ಆ್ಯಪ್ನಗರ

‘ಲಾಕ್‌ಡೌನ್‌ನಿಂದ ಕೊರೊನಾ ಹೋಗಲ್ಲ’ ಸಿ.ಟಿ ರವಿಗೆ ನೆಟ್ಟಿಗರಿಂದ ತರಾಟೆ

ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ನಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಸಚಿವ ಸಿ.ಟಿ ರವಿಯವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 25 Jun 2020, 10:59 am
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆ ಕಾಣುತ್ತಿದೆ. ಸೋಂಕು ಹರಡದಂತೆ ತಡೆಗಟ್ಟಲು ಮತ್ತೆ ಲಾಕ್‌ಡೌನ್ ಹಾಕಬೇಕು ಎಂಬ ಒತ್ತಡಗಳು ಹೆಚ್ಚಾಗಿತ್ತಿವೆ. ಇದೇ ಸಂದರ್ಭದಲ್ಲಿ ಸಚಿವ ಸಿ.ಟಿ ರವಿ ನೀಡಿರುವ ಹೇಳಿಕೆಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web ct ravi 1


ಗುರುವಾರ ಮಾತನಾಡಿದ್ದ ಸಚಿವ ಸಿ.ಟಿ ರವಿ ಲಾಕ್‌ಡೌನ್‌ನಿಂದ ಕೊರೊನಾ ಹೋಗಲ್ಲ. 70 ದಿನ ಲಾಕ್‌ಡೌನ್ ಮಾಡಲಾಗಿತ್ತು.ಆದರೆ ಕೊರೊನಾ ಹೋಗಿಲ್ಲ. ಅದು ಒಬ್ಬರಿಂದ ಒಬ್ಬರಿಗೆ ಹರಡುತ್ತಲೇ ಇದೆ ಎಂದು ಹೇಳಿದ್ದರು. ಸಚಿವರು ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ ಹಲವರು ಸಿ.ಟಿ ರವಿಯವರಿಗೆ ಇದೀಗ ಜ್ಞಾನೋದಯವಾಯಿತಾ ಎಂದಿದ್ದಾರೆ.

ಕೊರೊನಾ ಅಟ್ಟಹಾಸ: 11 ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಚಿಕಿತ್ಸೆಗೆ ಸರ್ಕಾರ ಆದೇಶ

ಮಂಗಳೂರಿನ ಖ್ಯಾತ ವೈದ್ಯ ಶ್ರೀನಿವಾಸ್‌ ಕಕ್ಕಿಲಾಯ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಿ.ಟಿ ರವಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ. ಮಾರ್ಚ್ 13ರಂದು ಕೇವಲ 11 ಪ್ರಕರಣಗಳಿದ್ದಾಗ ಚಿತ್ರಮಂದಿರ, ಮಾಲ್, ಶಾಲೆ, ಮದುವೆ ಸಮಾರಂಭಗಳು ಎಲ್ಲವನ್ನೂ ಮುಚ್ಚಿ ಹಾಕಿದ ನಿರ್ಧಾರ ಮೂರ್ಖತನದ್ದು, ಕೊರೋನಾ ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾಗ ನಿಮ್ಮ ಕಟ್ಟಾ ಅನುಯಾಯಿಗಳು ವಿರೋಧಿಸಿದ್ದರು.

ಈಗ 10000 ಪ್ರಕರಣಗಳಾಗಿರುವಾಗ 'ಲಾಕ್ ಡೌನ್ ನಿಂದ ಕೊರೊನಾ ಹೋಗಲ್ಲ' ಅಂತ ನೀವೇ ಹೇಳುತ್ತಿದ್ದೀರಿ! ಈ ಮೂರು ತಿಂಗಳಲ್ಲಿ ಲಾಕ್ ಡೌನ್ ನಿಂದ ರಾಜ್ಯದ ಎಲ್ಲ ಜನರಿಗೆ ಆಗಿರುವ ಅಪಾರ ಕಷ್ಟ ನಷ್ಟಗಳಿಗೆ ಹೊಣೆ ಹೊತ್ತು ಪರಿಹಾರ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಲೈವ್ ಅಪ್‌ಡೇಟ್ಸ್: ದೇಶದಲ್ಲಿ ಬುಧವಾರ ಒಂದೇ ದಿನ 16,868 ಪ್ರಕರಣ ಬೆಳಕಿಗೆ!

ಅಂತಹಾ ಆಧಾರರಹಿತವಾದ ನಿರ್ಧಾರಗಳನ್ನು ಮಾಡಿ, ಬಲ ಪ್ರಯೋಗಿಸಿ ಜಾರಿಗೊಳಿಸಿದ್ದಕ್ಕಾಗಿ ಜನತೆಯ ಕ್ಷಮೆ ಕೋರುತ್ತೀರಾ? ಹೀಗೆ ಮುಚ್ಚಿಬಿಡಬೇಕೆಂದು ಸಲಹೆ ನೀಡಿದ್ದ ವೈದ್ಯ ಮಹಾಶಯರ ಮೇಲೆ ಕ್ರಮ ಕೈಗೊಂಡು ಇನ್ನೆಂದೂ ಸರಕಾರದ ಸಭೆಗಳಿಗೆ ಆಹ್ವಾನಿಸದೆ ದೂರವಿಡುತ್ತೀರಾ ಎಂದಿದ್ದಾರೆ. ಈ ಸ್ಟೇಟಸ್‌ನ್ನು ಹಲವರು ಹಂಚಿಕೊಂಡಿದ್ದು ಹಾಗಾದರೆ ಎರಡು ತಿಂಗಳುಗಳ ಕಾಲ ಲಾಕ್‌ಡೌನ್ ಮಾಡುವ ಮೂಲಕ ಆದ ಆರ್ಥಿಕ ಸಂಕಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಎರಡು ಅಭಿಪ್ರಾಯಗಳಿವೆ. ಲಾಕ್‌ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ಪರಿಹಾರ ಎಂದು ಕೆಲವರು ಹೇಳುತ್ತಿದ್ದರೆ, ಲಾಕ್‌ಡೌನ್‌ನಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಅಸಾಧ್ಯ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಆದರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದು ಸದ್ಯದ ಕುತೂಹಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ