಿದೆ. ಆದರೆ, ಆಮದು ಮಾಡಿಕೊಳ್ಳಲಾದ ಕಬ್ಬಿಣದ ಅದಿರು ಬೆಲೆಗಳು ಡಿಎಂಟಿಗೆ 9,760 ರೂ. ಹತ್ತಿರದಲ್ಲಿವೆ. ಕರ್ನಾಟಕ ಕಬ್ಬಿಣದ ಅದಿರಿನ ಬೆಲೆಗಳು ಡಿಎಂಟಿಗೆ 5,606 ರೂ. ಹತ್ತಿರದಲ್ಲಿವೆ. ನೆರೆಯ ರಾಜ್ಯಗಳಿಂದ ಕಬ್ಬಿಣದ ಅದಿರಿನ ಹೆಚ್ಚಿನ ಒಳ ಹರಿವು ಕರ್ನಾಟಕ ಕಬ್ಬಿಣದ ಅದಿರು ಗಣಿಗಾರಿಕೆ ಉದ್ಯಮಕ್ಕೆ ತೀವ್ರ ಹೊಡೆತ ನೀಡಿದೆ ಎಂದು ಗಣಿ ಉದ್ಯಮದಾರರು ಹೇಳುತ್ತಿದ್ದಾರೆ.
ಕಬ್ಬಿಣದ ಅದಿರು ರಫ್ತು ನ್ಯಾಯ ಬದ್ಧ ಸಲಹೆ ಅಲ್ಲ: ಎಸ್. ಆರ್. ಹಿರೇಮಠ್
'ಕಬ್ಬಿಣದ ಅದಿರನ್ನು ರಫ್ತು ಮಾಡಬೇಕೆನ್ನುವುದು ನ್ಯಾಯಬದ್ಧ ಸಲಹೆ ಅಲ್ಲ. ಇದನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು' ಎನ್ನುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ್.
ಕಬ್ಬಿಣದ ಅದಿರು ರಫ್ತಿಗೆ ಪೂರಕವಲ್ಲದ, ನಿರ್ಬಂಧಿತ ವ್ಯಾಪಾರ ಪದ್ಧತಿ ಹಾಗೂ ಇ - ಹರಾಜು ಪದ್ಧತಿಗಳ ಕುರಿತು ಗಣಿ ಕಂಪನಿಗಳ ಆಕ್ಷೇಪದ ಕುರಿತು ವಿಕ ಗಮನ ಸೆಳೆದಾಗ 'ಗಣಿ ಕಂಪನಿಗಳು ಮುಂದಿಡುತ್ತಿರುವ ವಾದದಲ್ಲಿ ಹುರುಳಿಲ್ಲ. ದೇಶದ ಭವಿಷ್ಯ, ಮುಂದಿನ ಪೀಳಿಗೆಯ ಕಾಳಜಿ ಯಾವುದೂ ಇಲ್ಲ. ಅವರ ಕಸರತ್ತಿನಿಂದ ಯಾವುದೇ ಪ್ರಯೋಜನ ಇಲ್ಲ' ಎಂದರು.
'ಜಸ್ಟಿಸ್ ಸಂತೋಷ್ ಹೆಗ್ಡೆಯವರು ಲೋಕಾಯುಕ್ತ ಆಗಿದ್ದಾಗ ಸಲ್ಲಿಸಿದ್ದ ಮೊದಲ ವರದಿ ಆಧರಿಸಿ 2009ರಲ್ಲಿ ನಾವು ಸುಪ್ರೀಂ ಕೋರ್ಟ್ಗೆ ಹೋದೆವು. ಈ ವರದಿ ಜತೆಗೆ ಹಲವು ಮಹತ್ವದ ದಾಖಲೆಗಳಿದ್ದವು. ಆದರೂ ಕರ್ನಾಟಕದಲ್ಲಿ ಸಂತೋಷ್ ಹೆಗ್ಡೆಯವರ ವರದಿ ನಮ್ಮ ಪಿಐಎಲ್ಗೆ ಒಂದು ಮಹತ್ವದ ಆಧಾರವಾಗಿತ್ತು. ಈ ಪಿಐಎಲ್ನಿಂದ ಸುಪ್ರೀಂ ಕೋರ್ಟ್ ಜುಲೈ 29, 2011 ರಂದು ಮೊದಲು ಬಳ್ಳಾರಿಯಲ್ಲಿ ಅದಿರು ರಫ್ತು ನಿಷೇಧ ಮಾಡಿತು. ಒಂದು ತಿಂಗಳ ನಂತರ ಆಗಸ್ಟ್ 26 ಕ್ಕೆ ಇದೇ ನಿಷೇಧವನ್ನು ಚಿತ್ರದುರ್ಗ ಹಾಗು ತುಮಕೂರು ಜಿಲ್ಲೆಗಳಿಗೂ ವಿಸ್ತರಿಸಿತು' ಎಂದರು.
ಕಬ್ಬಿಣದ ಅದಿರು ರಫ್ತು ನಿರ್ಬಂಧದಿಂದಾಗಿ ಪ್ರತಿ ವರ್ಷ ರಾಯ ಧನ, ಜಿಲ್ಲಾ ಖನಿಜ ಪ್ರತಿಷ್ಠಾನ ಮತ್ತು ಎನ್ಎಂಇಟಿ ಪಾವತಿಗಳು ಎಲ್ಲವನ್ನೂ ಪರಿಗಣಿಸಿದರೆ ಕರ್ನಾಟಕದ ಬೊಕ್ಕಸಕ್ಕೆ ವಾರ್ಷಿಕ ಒಟ್ಟು ನಷ್ಟವು 30, 000 ಕೋಟಿ ರೂ. ದಾಟುತ್ತದೆ. ಕಬ್ಬಿಣದ ಅದಿರಿಗೆ ವ್ಯಾಪಾರ ನಿರ್ಬಂಧಗಳನ್ನು ತೆಗೆದು ಹಾಕುವುದರಿಂದ ರಾಜ್ಯ ರಾಯ ಧನವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಹಾಗೂ ಎನ್ಎಂಇಟಿ ಮೂಲಕ ಗಣಿಗಾರಿಕೆ ಪ್ರದೇಶಗಳಲ್ಲಿ ಸಾಮಾಜಿಕ - ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ.
ನ್ಯಾ. ಸಂತೋಷ್ ಹೆಗ್ಡೆಯವರ ವರದಿಯಲ್ಲಿ 'ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇವೆ. ಅವಶ್ಯಕತೆಯಿದ್ದಲ್ಲಿ ಬೇರೆ ಕಡೆಯಿಂದ ತಂತ್ರಜ್ಞಾನ ತರಬಹುದು. ಕಬ್ಬಿಣದ ಅದಿರು ಪುನರ್ ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ ಇದನ್ನು ರಫ್ತು ಮಾಡಿದರೆ ಹೊರ ದೇಶಗಳಿಗೆ ಹೋಗುತ್ತದೆ. ಮುಂದಿನ ಪೀಳಿಗೆ ಇದರ ಪ್ರಯೋಜದಿಂದ ವಂಚಿತವಾಗಲಿವೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ರಫ್ತು ಮಾಡಬಾರದು ಎಂದು ಹೇಳಿದ್ದರು' ಎಂಬುದನ್ನು ಸ್ಮರಿಸಿಕೊಂಡರು.