ಆ್ಯಪ್ನಗರ

ಮಾನವೀಯತೆ ಮೆರೆದ ಅಶೋಕ್‌, ಮುನಿರತ್ನ; ತಮ್ಮ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ನಾಯಕರು

ಕರ್ನಾಟಕ ಉಪ ಚುನಾವಣೆ ವೇಳೆ ಸಚಿವ ಆರ್‌ ಅಶೋಕ್‌ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ನಾಯಕ ಮುನಿರತ್ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಅಪಘಾತದಲ್ಲಿ ಗಾಯಗೊಂಡರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

Vijaya Karnataka Web 22 Nov 2019, 4:17 pm
ಬೆಂಗಳೂರು: ಉಪ ಚುನಾವಣೆಗೆ ಪ್ರಚಾರ ಜೋರಾಗಿದೆ. ಸಾಗಿದೆ. ಈ ಸಂದರ್ಭದಲ್ಲಿ ಬ್ಯುಸಿಯಾಗಿದ್ದ ನಾಯಕರು ಪ್ರಚಾರದ ಜತೆಗೆ ಮಾನವೀಯತೆಯನ್ನೂ ಮೆರೆದಿದ್ದಾರೆ.
Vijaya Karnataka Web ಮುನಿರತ್ನ, ಅಶೋಕ್‌
ಮುನಿರತ್ನ, ಅಶೋಕ್‌


ಸಚಿವ ಆರ್‌. ಅಶೋಕ್‌ ಹಾಗೂ ರಾಜರಾಜೇಶ್ವರಿ ನಗರದ ಮುನಿರತ್ನ ಚುನಾವಣೆ ಪ್ರಚಾರ ನಡೆಸಿ ವಾಪಸಾಗುತ್ತಿದ್ದ ವೇಳೆ ಗಾಯಗೊಂಡವರನ್ನು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಕನಕಪುರ ರಸ್ತೆಯಲ್ಲಿ ಬರುವಂತಹ ಸಂದರ್ಭದಲ್ಲಿ ಗೂಡ್ಸ್ ವಾಹನ ಮತ್ತು ಬೈಕ್ ಮಧ್ಯೆ ಅಪಘಾತವಾಗಿತ್ತು.

ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ಮುನಿರತ್ನ ತಮ್ಮ ವಾಹನದಲ್ಲಿ ಗಾಯಗೊಂಡವರನ್ನು ಶಂಕರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ಅಶೋಕ್‌ ಹಾಗೂ ಮುನಿರತ್ನ ಅವರ ಮಾನವೀಯ ಕೆಲಸವನ್ನು ನೆರೆದಿದ್ದವರು ಕೊಂಡಾಡಿದದರು.

ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆ, ಪ್ರಚಾರದ ನಡುವೆಯೂ ಸಚಿವ ಅಶೋಕ್‌ ಹಾಗೂ ಮುನಿರತ್ನ ಗಾಯಗೊಂಡವನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಕ್ಕೆ ಸಂತ್ರಸ್ತರ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ