ಆ್ಯಪ್ನಗರ

ದೇವೆಗೌಡರು-ಕುಮಾರಸ್ವಾಮಿ-ರೇವಣ್ಣ ರೈತರಾ?, ನೇಗಿಲು ಹಿಡಿದು ಎಷ್ಟು ವರ್ಷವಾಯ್ತು?: ಆರ್‌ ಅಶೋಕ್‌ ಪ್ರಶ್ನೆ

ಸದ್ಯ ನಡೆಯುತ್ತಿರುವ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ ಕಂದಾಯ ಸಚಿವ ಆರ್‌ ಅಶೋಕ್, ‌ ದೇವೆಗೌಡರು ರೈತರಾ? ಕುಮಾರಸ್ವಾಮಿ ರೈತರಾ? ರೇವಣ್ಣ ರೈತರಾ? ಊರು ಬಿಟ್ಟು ಎಷ್ಟು ವರ್ಷವಾಯ್ತು? ನೇಗಿಲು ಹಿಡಿದು ಎಷ್ಟು ವರ್ಷವಾಯ್ತು ಎಂದು ಎಚ್‌ಡಿಡಿ ಕುಂಟುಂಬದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು

Vijaya Karnataka Web 11 Dec 2020, 2:14 pm
ಬೆಂಗಳೂರು: ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರ ಮೂರು ಮಸೂದೆಗಳನ್ನ ಜಾರಿಗೊಳಿಸುವ ಕೆಲಸ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 79 ಎಬಿ ತೆಗಿಬೇಕೋ ಬೇಡವೋ ಎಂಬ ಚರ್ಚೆಯನ್ನು ಆರಂಭ ಮಾಡಿದ್ದೇ ಕಾಂಗ್ರೆಸ್‌ನವರು, ಇದರ ಮೂಲ‌ ಪುರುಷರೇ ಕಾಂಗ್ರೆಸ್‌ನವರು. ಇದೀಗ ಕಾಂಗ್ರೆಸ್‌ನವರು ಬೀದಿ ಬೀದಿಯಲ್ಲಿ 79 ಎಬಿ ತೆಗೆಯಬಾರದು ಅಂತ ಬಾಯಿ ಬಡಿದುಕೊಳ್ಳುತ್ತಿದ್ದಾರೆ.
Vijaya Karnataka Web R Ashok


ಆದರೆ ಇದನ್ನು ಶುರು ಮಾಡಿದ್ದು ಕಾಂಗ್ರೆಸ್‌ನವರು ಎಂದು ಆರೋಪಿಸಿದ ಆರ್‌ ಅಶೋಕ್‌ ಈ ಕಾಯಿದೆಯನ್ನು ಪರಿಷ್ಕರಿಸಲು ಅವರೇ ಸಮಿತಿಯನ್ನು ರಚಿಸಿದ್ದರು ಎಂದರು. ಇನ್ನು ನಾವು ಮಂಡಿಸಿರುವ ಕಾಯಿದೆ, ರೈತರ ಪರವಾಗಿದೆ. ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್‌ನ ಪಿತೂರಿ. ಇದು ಕಾಂಗ್ರೆಸ್ ಬೆಂಬಲಿತ ಹೋರಾಟ. ಇದರ ಹಿಂದೆ ನಿಂತಿರುವವರು ಕಾಂಗ್ರೆಸ್‌ನವರು. ಹೋರಾಟ ಮಾಡ್ತಿರೋರು ಯಾರು ರೈತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಅಶೋಕ್‌, ದೇವೆಗೌಡರು ರೈತರಾ? ಕುಮಾರಸ್ವಾಮಿ ರೈತರಾ? ರೇವಣ್ಣ ರೈತರಾ? ಊರು ಬಿಟ್ಟು ಎಷ್ಟು ವರ್ಷವಾಯ್ತು? ನೇಗಿಲು ಹಿಡಿದು ಎಷ್ಟು ವರ್ಷವಾಯ್ತು ಎಂದು ಎಚ್‌ಡಿಡಿ ಕುಂಟುಂಬದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಭೂ ಸುಧಾರಣೆ ಆಕ್ಟ್ ನಲ್ಲಿ 13 ಎಕರೆ ಕೊಂಡುಕೊಳ್ಳುವ ಅವಕಾಶ ಇದೆ. 13 ಎಕರೆ ಖರೀದಿ ಮಾಡಲು ಯಾರೂ ಮಲ್ಟಿನ್ಯಾಷನಲ್ ಕಂಪೆನಿಗಳು, ದೊಡ್ಡ ಕುಳಗಳು ಬರುವುದಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌: ಡಿಕೆ ಶಿವಕುಮಾರ್‌

ನೀರಾವರಿ ಜಮೀನಿನಲ್ಲಿ ಬೇರೆ ರೀತಿಯ ಚಟುವಟಿಕೆ ಮಾಡುವ ಹಾಗಿಲ್ಲ. ದಲಿತರ ಜಮೀನಿನನ್ನು ಯಾರೂ ತೆಗೆದುಕೊಳ್ಳಲು ಅವಕಾಶ ಇಲ್ಲ. ಉಳುವವನೇ ಭೂಮಿ ಒಡೆಯಗೂ, ಇದಕ್ಕೂ ಸಂಬಂಧ ಇಲ್ಲ. ಉಳುವವನೆ ಭೂಮಿ ಒಡೆಯ ಕಾಯಿದೆ ಹಾಗೆ ಇದೆ, ನಾವು ಅದನ್ನು ಮುಟ್ಟಿಲ್ಲ ಎಂದು ಕೃಷಿ ಕಾಯಿದೆ ಬಗ್ಗೆ ಅಶೋಕ್‌ ಸ್ಪಷ್ಟನೆ ನೀಡಿದರು.

ಇನ್ನು ಸಿದ್ದರಾಮಯ್ಯ ರೈತರ ದಾರಿ ತಪ್ಪಿಸೋದು ಬೇಡ. 79 ಎಬಿನಲ್ಲಿ ಇಲ್ಲಿಯವರೆಗೂ ರೈತ ತನ್ನದೇ ಜಮೀನನ್ನು ಮಾರುವ ಹಾಗಿರಲಿಲ್ಲ. ಆದರೆ ಇದೀಗ ಅವನ ಸ್ವಂತ ಜಮೀನನ್ನ ಅವನು ಮಾರಾಟ ಮಾಡುವ ಸ್ವಾತಂತ್ರ ಸಿಕ್ಕಿದೆ. ಮಧ್ಯವರ್ತಿಗಳ ಕಾಟ ಇಲ್ಲದೆ ಮಾರಬಹುದಾಗಿದೆ ಎಂದು ಅಶೋಕ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ