ಆ್ಯಪ್ನಗರ

ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ, ನಿಮ್ಮ ಪ್ರೀತಿಗೆ ಸದಾ ಋಣಿ: ಎಸ್‌.ಟಿ.ಸೋಮಶೇಖರ್‌

ಕೊರೊನಾ ವೈರಸ್‌ಗೆ ತುತ್ತಾಗಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಗುಣಮುಖಕ್ಕೆ ಪ್ರಾರ್ಥಿಸಿದ ಎಲ್ಲರನ್ನೂ ಸ್ಮರಿಸಿಕೊಂಡಿರುವ ಸೋಮಶೇಖರ್‌ ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿ ಎಂದು ಹೇಳಿದ್ದಾರೆ.

Vijaya Karnataka Web 10 Aug 2020, 5:00 pm
ಬೆಂಗಳೂರು: ಕೊರೊನಾ ವೈರಸ್‌ಗೆ ತುತ್ತಾಗಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿ ಎಂದು ಎಲ್ಲರ ಪ್ರಾರ್ಥನೆಯನ್ನು ಸ್ಮರಿಸಿದ್ದಾರೆ.
Vijaya Karnataka Web minister st somashekar recovered from coronavirus
ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ, ನಿಮ್ಮ ಪ್ರೀತಿಗೆ ಸದಾ ಋಣಿ: ಎಸ್‌.ಟಿ.ಸೋಮಶೇಖರ್‌


ಈ ಬಗ್ಗೆ ಪ್ರಕಟಣೆ ನೀಡಿರುವ ಸಚಿವ ಎಸ್‌.ಟಿ.ಸೋಮಶೇಖರ್‌, ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‌ ಮಹಾಮಾರಿಯು ಎ ಸಿಂಪ್ಟಮ್ಯಾಟಿಕ್ ರೂಪದಲ್ಲಿ ನನಗೂ ಅಂಟಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ 14 ದಿನಗಳಿಂದ ಕ್ವಾರಂಟೈನ್ ನಲ್ಲಿರಬೇಕಾಯಿತು. ಇದೇ ವೇಳೆ ನನ್ನ ಪುತ್ರ ನಿಶಾಂತ್ ಸೋಮಶೇಖರ್‌ಗೂ ಸಹ ಸೋಂಕು ತಗುಲಿತ್ತು ಎಂದು ಹೇಳಿದ್ದಾರೆ.

ಈಗ ಇಬ್ಬರೂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಪುನಃ ಸೋಮವಾರ ಪರೀಕ್ಷೆಗೊಳಪಟ್ಟಿದ್ದೇವು. ಈಗ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ತಗ್ಗದ ಕೊರೊನಾ ವೇಗ..! 5,985 ಪಾಸಿಟಿವ್‌ ಕೇಸ್‌, ಲಕ್ಷದ ಗಡಿಯಲ್ಲಿ ಗುಣಮಖ

ನನಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಸಚಿವರು, ಶಾಸಕರು, ಆಪ್ತರು, ಹಿತೈಷಿಗಳು, ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ನೋವು ವ್ಯಕ್ತಪಡಿಸಿದ್ದಲ್ಲದೆ, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೀರಿ. ನಿಮ್ಮ ಈ ಪ್ರಾರ್ಥನೆ ಫಲವಾಗಿ ನಾನಿಂದು ಗುಣಮುಖನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುವೆ. ಮತ್ತೆ ಜನಸೇವೆಯಲ್ಲಿ ತೊಡಗಿಕೊಳ್ಳುವೆ ಎಂದು ಎಲ್ಲರನ್ನೂ ಸೋಮಶೇಖರ್‌ ಸ್ಮರಿಸಿದ್ದಾರೆ.

ರಾಜ್ಯದಲ್ಲಿ ತಗ್ಗದ ಕೊರೊನಾ ವೇಗ..! ಮತ್ತೆ 7 ಸಾವಿರದತ್ತ ಸೋಂಕು; ಒಂದೇ ದಿನ ಭರ್ತಿ 101 ಸಾವು

ಇನ್ನು, ವಾರದ ಹಿಂದೆ ಸೋಂಕಿಗೆ ತುತ್ತಾಗಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ಕೊರೊನಾ ವೈರಸ್‌ನಿಂದ ಗುಣಮುಖರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲ್‌ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಾಗಾಲೋಟ..! 7 ಸಾವಿರ ಸಮೀಪ ಹೊಸ ಕೇಸ್‌; ಚೇತರಿಕೆಯಲ್ಲಿ ಏರಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ