ಆ್ಯಪ್ನಗರ

ಶಾಸಕ ಕುಮಠಳ್ಳಿ ಹೈಕೋರ್ಟ್‌ಗೆ ಹಾಜರಿ: ನಾಪತ್ತೆ ಆಗಿಲ್ಲವೆಂದು ಪ್ರಮಾಣ ಪತ್ರ

ನಾಪತ್ತೆಯಾಗಿದ್ದಾರೆಂದು ಸಲ್ಲಿಸಲಾದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಸಂಬಂಧ ಬುಧವಾರ ಶಾಸಕ ಮಹೇಶ್‌ ಕುಮಠಳ್ಳಿ ಖುದ್ದು ಹಾಜರಾಗಿ ತಮ್ಮನ್ನು ಯಾರೂ ...

Vijaya Karnataka 21 Feb 2019, 5:00 am
ಬೆಂಗಳೂರು: ನಾಪತ್ತೆಯಾಗಿದ್ದಾರೆಂದು ಸಲ್ಲಿಸಲಾದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಸಂಬಂಧ ಬುಧವಾರ ಶಾಸಕ ಮಹೇಶ್‌ ಕುಮಠಳ್ಳಿ ಖುದ್ದು ಹಾಜರಾಗಿ ತಮ್ಮನ್ನು ಯಾರೂ ಒಲವಂತವಾಗಿ ಬಂಧಿಸಿಟ್ಟಿಲ್ಲವೆಂದು ಹೈಕೋರ್ಟ್‌ನಲ್ಲಿ ಹೇಳಿದರು.
Vijaya Karnataka Web 29387126_585364828463223_4964483947904892928_n-1548396961


ಅವರ ಹೇಳಿಕೆಯನ್ನು ದಾಖಲಿಸಿಕೊಂಡು ನ್ಯಾಯಪೀಠ, ಆ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಪ್ರಮೋದ್‌ ದಯಾನಂದ್‌ ಹಿರೇಮನಿ ಸಲ್ಲಿಸಿದ್ದ ಅರ್ಜಿ ನ್ಯಾ. ಕೆ.ಎನ್‌. ಫಣೀಂದ್ರ ಮತ್ತು ನ್ಯಾ. ಕೆ.ನಟರಾಜನ್‌ ಅವರಿದ್ದ ವಿಭಾಗೀಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.

''ಆಗ ಶಾಸಕರು ಹಾಜರಾಗಿ ಪ್ರಮಾಣಪತ್ರ ಸಲ್ಲಿಸಿ ತನ್ನನ್ನು ಯಾರೂ ಅಕ್ರಮ ಬಂಧನದಲ್ಲಿಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಬೆಳಗಾವಿ ಬೆಂಗಳೂರು ನಡುವೆ ಓಡಾಡಿಕೊಂಡಿದ್ದೇನೆ. ಕ್ಷೇತ್ರದ ಮತದಾರರೊಂದಿಗೆ ಮತ್ತು ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ನಾನು ತಲೆಮೆರಸಿಕೊಂಡಿದ್ದೇನೆ ಎಂಬುದೆಲ್ಲಾ ಸುಳ್ಳು,'' ಎಂದು ಹೇಳಿದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌, ''ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಬೇಕೆಂದು ಕೋರಿರುವುದು ಪ್ರಚಾರಕ್ಕೆ ಹಾಕಿದ್ದು, ಕೋರ್ಟ್‌ ಸಮಯ ಹಾಳುಮಾಡಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಭಾರಿ ದಂಡ ವಿಧಿಸಬೇಕು,'' ಎಂದು ಕೋರಿದರು. ಆಗ ಮನವಿಯನ್ನು ಗಂಭಿರವಾಗಿ ಪರಿಗಣಿಸಿದ ಪೀಠ ಆ ಕುರಿತಂತೆ ಇದೇ 27ರಂದು ಸೂಕ್ತ ಆದೇಶ ಪ್ರಕಟಿಸುವುದಾಗಿ ವಿಚಾರಣೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ