ಆ್ಯಪ್ನಗರ

ಮಳೆ ಅವಾಂತರ ಎದುರಿಸಲು ಸರ್ಕಾರ ಸಿದ್ದ, ತಜ್ಞರ ಜೊತೆ ಆರ್‌.ಅಶೋಕ್ ಸಭೆ

ರಾಜ್ಯದಲ್ಲಿ ಮಳೆ ಅವಾಂತರವನ್ನು ಎದುರಿಸಲು ಮುಂಜಾಗರೂಕತಾ ಕ್ರಮವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳು ಕುರಿತಾಗಿ ಕಂದಾಯ ಸಚಿವ ಆರ್‌. ಅಶೋಕ್ ತಜ್ಞರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ.

Vijaya Karnataka Web 22 May 2020, 1:54 pm
ಬೆಂಗಳೂರು: ರಾಜ್ಯದಲ್ಲಿ ಮಳೆ ಅವಾಂತರವನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು ಮುಂಜಾಗರೂಕತಾ ಕ್ರಮವಾಗಿ ಮಳೆ ಅವಾಂತರ ಎದುರಿಸಲು ಸರ್ಕಾರ ಸಿದ್ಧತೆಳನ್ನು ಮಾಡುಕೊಳ್ಳುತ್ತಿದೆ ಎಂದರು.
Vijaya Karnataka Web r ashok


ಮಳೆ ಅವಾಂತರವನ್ನು ಎದುರಿಸಲು ಕೇಂದ್ರ ಸರ್ಕಾರ ಈಗಾಗಲೇ ಮುಂಗಡವಾಗಿ ಹಣ ಬಿಡುಗಡೆ ಮಾಡಿದೆ. ಸ್ಟೇಟ್‌ ಡಿಸಾಸ್ಟರ್‌ ಮಿಟಿಗೇಷನ್ ಫಂಡ್ ಅಡಿಯಲ್ಲಿ 201.8 ಕೋಟಿ ಬಿಡುಗಡೆಗೊಳಿಸಿದೆ. ಈ ಹಣವನ್ನು ಬಳಸಿಕೊಂಡು ಮಳೆಯಿಂದ ಅವಾಂತರ ಆಗುವ ಪ್ರದೇಶಗಳಲ್ಲಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು ಲಾಕ್‌ಡೌನ್‌ Live: ನಗರದಲ್ಲಿ ಐವರಿಗೆ ಕೊರೊನಾ; ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆ

ಇದೇ ವೇಳೆ ಕಳೆದ ವರ್ಷ ಮಳೆಯಿಂದಾಗಿರುವ ಹಾನಿಯ ಕುರಿತಾಗಿ ಮಾಹಿತಿ ನೀಡಿದ ಅವರು, ಮಳೆಹಾನಿಯಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು 32, 482 ಮನೆ ನಿರ್ಮಾಣಕ್ಕೆ ಹಣವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. 32,424 ಮನೆಗಳಿಗೆ 1 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ.

11,035 ಮನೆಗಳಿಗೆ 2 ಲಕ್ಷ ಹಣವನ್ನು ನೀಡಲಾಗಿದೆ. 4,572 ಕುಟುಂಬಗಳಿಗೆ 3 ಲಕ್ಷ ಹಣವನ್ನು ನೀಡಲಾಗಿದೆ ಹಾಗೂ ಸಂಪೂರ್ಣ ಹಾನಿಗೊಂಡ 47 ಮನೆಗಳ ನಿರ್ಮಾಣಕ್ಕೆ 5 ಲಕ್ಷವನ್ನು ಸರ್ಕಾರ ನೀಡಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ