ಆ್ಯಪ್ನಗರ

ಬಂದ್ ಪದ್ದತಿ ಕುರಿತು ಪ್ರಾಮಾಣಿಕ ಅವಲೋಕನದ ಅಗತ್ಯವಿದೆ ಎಂದ್ರು ಸುರೇಶ್ ಕುಮಾರ್‌, ನೆಟ್ಟಿಗರ ಪ್ರತಿಕ್ರಿಯೆ ಏನು?

ಬಂದ್‌ ಪದ್ದತಿ ಕುರಿತಾಗಿ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಚರ್ಚೆಗೆ ಗ್ರಾಸವಾಗಿದೆ. ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಪರ ಹಾಗೂ ವಿರೋಧವಾಗ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka Web 6 Dec 2020, 9:45 am
ಬೆಂಗಳೂರು: ಮರಾಠ ಅಭಿವದ್ಧಿ ನಿಗಮ ರಚನೆ ವಿರೋಧಿಸಿ ಶನಿವಾರ ನಡೆದ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ‘ಬಂದ್ ಪದ್ದತಿ ಕುರಿತು ಪ್ರಾಮಾಣಿಕ ಅವಲೋಕನದ ಅಗತ್ಯವಿದೆ’ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Vijaya Karnataka Web minister s suresh kumar reaction on karnataka bandh
ಬಂದ್ ಪದ್ದತಿ ಕುರಿತು ಪ್ರಾಮಾಣಿಕ ಅವಲೋಕನದ ಅಗತ್ಯವಿದೆ ಎಂದ್ರು ಸುರೇಶ್ ಕುಮಾರ್‌, ನೆಟ್ಟಿಗರ ಪ್ರತಿಕ್ರಿಯೆ ಏನು?


ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ “ಬಂದ್ ಕರೆ ಕೊಡುವ ಪದ್ದತಿ ಕುರಿತು ಒಂದು ಪ್ರಾಮಾಣಿಕ ಅವಲೋಕನದ ಅಗತ್ಯ ಇದೆ. ಅದರಿಂದಾಗುವ ಸಾಧಕ ಬಾಧಕಗಳ ಬಗ್ಗೆ. ಹೋರಾಟ ಸರಿ ಪ್ರತಿಭಟನೆಯ ಮಾರ್ಗ? ಎಂಬ ಸ್ಟೇಟಸ್‌ ಹಾಕಿದ್ದಾರೆ. ಅಲ್ಲದೆ ನನ್ನದು ಮೊದಲಿನಿಂದಲೂ ಇದೇ ಅಭಿಪ್ರಾಯ. ಆ ದಿನದ ದುಡಿಮೆಯಿಂದಲೇ ಬದುಕ ಬೇಕಾದವರಿಗೆ ಈ ಬಂದ್ ತಂದು ಕೊಡುವ ಸಂಕಷ್ಟ ಅಷ್ಟಿಷ್ಟಲ್ಲ ಎಂದೂ ಉಲ್ಲೇಖ ಮಾಡಿದ್ದಾರೆ.


ಕರ್ನಾಟಕ ಬಂದ್ ನಡೆದೇ ನಡೆಯುತ್ತೆ, ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ, ವಾಟಾಳ್ ಗುಡುಗು

ಸುರೇಶ್ ಕುಮಾರ್ ವ್ಯಕ್ತಪಡಿಸಿರುವ ಅಭಿಪ್ರಾಯ ಪರ ಹಾಗೂ ವಿರೋಧ ಪ್ರತಿಕ್ರಿಯೆಯನ್ನು ನೆಟ್ಟಿಗರು ನೀಡಿದ್ದಾರೆ. ಇದರ ಬಗ್ಗೆ ಮೊದಲು ನಿಮ್ಮ ಪಕ್ಷ ಮತ್ತು ನಿಮ್ಮ ಸಂಘಟನೆಯವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅವರು ಮಾಡಿದ ಬಂದ್ ಗೆ ಲೆಕ್ಕವಿಲ್ಲ..! ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೈಕೋರ್ಟ್ ಹೇಳಿಕ ಹಾಗೆ ಆ ನಷ್ಟವನ್ನು ಬಂದ್‌ ಕರೆ ಕೊಟ್ಟ ಸಂಘಟಕರಿಂದ ಭರಿಸಬೇಕು. ಸರ್ಕಾರ ಹೈಕೋರ್ಟ್ ಆದೇಶವನ್ನು ಪಾಲಿಸಲು ಮುಂದಾಗಬೇಕು ಎಂದು ಸುರೇಶ್ ಕುಮಾರ್ ಬೆಂಬಲಿಸಿ ಮತ್ತೊಮ್ಮ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸಿಎಂ ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ! ವಾಟಾಳ್‌ ವಿರುದ್ಧ ರೇಣುಕಾಚಾರ್ಯ ಗರಂ

ಮುಂದೆ ನಿಮ್ಮ ಪಕ್ಷ, ಅದರ ಸಂಘಟನೆಗಳೇನಾದರೂ‌ ಬಂದ್ ‌ಕರೆ ಕೊಟ್ಟಾಗ ಬಹಿರಂಗವಾಗಿ ವಿರೋಧಿಸಿ ಎಂದು ವಿಶ್ವ ಜಿ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಹೀಗೆ ಸುರೇಶ್ ಕುಮಾರ್ ಬಂದ್‌ ಪದ್ದತಿ ವಿರೋಧಿಸಿ ಹಾಕಿದ ಸ್ಟೇಟಸ್‌ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಂದ್‌ ಪದ್ದತಿಯ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿರುವುದು ಇಂದು ನಿನ್ನೆಯದ್ದಲ್ಲ. ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಬಂದ್‌ ಕರೆ ಕೊಟ್ಟಿರುವುದಲ್ಲದೆ ಅದಕ್ಕೆ ಬೆಂಬಲವನ್ನು ನೀಡಿವೆ. ಪ್ರಜಾಪ್ರಭುತ್ವದಲ್ಲಿ ಬಂದ್‌, ಪ್ರತಿಭಟನೆ, ಹೋರಾಟಕ್ಕೆ ಅವಕಾಶವಿದೆ. ಆದರೆ ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳುವುದು ಹಾಗೂ ಬಲವಂತದ ಬಂದ್‌ಗೆ ಪ್ರಯತ್ನಿಸುವುದು ಸರಿಯಾದ ದಾರಿಯಲ್ಲ.

ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಯೋಚಿಸಬೇಕಿದೆ. ಪ್ರತಿಭಟನೆ, ಹೋರಾಟದ ಪರ್ಯಾಯ ಸ್ವರೂಪಗಳನ್ನು ಕಂಡುಕೊಳ್ಳಬೇಕಿದೆ. ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಬೇಕಾದ ಅಗತ್ಯ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ