ಆ್ಯಪ್ನಗರ

ಶಾ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಬಿಎಸ್‌ವೈ

ಜನಾರ್ದನ ರೆಡ್ಡಿಯವರ ಬಗ್ಗೆ ಅಮಿತ್‌ ಶಾ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಎಸ್‌ಯಡಿಯೂರಪ್ಪ ತಿಳಿಸಿದ್ದಾರೆ...

Vijaya Karnataka 23 Apr 2018, 5:00 am
ವಿಕಸುದ್ದಿಲೋಕ ಬೆಂಗಳೂರು
Vijaya Karnataka Web b s yaddyurappa

ಜನಾರ್ದನ ರೆಡ್ಡಿಯವರ ಬಗ್ಗೆ ಅಮಿತ್‌ ಶಾ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆದ 'ನವ ಬೆಂಗಳೂರಿನಿಂದ ನವ ಭಾರತ ನಿರ್ಮಾಣ ಚರ್ಚೆ'ಯಲ್ಲಿ ಮಾತನಾಡಿದ ಅವರು, ''ಬಳ್ಳಾರಿ, ಚಿತ್ರದುರ್ಗ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಾರ್ದನ ರೆಡ್ಡಿಯವರಿಗೆ ಪ್ರಭಾವವಿದೆ. ಬಿಜೆಪಿ ಅಭ್ಯರ್ಥಿಗಳನ್ನು ಈ ಭಾಗದಲ್ಲಿ ಗೆಲ್ಲಿಸಿಕೊಡುವುದಾಗಿ ಅವರು ಹೇಳಿದ್ದಾರೆ. ಅಮಿತ್‌ ಶಾ ಅವರು ಜನಾರ್ದನ ರೆಡ್ಡಿಯವರಿಗೆ ಟಿಕೆಟ್‌ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ,'' ಎಂದು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ನಾಗರಿಕರ ಪ್ರಶ್ನೆಗೆ ಉತ್ತರಿಸಿದ ಅವರು ' ಭ್ರಷ್ಟಾಚಾರ ಹಾಗೂ ಲಂಚಗೂಳಿತನಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸರಿಯಾಗಿದ್ದರೆ ಸಂಪುಟದ ಸಚಿವರು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿರುತ್ತಾರೆ. ನೀವೇ ಭ್ರಷ್ಟರಾಗಿದ್ದೀರಿ. ಇದಕ್ಕೆ ನೀವೊಮ್ಮೆ ಕಟ್ಟಿದ 70 ಲಕ್ಷ ರೂ. ಮೌಲ್ಯದ ವಾಚೇ ಸಾಕ್ಷಿ. ಇದು ಎಲ್ಲಿಂದ ಬಂತು ಎಂಬ ನಾಗರಿಕರ ಪ್ರಶ್ನೆಗೆ ಈಗಲಾದರೂ ಉತ್ತರಿಸಿ. ಇಲ್ಲವಾದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ತನಿಖೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ